Kushtagi: ಬಸ್ ಹರಿದು ಮಹಿಳೆ ಮೃತ್ಯು
ಬಾಗಿದ ಬೆನ್ನಿನ ಮಹಿಳೆ ನಡೆಯುತ್ತಿದ್ದುದು ಗಮನಿಸದ ಚಾಲಕ
Team Udayavani, Sep 21, 2023, 6:53 PM IST
ಕುಷ್ಟಗಿ: ಬಸ್ಸಿನ ಮುಂದೆ ಬಾಗಿದ ಬೆನ್ನಿನ ಮಹಿಳೆ ನಡೆಯುತ್ತಿರುವುದು ಗಮನಿಸದೇ ಚಾಲಕ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಬಸ್ ಮಹಿಳೆಯೊಬ್ಬಳ ಮೇಲೆ ಹರಿದು ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ನಡೆದಿದೆ.
ಶಾರವ್ವ ದುಗಲದ್ (45) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಕುಷ್ಟಗಿಯಿಂದ ಬಸ್ಸು ಹಿರೇಬನ್ನಿಗೋಳ ಗ್ರಾಮಕ್ಕೆ ಬಂದಾಗ ಶಾರಮ್ಮ ಬಸ್ ನಿಂದ ಇಳಿದು ಬಸ್ ನ ಮುಂದುಗಡೆ ಹೋಗುತ್ತಿದ್ದರು. ಅದೇ ವೇಳೆ ನಾಲ್ವರು ಪ್ರಯಾಣಿಕರು ಬಸ್ ಹತ್ತುವ ಸಂಧರ್ಭದಲ್ಲಿ ಚಾಲಕನ ಲಕ್ಷ, ನಾಲ್ವರು ಪ್ರಯಾಣಿಕರತ್ತ ಹರಿಸಿದ್ದಾರೆ. ಬಸ್ಸಿನ ಮುಂದೆ ಇದ್ದ ಶಾರವ್ವಳಿಗೆ ಬಸ್ ತಾಗಿ ಮಹಿಳೆ ಸಾವೀಗೀಡಾಗಿದ್ದಾಳೆ. ಶಾರವ್ವಳ ಬೆನ್ನು ಬಾಗಿ ನಡೆದಿರುವುದು ಚಾಲಕನಿಗೆ ಗೊತ್ತಾಗದೇ ಚಾಲನೆ ಮಾಡಿರುವುದು ಈ ದುರಂತಕ್ಕೆ ಕಾರಣ. ಶಾರಮ್ಮಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಷ್ಟಗಿ ಶವಗಾರಕ್ಕೆ ತರಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ