Kushtagi: ಹಕ್ಕಿಗಳ ಕಾಟಕ್ಕೆ ಬೇಸತ್ತ ರೈತ ಖಾಲಿ ಬೀಯರ್ ಬಾಟಲ್ ಅಳವಡಿಸಿ ಪ್ರಯೋಗ
Team Udayavani, Aug 6, 2023, 11:48 AM IST
ಕುಷ್ಟಗಿ: ಬೆಳೆದು ನಿಂತ ಫಸಲಿಗೆ ಹಕ್ಕಿ ಕಾಟ ತಪ್ಪಿಸಲು ರೈತರೊಬ್ಬರ ಖರ್ಚಿಲ್ಲದ ಖಾಲಿ ಬೀಯರ್ ಬಾಟಲಿಯ ಪ್ರಯೋಗ ಪರಿಣಾಮಕಾರಿಯಾಗಿದೆ.
ಕಡೇಕೊಪ್ಪ ಗ್ರಾಮದ ರೈತ ಬಸವರಾಜ್ ವ್ಹಿ ಜೀಗೇರಿ ಎಂಬವರು ಮುಂಗಾರು ಹಂಗಾಮಿನ ಸಜ್ಜೆ ಬೆಳೆದಿದ್ದಾರೆ. ಸದ್ಯ ಹಾಲ್ದೆನೆಯ ಕಾಳು ಕಟ್ಟಿದ್ದು ಹಕ್ಕಿಕಾಟ ಅತಿಯಾಗಿತ್ತು.
ಹಕ್ಕಿಗಳನ್ನು ನಿಯಂತ್ರಿಸಲು ತಟ್ಟೆಯ ಸದ್ದು ಮಾಡಿದ್ದು ಆಯ್ತು, ಕೂಗಾಡಿದ್ದು ಆಯ್ತು. ವಿವಿಧ ರೀತಿಯಾಗಿ ಪ್ರಯತ್ನಗಳನ್ನು ಮಾಡಿದರೂ ಹಕ್ಕಿಗಳು ನಿಯಂತ್ರಣಕ್ಕೆ ಬರಲಿಲ್ಲ.
ಹೀಗಾಗಿ ಸುಲಭ ಉಪಯವಾಗಿ ಖಾಲಿ ಬೀಯರ್ ಬಾಟಲಿ ತೆಗೆದುಕೊಂಡು ಮರದ ಟೊಂಗೆಗೆ ಜೋತು ಬಿಟ್ಟಿದ್ದಾರೆ. ಮರಗಳಿಲ್ಲದ ಕಡೆ ಬೊಂಬು ನೆಟ್ಟು ಖಾಲಿ ಬೀಯರ್ ಬಾಟಲಿ ಜೋತು ಬಿಟ್ಟಿದ್ದಾರೆ. ಈ ಪ್ರಯೋಗ ಯಶಸ್ವಿಯಾಗುತ್ತಿದ್ದು, ಗಾಳಿಗೆ ಬಾಟಲಿ ಅಲ್ಲಾಡಿ ಒಂದಕ್ಕೊಂದು ಸ್ಪರ್ಷಿಸಿ ಟನ್ ಟನ್ ಎಂಬ ಸದ್ದಿಗೆ ಹಕ್ಕಿಗಳು ಆ ಕಡೆ ಬರದೆ ಾದರ ಉಪಟಳ ಕಡಿಮೆಯಾಗಿದೆ.
ಕಡೇಕೊಪ್ಪ ಗ್ರಾಮದ ಈ ರೈತನ ಪ್ರಯೋಗ ಗಮನ ಸೆಳೆದ ಹಿನ್ನೆಲೆಯಲ್ಲಿ ಇತರೇ ರೈತರು ಹಳೆ ಖಾಲಿ ಬಾಟಲಿ ಖರ್ಚಿಲ್ಲದ ಪ್ರಯೋಗ ಅಳವಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ