ಕುಷ್ಟಗಿ: ಪಕ್ಷಿಗಳಿಗೆ ಕಾಳು, ನೀರಿಟ್ಟು ಕನಸು ಫೌಂಡೇಷನ್ ಮಾನವೀಯ ಕಾರ್ಯ
Team Udayavani, Apr 8, 2022, 2:11 PM IST
ಕುಷ್ಟಗಿ: ತಾಲ್ಲೂಕಿನ ಕನಸು ಫೌಂಡೇಷನ್ ಸಮಾನ ಮನಸ್ಕ ಯುವಕರಿಂದ ಬೇಸಿಗೆಯಲ್ಲಿ ಒಣಗುವ ಸ್ಥಿತಿಯಲ್ಲಿರುವ ಗಿಡಗಳಿಗೆ ನೀರುಣಿಸುವುದು, ಬಿಸಿಲಿಗೆ ನಿತ್ರಾಣವಾಗುವ ಪಕ್ಷಿಗಳಿಗೆ ಕಾಳುಗಳನ್ನು ಹಾಕಿ, ನೀರಿನ ವ್ಯವಸ್ಥೆ ಕಲ್ಪಿಸುವ ಮಾನವೀಯ ಕಾರ್ಯ ಅನುಕರಣನೀಯವೆನಿಸಿದೆ.
ದಿನೇ ದಿನೇ ತಾಪಮಾನದಲ್ಲಿ ಏರಿಕೆ ಕಂಡಿದ್ದು, ಜಲಮೂಲಗಳಲ್ಲಿ ನೀರಿಲ್ಲ. ಮನುಷ್ಯರಿಗೆ ಕುಡಿಯುವ ನೀರಿನ ತಾತ್ವರ ಶುರುವಾಗಿದ್ದು ಈ ಪರಿಸ್ಥಿತಿಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿಗಾಗಿ ಅಲೆದಾಡುವುದನ್ನು ತಪ್ಪಿಸಲು ತಳವಗೇರಾ ಗ್ರಾಮದ ಕನಸು ಫೌಂಡೇಷನ್ ವತಿಯಿಂದ 11 ಯುವಕರು ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ಕನಸು ಫೌಂಡೇಷನ್ ನಿಂದ ಗ್ರಾಮದ ಆದರ್ಶ ವಿದ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ ಯುವಕರ ಸ್ವಯಂ ಪ್ರೇರಿತ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಯುವಕರ ಕಾರ್ಯ ಮುಂದುವರಿದು, ಇದೀಗ ಟ್ರ್ಯಾಕ್ಟರ್ ಮಾಲೀಕರ ಸಂಘದವರು ಸಾಥ್ ನೀಡಿರುವುದು ಗಮನಾರ್ಹ ಎನಿಸಿದೆ.
ಬೇಸಿಗೆಯ ಈ ಸಂದರ್ಭದಲ್ಲಿ ತಮ್ಮ ಟ್ರ್ಯಾಕ್ಟರ್ ಗಳ ಎಂಜಿನ್ ಉಚಿತ ಸೇವೆಯಾಗಿ ನೀಡಿದ್ದು ಇದನ್ನು ಬಳಸಿಕೊಂಡ ಕನಸು ಫೌಂಡೇಷನ್ ಯುವಕರು, ತಾವು ನೆಟ್ಟಿರುವ ಗಿಡಗಳಿಗೆ ನೀರುಣಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದರೆ. ಅಲ್ಲದೇ ಪಕ್ಷಿಗಳಿಗೆ ನೀರು, ಅಹಾರಕ್ಕಾಗಿ ಅಲೆಯದೇ ಇರಲು ಅಲ್ಲಲ್ಲಿ ಗಿಡ, ಮರಗಳಿಗೆ ನೀರು, ಕಾಳುಗಳಿರುವ ಬಟ್ಟಲು ನೇತು ಹಾಕಿ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ.
ಇವರ ಕಾರ್ಯಗಳಿಗೆ ಪ್ರೇರಿತರಾದ ಸ್ಥಳೀಯರಾದ ಶ್ರೀ ಶರಣಬಸವೇಶ್ವರ ವೆಲ್ಡಿಂಗ್ ಶಾಪ್ ನವರು ಬಸ್ ತಂಗುದಾಣದ ಬಳಿ ನೀರಿನ ಅರವಟ್ಟಿಗೆ ಸ್ಥಾಪಿಸಿ ತಮ್ಮ ಸೇವೆ ನೀಡಿರುವುದು ಅನುಕರಣೀಯವೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ