Kushtagi ಕಳೆದ 10 ವರ್ಷದಿಂದ ತಾಯಿಯ ನಿರೀಕ್ಷೆಯಲ್ಲಿ ಯುವಕ
Team Udayavani, Aug 18, 2023, 8:41 PM IST
ಕುಷ್ಟಗಿ: ತಾಲೂಕಿನ ಗುಮಗೇರಾದ ಯುವಕನ ಹೆತ್ತವ್ವ ಯಾವ ಕೆಟ್ಟ ಘಳಿಗೆ ಏನೋ ಗೊತ್ತಿಲ್ಲ ಕಳೆದ 10 ವರ್ಷದ ಹಿಂದೆ ಮನೆ ಬಿಟ್ಟು ಹೋದವರು ಇಲ್ಲಿಯವರೆಗೂ ವಾಪಸ್ಸು ಬಂದಿಲ್ಲ. ಹೆತ್ತವ್ವಳ ಕನವರಿಕೆಯಲ್ಲಿ 10 ವರ್ಷಗಳಾದರೂ ತಾಯಿಯ ಸುಳಿವು ಇಲ್ಲದೇ ಕಂಗಾಲಾಗಿರುವ ಮಗ ಮಂಜುನಾಥ ಲೈನದ್, ಇಂದಲ್ಲ ನಾಳೆ ತಾಯಿ ಬಂದೆ ಬರುತ್ತಾಳೆ ಎನ್ನುವ ಆತ್ಮವಿಶ್ವಾಸದಲ್ಲಿ ಜೀವನ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗುಮಗೇರಾ ಗ್ರಾಮದ ಮಂಜುನಾಥ ಲೈನದ್, ತಾನು 17ನೇ ವಯಸ್ಸಿನವ ಇರುವಾಗ ತಾಯಿ ಲಕ್ಷ್ಮವ್ವ, ಗಂಡನ ಕುಡಿತ ಸಹಿಸದೇ 2013ರ ಅಕ್ಟೋಬರ್ ತಿಂಗಳಿನಲ್ಲಿ ಮನೆ ಬಿಟ್ಟು ಹೋದವರು ಇಲ್ಲಿಯವರೆಗೂ ಬಂದಿಲ್ಲ.
ಈ ಹಿಂದೆ ಇದೇ ರೀತಿ ಗಂಡ ವಿಪರೀತ ಕುಡಿದು ರಂಪಾಟ ಮಾಡಿದಾಗ ಬೇಸತ್ತು ಮನೆ ಬಿಟ್ಟು ಹೋದ ಸಂಧರ್ಭದಲ್ಲಿ ಕೆಲವು ತಿಂಗಳು ನಂತರ ಇಟಗಿ ಭೀಮಾಂಬಿಕೆ ದೇವಸ್ಥಾನದಲ್ಲಿ ಸಿಕ್ಕಾಗ ಮನೆಗೆ ಕರೆದುಕೊಂಡು ಬಂದಿದ್ದರು. ಮತ್ತೆ ಗಂಡನ ಕಾಟ ಶುರುವಾದಾಗ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದಾರೆ. ಕೆಲವರು ಹುಲಿಗಿ ಹುಲಿಗೆಮ್ಮ ದೇವಸ್ಥಾನದಲ್ಲಿದ್ದರೂ ನೋಡಿದ್ದೆ ಎಂದು ಹೇಳಿದ್ದರಿಂದ ಅಲ್ಲಿಯೂ ಹೋಗಿ ಹುಡುಕಿದರೂ, ದೇವರ ದರ್ಶನ ಸಿಕ್ಕಿತೇ ವಿನಃ ತಾಯಿಯ ದರ್ಶನ ಸಿಗಲಿಲ್ಲ. ಈಗಲೂ ತಾಯಿ ಭಾವಚಿತ್ರ ಜೇಬಿನಲ್ಲಿಟ್ಟುಕೊಂಡು ತಾಯಿಯ ಜಪದಲ್ಲಿ ದಿನದೂಡುತ್ತಿದ್ದೇನೆ.
ನನ್ನ ತಾಯಿ ಎಲ್ಲೋ ಇದ್ದಾಳೆ ಮತ್ತೆ ವಾಪಸ್ಸು ಬರುವ ವಿಶ್ವಾಸ ನನಗೆ ಇದೆ ಯಾರಾದ್ರೂ ಪುಣ್ಯಾತ್ಮರು ತನ್ನ ತಾಯಿ ಇರುವ ಮಾಹಿತಿ ನೀಡಿದರೆ ಅಲ್ಲಿಗೆ ಹೋಗಿ ಕರೆದುಕೊಂಡು ಬಂದು, ಯಾವೂದೇ ತೊಂದರೆ ಇಲ್ಲದೇ ದೇವತೆಯಂತೆ ನೋಡಿಕೊಳ್ಳುವೆ ಅದೊಂದೇ ನನಗೆ ಜೀವನದ ಆಸೆಯಾಗಿದೆ ಎನ್ನುತ್ತಾರೆ ಮಂಜುನಾಥ ಲೈನದ.
ನಮ್ಮ ಕುಟುಂಬದಲ್ಲಿ 3 ಜನ ಸಹೋಧರಿಯರು, ಒಬ್ಬ ಸಹೋದರ ಇದ್ದು, ಕುಟುಂಬದಲ್ಲಿ ನಾನೊಬ್ಬನೇ ಟಂಟಂ ವಾಹನ ಚಲಾಯಿಸಿ ಜೀವನ ನಡೆಸುತ್ತಿರುವೆ. ಇಷ್ಟಾದರೂ ನನ್ನ ತಂದೆ ಹನಮಂತಪ್ಪ ಲೈನದ್ ಕುಡಿತದ ಚಟ ಬಿಟ್ಟಿಲ್ಲ, ಆತನನ್ನು ನಾನೇ ಸಾಕುತ್ತಿರುವೆ. ತಾಯಿ ಇಲ್ಲದ ಕೊರಗು ನನಗೆ 17ನೇ ವಯಸ್ಸಿನಿಂದ ಅನುಭವಿಸಿದ್ದೇನೆ ಈಗಲೂ ತಾಯಿಯ ಕನವರಿಕೆಯಲ್ಲಿರುವೆ. ಯಾರಾದ್ರೂ ನಮ್ಮ ತಾಯಿ ಕಂಡರೆ 9164647702 ಸಂಪರ್ಕಿಸಲು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ