Kushtagi Theft: ಪಟ್ಟಣದ ಹೊರವಲಯದ ದುರ್ಗಾಪರಮೇಶ್ವರಿ ದೇವಸ್ಥಾನ ಕಳವು
ಪುಡಿಗಳ್ಳರಿಗೆ ಹೊರವಲಯದ ದೇವಸ್ಥಾನಗಳೇ ಟಾರ್ಗೆಟ್
Team Udayavani, Sep 9, 2023, 12:50 PM IST
ಕುಷ್ಟಗಿ: ಪಟ್ಟಣದ ಹೊರವಲಯದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳರು ದೇವಿಯ ಅರ್ಧ ತೊಲೆ ತಾಳಿ ಸೇರಿದಂತೆ ಹುಂಡಿ ಕಳವು ಮಾಡಿರುವ ಘಟನೆ ಸೆ.9ರ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕಳೆದ ಶ್ರಾವಣ ಶುಕ್ರವಾರ, ವಿಶೇಷ ಪೂಜೆ ಹಿನ್ನೆಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅಭರಣ ಹಾಗೆಯೇ ಬಿಡಲಾಗಿತ್ತು. ಇದನ್ನು ಗಮನಿಸಿಯೇ ಕಳ್ಳರು ಕಳವು ಮಾಡಿರುವ ಶಂಕೆ ಇದೆ.
ದೇವಿಯ ಅರ್ಧ ತೊಲ ಚಿನ್ನದ ತಾಳಿ, ಬೆಳ್ಳಿ ಕಡಗ, ಕಾಲ್ಗಜ್ಜೆ ಸೇರಿದಂತೆ ದೇವಿಯ ಬಳಿಯಿದ್ದ ವಿಘ್ನೇಶ್ವರ ಮೂರ್ತಿ, ಆರತಿ ತಟ್ಟಿ ಕಳವು ಮಾಡಿದ್ದಾರೆ. ಅದಲ್ಲದೇ ದೇವಸ್ಥಾನದ ಹುಂಡಿ ಒಡೆದು ದೋಚಿದ್ದಾರೆ. ಕೆಲ ದಿನಗಳಿಂದ ದೇವಸ್ಥಾನದ ಗಂಟೆ ಕಳವು ಆಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ದಿನಗಳಿಂದ ಪುಡಿಗಳ್ಳರು ಹೊರವಲಯದ ಅನ್ನಪೂರ್ಣೇಶ್ವರಿ ದೇವಿಯ ಹುಂಡಿ ಒಡೆದಿದ್ದರು. ಪದೇ ಪದೇ ದೇವಸ್ಥಾನಗಳಿಗೆ ಪುಡಿಗಳ್ಳರ ಹಾವಳಿ ನಿಯಂತ್ರಣಕ್ಕೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ