ಅಪ್ರಾಪ್ತೆಯನ್ನು ಪುಸಲಾಯಿಸಿ ಬಲಾತ್ಕಾರ: ವಿಚಾರಣೆ ವೇಳೆ ಬೆಳಕಿಗೆ ಬಂತು ಬಾಲ್ಯ ವಿವಾಹ ಪ್ರಕರಣ
ಆಪ್ರಾಪ್ತೆಯ ಪತಿ, ತಂದೆ, ತಾಯಿ, ಅತ್ತೆ ಸೇರಿ ಬಲತ್ಕರಿಸಿದ ಆರೋಪಿ ವಿರುದ್ದ ಪ್ರಕರಣ
Team Udayavani, Apr 16, 2023, 9:25 PM IST
ಕುಷ್ಟಗಿ: ಬಾಲ್ಯ ವಿವಾಹಿತೆ ಅಪ್ರಾಪ್ತೆಯನ್ನು ಪುಸಲಾಯಿಸಿ ಬಲತ್ಕಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಿಯಕರ ಯುವಕನಿಗೆ ಪೋಕ್ಸೋ ಕಾಯಿದೆ ಅಡಿ ಬಂಧಿಸಿದ ಘಟನೆ ತಾಲೂಕಿನ ಜೂಲಕುಂಟಿ ಗ್ರಾಮದಲ್ಲಿ ನಡೆದಿದೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸಿದ ಅರೋಪದ ಮೇರೆಗೆ ಆಪ್ರಾಪ್ತೆಯ ಪತಿ, ತಂದೆ, ತಾಯಿ, ಅತ್ತೆಯ ವಿರುದ್ದ ಪ್ರಕರಣ ದಾಖಲಾಗಿದೆ.
ಜೂಲಕುಂಟಿ ಗ್ರಾಮದ 7 ವರ್ಷದ ಬಾಲಕಿಯನ್ನು ಬಾಲಕಿಯ ತಾಯಿಯ ಸಹೋದರ ಮಗ ತೆಗ್ಗಿಹಾಳ ಗ್ರಾಮದ ಯಮನಪ್ಪ ದೊಡ್ಡಪ್ಪ ಕುರಿ ಎಂಬಾತನೊಂದಿಗೆ ಬಾಲ್ಯ ವಿವಾಹವಾಗಿತ್ತು. ಮದುವೆ ಮಾಡಿಕೊಂಡಿದ್ದ ಯಮನಪ್ಪ ಕುರಿ ಮೂಕನಾಗಿದ್ದ. ಈತನೊಂದಿಗೆ ಅಪ್ರಾಪ್ತೆ ಮದುವೆ ಒಲ್ಲದ ಮದುವೆಯಾಗಿತ್ತು.
ನಂತರ 14 ವರ್ಷ 9 ತಿಂಗಳಾಗಿದ್ದ ಸಂಧರ್ಭದಲ್ಲಿ ಅಪ್ರಾಪ್ತೆಯೊಂದಿಗೆ ಅದೇ ಗ್ರಾಮದ ಪ್ರಿಯಕರ ಮಹಮ್ಮದ್ ರಫೀಕ್ ಶ್ಯಾಮೀದಸಾಬ್ ಪಿಂಜಾರ ಸಲುಗೆ ಬೆಳಸಿಕೊಂಡಿದ್ದ. ಕಳೆದ ಏಪ್ರಿಲ್ 8ರಂದು ತೆಗ್ಗಿಹಾಳ ಗ್ರಾಮದಿಂದ ಬೈಕ್ ಮೇಲೆ ಹೊಸಪೇಟೆ ಗೆ ಕರೆದೊಯ್ದು ಅಲ್ಲಿಂದ ಬಸ್ಸಿನಲ್ಲಿ ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿಗೆ ಕರೆದೊಯ್ದಿದ್ದ. ಅಲ್ಲಿ ಬಾಡಿಗೆ ಮನೆ ಮಾಡಿ ಏಪ್ರೀಲ್ 9 ರಿಂದ ಏಪ್ರಿಲ್ 15 ರವರೆಗೂ ದಿನವೂ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ.
ಇತ್ತ ಪುತ್ರಿ ನಾಪತ್ತೆಯಾಗಿರುವ ಕುರಿತು ಮನೆಯವರ ದೂರಿನ ಮೇರೆಗೆ ಈ ಜೋಡಿಯನ್ನು ಪತ್ತೆ ಹಚ್ಚಿರುವ ತಾವರಗೇರಾ ಪೊಲೀಸರು, ತಾವರಗೇರಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಪ್ರಾಪ್ತೆಗೆ ಬಾಲ್ಯ ವಿವಾಹವಾಗಿರುವ ವಿಚಾರ ಬೆಳಕಿಗೆ ಬಂದಿದೆ, ಈ ಹಿನ್ನೆಲೆಯಲ್ಲಿ ತಂದೆ ಅಮರೇಶ ಕನಸಾವಿ, ತಾಯಿ ಲಕ್ಷ್ಮವ್ವ ಅತ್ತೆ ಪಕೀರಮ್ಮ ಕುರಿ ಹಾಗೂ ಬಾಲ್ಯದ ಪತಿ ಯಮನಪ್ಪ ಕುರಿ ವಿರುದ್ದ ಹಾಗೂ ಅಪ್ರಾಪ್ತೆಗೆ ಪುಸಲಾಯಿಸಿ ಬಲತ್ಕರಿಸಿದ ಆರೋಪಿ ಮಹಮ್ಮದ್ ರಫೀಕ್ ಶ್ಯಾಮೀದ ಸಾಬ್ ಪಿಂಜಾರ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.
ತಂದೆ, ತಾಯಿ, ಅತ್ತೆ ಹಾಗೂ ಬಾಲ್ಯ ವಿವಾಹವಾಗಿರುವ ಪತಿ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಅಪ್ರಾಪ್ತೆಯನ್ನು ಯಾಮಾರಿಸಿ ಬಲತ್ಕರಿಸಿದ ಪ್ರಿಯಕರನಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ