ಉದಯವಾಣಿ ವರದಿಗೆ ಸ್ಪಂದಿಸಿದ ಶಾಸಕರು; ರಸ್ತೆಯನ್ನು ಅತಿಕ್ರಮಿಸಿದ್ದ ಮುಳ್ಳುಕಂಟಿ ತೆರವು
Team Udayavani, Jun 4, 2022, 12:32 PM IST
ಕುಷ್ಟಗಿ: ರಸ್ತೆಯನ್ನು ಅತಿಕ್ರಮಿಸಿದ್ದ ಮುಳ್ಳು ಕಂಟಿಯಿಂದಾಗಿ ತೋಪಲಕಟ್ಟಿ ಗ್ರಾಮಕ್ಕೆ ಬಸ್ ಬಂದಿರಲಿಲ್ಲ.ಈ ಸಮಸ್ಯೆಗೆ ಸದರಿ ಗ್ರಾಮದ ವಿದ್ಯಾರ್ಥಿಗಳು ಶಾಲಾ ತರಗತಿಯಿಂದ ವಂಚಿತರಾಗುತ್ತಿದ್ದರು.
ಕೆಲವು ದಿನಗಳಿಂದ ವಿದ್ಯಾರ್ಥಿಗಳು ತೋಪಲಕಟ್ಟಿ ಗ್ರಾಮದಿಂದ ತಳವಗೇರಾ ಗ್ರಾಮದ ಪ್ರೌಢಶಾಲೆಗೆ ಹಣಕೊಟ್ಟು ಖಾಸಗಿ ವಾಹನದಲ್ಲಿ ಇಲ್ಲವೇ ಕಾಲ್ನಡಿಗೆ ಅನಿವಾರ್ಯ ಆಗಿತ್ತು. ತೋಪಲಕಟ್ಟಿ ಗ್ರಾಮದಿಂದ ತಳವಗೇರಾ ಗ್ರಾಮಕ್ಕೆ 64 ವಿದ್ಯಾರ್ಥಿಗಳಿಗೆ ಇದು ತಪ್ಪದ ಗೋಳಾಗಿತ್ತು. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಉದಯವಾಣಿಯಲ್ಲಿ ಕಳೆದ ಜೂನ್ 2ರಂದು ಗ್ರಾಮಕ್ಕೆ ಬಾರದ ಬಸ್ಸು ವಿದ್ಯಾರ್ಥಿಗಳು ಶಾಲೆಗೆ ಗೈರು ಸುದ್ದಿ ಪ್ರಕಟಿಸಿತ್ತು.
ಈ ಸುದ್ದಿಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ಪಂದಿಸಿದ್ದಾರೆ. ಶಾಸಕ ಬಯ್ಯಾಪೂರ ಮುತುವರ್ಜಿವಹಿಸಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಕನಕಗೌಡ ಅವರ ಮೂಲಕ ಜೆಸಿಬಿಯಿಂದ ತೋಪಲಕಟ್ಟಿಯಿಂದ ತಳವಗೇರಾ ಗ್ರಾಮದವರೆಗೂ ರಸ್ತೆ ಬದಿಯ ಇಕ್ಕೆಲಗಳಲ್ಲಿ ಬೆಳೆದು ಸುಗಮ ಸಂಚಾರಕ್ಕೆ ಅಡ್ಡಿಯಾದ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆಯಾಯಿತು. ಶಾಲಾ ವಿಧ್ಯಾರ್ಥಿಗಳ ನಿತ್ಯ ಸಮಸ್ಯೆ ಗೆ ಸ್ಪಂದಿಸಿದ ಉದಯವಾಣಿ ಹಾಗೂ ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ತೋಪಲಕಟ್ಟಿ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ