ಕವಿತೆ ಓದುವ ಸಹೃದಯರು ಅಗತ್ಯ


Team Udayavani, Dec 29, 2019, 3:33 PM IST

kopala-tdy-2

ಕುಷ್ಟಗಿ: ಕಾವ್ಯಲೋಕದಲ್ಲಿ ಕವಿ ಹೃದಯ ಎರಡನೇ ಕಣ್ಣು ಇದ್ದಂತೆ. ಕವಿಗೆ ಕವಿತೆ ಎಷ್ಟು ಮುಖ್ಯವೋ ಕವಿತೆ ಆಲಿಸುವ ಸಹೃದಯರು ಅಷ್ಟೇ ಮುಖ್ಯ ಎಂದು ಸಾಹಿತಿ, ಕೊಪ್ಪಳ ಹಣಕಾಸು ಇಲಾಖೆಯ ಹಿರಿಯ ಉಪ ನಿರ್ದೇಶಕರು ಅಮೀನ್‌ ಅತ್ತಾರ ಹೇಳಿದರು.

ಇಲ್ಲಿನ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಡಾ| ಶರಣಪ್ಪ ನಿಡಶೇಸಿ ಅವರ “ಜೇಂಗೂಡು ಮುಕ್ತಕ’ ಕವನ ಸಂಕಲನ ಕುರಿತು ಮಾತನಾಡಿದರು. ಕವಿತೆ ಬರೆಯದೇ ಇದ್ದರೂ ಆಸಕ್ತಿಯಿಂದ ಕವಿತೆಗಳನ್ನು ಓದಿ ಅರ್ಥೈಸಿಕೊಂಡು ಸಂವಾದಿ  ಸುವ ಸಹೃದಯರಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಲೈಕ್‌, ಕಮೆಂಟ್‌ಗಳಿಂದ ಸಹೃದಯತೆ ಹುಟ್ಟಿಕೊಳ್ಳುವುದಿಲ್ಲ. ಇತೀಚಿಗೆ ಮೊಬೈಲ್‌ ಗೀಳು ಹೆಚ್ಚಾಗಿದ್ದು, ಪಾಲಕರು ಮಕ್ಕಳಿಗೆ ಪುಸ್ತಕಗಳನ್ನು ನೀಡದೇ ಮೊಬೈಲ್‌ ನೀಡುತ್ತಿದ್ದು, ಪಬ್ಜಿ, ಬ್ಲೂವೇಲ್‌ ಗೇಮ್‌ ಆಕರ್ಷಿತರಾಗಿ ಪುಸ್ತಕ ಓದುವುದನ್ನೇ ಮರೆಯುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಪುಸ್ತಕಗಳಿಂದ ಓದುವ ಸಂತೃಪ್ತಿ, ಮೊಬೈಲ್‌ನಿಂದ ಸಿಗದು ಎಂದ ಅವರು, ಮಕ್ಕಳಿಗೆ ಮೊಬೈಲ್‌ ಶತ್ರುವಾಗಿದೆ. ಸಾಹಿತ್ಯ ಹಾಗೂ ವಿಜ್ಞಾನ ಬಗ್ಗೆ ಓದುವ ಗೀಳು ಹಚ್ಚಿಕೊಂಡಾಗ ಮಾತ್ರ ಬದುಕು ಬದಲಾವಣೆಯಾಗಲು ಸಾಧ್ಯವಿದೆ. ಪಿಯುಸಿ, ಪದವಿವರೆಗೂ ಮೊಬೈಲ್‌ ಸಹವಾಸವೇ ಬೇಡ ಎಂದರು.

ಡಾ| ಶರಣಪ್ಪ ನಿಡಶೇಸಿ ಅವರ ಈ ಮುಕ್ತಕ ಕವನ ಸಂಕಲನದಲ್ಲಿ ಗಂಭೀರವಾದರೂ ಹಾಸ್ಯ ಪ್ರಜ್ಞೆ, ವಿಡಂಬನೆಯೂ ಇದೆ. ಕಟುಕುತ್ತವೆ, ಸಂದೇಶಗಳು ಇವೆ. ಕವಿಯಾದವನು ತನ್ನ ಅನುಭವ ಸೇರಿಸಿ ಸಾರ್ವತ್ರಿಕಗೊಳಿಸಿದರೆ ಅದು ಲೋಕಾನುಭವ ಆಗುತ್ತದೆ. ಅದು ಉಪದೇಶವಾಗಿದ್ದರೆ ಭಾಷಣಕ್ಕೆ ಸೀಮಿತವಾಗುತ್ತದೆ ಎಂದರು. ಈ ಕವಿತೆಯಲ್ಲಿ ಶರಣಪ್ಪ ನಿಡಶೇಸಿ ಶಬ್ಧಗಳೊಂದಿಗೆ ಆಟವಾಡಿದ್ದರೂ ಬೇರೆ ಅನರ್ಥಕ್ಕೆ ಅವಕಾಶವಿಲ್ಲ, ಸಮಾಜಕ್ಕೆ ಉತ್ತಮ ಸಂದೇಶವಿರುವ ಹಿನ್ನೆಲೆಯಲ್ಲಿ ಈ ಪುಸ್ತಕ ಮಹತ್ವದ್ದು ಎನಿಸಿದೆ ಎಂದರು.

ಜೇಂಗೂಡು ಮುಕ್ತಕ ಕವನ ಸಂಕಲನ ಉದ್ಘಾಟಿಸಿದ ಸಿಪಿಐ ಜಿ. ಚಂದ್ರಶೇಖರ ಮಾತನಾಡಿ, ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಸಿಕೊಂಡು ಪುಸ್ತಕ ಬರೆಯಲು ಸಾಧ್ಯವಿದ್ದು, ವಿಚಾರದ ದೃಷ್ಟಿಕೋನ, ಆಲೋಚನೆಯ ವಿಧಾನ ಬದಲಾಗಲಿದೆ ಎಂದ ಅವರು ಕ್ರಿಯಾಶೀಲತೆಯೂ ಹೆಚ್ಚಲಿದೆ ಎಂದರು.  ಅಧ್ಯಯನದಿಂದ ಜೀವನ ಸರಿದಾರಿಗೆ ತರಲು ಸಾಧ್ಯವಿದ್ದು ಜೀವನ ವಿಕಾಸಕ್ಕೂ ಪ್ರೇರಣೆಯಾಗಿದೆ ಎಂದರು.

ಸಾಹಿತಿ ಪ್ರಮೋದ ತುರ್ವಿಹಾಳ ಮಾತನಾಡಿದರು. ಲೇಖಕ ಕಿಶನ್‌ರಾವ್‌ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ಉಪ ಪ್ರಾಚಾರ್ಯ ಶರಣಯ್ಯ ಹಿರೇಮಠ ಮತ್ತೀತರಿದ್ದರು. ವೀರೇಶಪ್ಪ ಸ್ವಾಗತಿಸಿದರು. ನಟರಾಜ ಸೋನಾರ ಸನ್ಮಾನಿಸಿದರು.

ಟಾಪ್ ನ್ಯೂಸ್

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.