Onake Obavva ಧೈರ್ಯ, ಶೌರ್ಯದ ಸಂಕೇತ: ಶಾಸಕ ಜನಾರ್ದನ ರೆಡ್ಡಿ


Team Udayavani, Nov 11, 2023, 1:09 PM IST

5-gangavathi

ಗಂಗಾವತಿ: ಚಿತ್ರದುರ್ಗದ ಕೋಟೆಯನ್ನು ಶತ್ರು ಸೈನ್ಯದಿಂದ ಸಂರಕ್ಷಣೆ ಮಾಡುವ ಮೂಲಕ ಒನಕೆ ಓಬವ್ವ ಧೈರ್ಯ, ಶೌರ್ಯ ಮೆರೆದಿದ್ದಾರೆ. ಮಕ್ಕಳಲ್ಲಿ ಒನಕೆ ಓಬವ್ವನ ಗುಣಗಳು ಬರುವಂತೆ ಪಾಲಕರು ಪ್ರೇರಣೆ ನೀಡಬೇಕು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ಅವರು ಹೊಸಳ್ಳಿ ರಸ್ತೆಯಲ್ಲಿರುವ ಒನಕೆ ಓಬವ್ವ ವೃತ್ತದಲ್ಲಿ 364ನೇ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶ ಭಕ್ತಿ ಯಾರೊಬ್ಬರ ಸ್ವತ್ತಲ್ಲ. ಧೈರ್ಯ, ಶೌರ್ಯದ ಈ ನೆಲ ಮೂಲದವರಿಗೆ ಸದಾ ಇರುತ್ತದೆ. ಓಬವ್ವನ ಇತಿಹಾಸ ಇನ್ನಷ್ಟು ಶೋಧಿಸಿ ಯುವಜನರಿಗೆ ತಿಳಿಸುವ ಕಾರ್ಯ ಮಾಡಬೇಕಿದೆ. ನಗರದಲ್ಲಿ ಒನಕೆ ಓಬವ್ವನ ಪುತ್ಥಳಿ ನಿರ್ಮಿಸಲಾಗುತ್ತದೆ ಎಂದರು.

ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಹೊಲೆಯರು, ಮಾದಿಗರ ದಾಖಲೆಗಳಿವೆ. ವಿಜಯನಗರ ಸಾಮ್ರಾಜ್ಯಕ್ಕಾಗಿ ಇವರೆಲ್ಲರೂ ರಕ್ತ ಹರಿಸಿದ್ದಾರೆ. ಒನಕೆ ಓಬವ್ವನನ್ನು ಹೈದರಾಲಿ ಸೈನ್ಯವನ್ನು ಸದೆಬಡಿದ ವಿಷಯವನ್ನು ಮಾತ್ರ ಇತಿಹಾಸಕಾರರು ದಾಖಲಿಸಿದ್ದಾರೆ. ಓಬವ್ವನ ಚರಿತ್ರೆ ಮತ್ತು ಪೌರುಷದ ಕುರಿತು ವೀರಗಲ್ಲು, ಶಾಸನಗಳು ಯಾಕೆ ಇಲ್ಲ ಎಂದು ಪ್ರಶ್ನಿಸಿದರು.

ಇತಿಹಾಸ ಬರೆಯುವವರು ಬೇಧ-ಭಾವ ಮಾಡಿದ್ದಾರೆ. ಮೇಲ್ವರ್ಗದವರಿಗೆ ವಿಜಯನಗರದ ಅರಸರು ಕೊಟ್ಟ ಭೂಮಿ, ಮನೆ, ಇನಾಂಗಳು ಇನ್ನೂ ಇವೆ. ಒನಕೆ ಓಬವ್ವಳಿಗೆ ಕೊಟ್ಟ ಭೂಮಿ ಇನಾಂಗಳು ಯಾಕೆ ಇಂದು ಇಲ್ಲ. ಅವರ ವಂಶಸ್ಥರು ಈಗಲೂ ಬಡತನದಲ್ಲಿದ್ದಾರೆ ಎನ್ನುವ ಕುರಿತು ಸಮಾಜದವರು ಕೇಳಬೇಕಿದೆ ಎಂದರು.

ನಮ್ಮ ಚರಿತ್ರೆಯಲ್ಲಿ ಪೌರಾಣಿಕ ಅಳಿಸುತ್ತಿರುವುದು ಅಪಾಯಕಾರಿಯಾಗಿದೆ. ವೀರತ್ವದ ವೀರ ಚರಿತ್ರೆಯನ್ನು ಕಟ್ಟಬೇಕು. ಶ್ರಮ ಸಿದ್ದಾಂತದಲ್ಲಿ ನೆಲ ಮೂಲದ ಜನರು ನಂಬಿಕೆ ಇಟ್ಟವರು. ಬಂಧುತ್ವ ಬೆಸೆಯುವ ಕಾರ್ಯ ಮೂಲ ನಿವಾಸಿಗಳು ಸದಾ ಮಾಡುತ್ತಾರೆಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ, ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಉಪನ್ಯಾಸಕ ಡಾ.ಎನ್.ಚಿನ್ನಸ್ವಾಮಿ ಸೊಸೆಲೆ, ಕೆ.ಆರ್.ಪಿ. ಪಾರ್ಟಿಯ ಮುಖಂಡರಾದ ಅಮರಜ್ಯೋತಿ ನರಸಪ್ಪ, ಮನೋಹರಗೌಡ, ಯಮನೂರ ಚೌಡ್ಕಿ, ಮಲ್ಲಿಕಾರ್ಜುನ ನಂದಾಪೂರ, ದಲಿತ ಸಂಘಟನೆಗಳ ಮುಖಂಡರಾದ ಕುಂಟೋಜಿ ಮರಿಯಪ್ಪ, ದೊಡ್ಡಭೋಜಪ್ಪ, ಹುಲುಗಪ್ಪ ಮಾಸ್ತರ್, ಹುಲುಗಪ್ಪ ಮಾಗಿ, ಸಂಜೀವಪ್ಪ, ರಾಮಚಂದ್ರಪ್ಪ, ಹುಸೇನಪ್ಪ ಹಂಚಿನಾಳ ವಕೀಲರು ಅನೇಕರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.