ಗಂಗಾವತಿ: ಬೃಹತ್ ಮರ ತೆರವಿಗೆ ಮೀನಾಮೇಷ; ಅಧಿಕಾರಿಗಳ ನಿರ್ಲಕ್ಷ್ಯ
ಮತ್ತೊಂದು ಅನಾಹುತಕ್ಕೆ ಕಾದಿರುವ ಮರ
Team Udayavani, Nov 29, 2022, 1:01 PM IST
ಗಂಗಾವತಿ: ಕಳೆದ ವಾರ ಕಲ್ಮಠದ ಬಳಿ ಬೃಹತ್ ಮರ ಬಿದ್ದು 12 ಬೈಕ್ ಜಖಂಗೊಂಡು ಒರ್ವ ವ್ಯಕ್ತಿಗೆ ತೀವ್ರ ಗಾಯಗಳಾದ ಘಟನೆ ಮರೆಯುವ ಮುನ್ನವೇ ಅದೇ ಸ್ಥಳದಲ್ಲಿದ್ದ ಮತ್ತೊಂದು ಬೃಹತ್ ಮರ ನೆಲಕ್ಕುರುಳುವ ಸಾಧ್ಯತೆ ಇದ್ದು, ಸ್ಥಳೀಯ ನಾಗರೀಕರು ಮರ ಉರುಳಿ ಬೀಳುವ ಕುರಿತು ನಗರಸಭೆ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಮರಗಳು 50 ವರ್ಷಗಳ ಹಿಂದಿನದ್ದಾಗಿದ್ದು, ಕಳೆದ ವಾರ ಮರದ ಬುಡದಲ್ಲಿ ಮಣ್ಣಿನ ಕೊರತೆ ಮತ್ತು ಮರದ ಕೆಳಗೆ ಕುಡಿಯುವ ನೀರಿನ ಪೈಪ್ ಇರುವುದರಿಂದ ಮರದ ಬೇರುಗಳು ಸಡಿಲಗೊಂಡು ಮರ ಏಕಾಏಕಿ ಕೆಳಗೆ ಬಿದ್ದಿದ್ದು, ಇದರಿಂದ 12 ಬೈಕ್ ಜಖಂಗೊಂಡು ಒರ್ವ ವ್ಯಕ್ತಿಗೆ ಗಾಯವಾದ ಘಟನೆ ನಡೆದಿತ್ತು.
ಈಗ ಇನ್ನೊಂದು ಬೃಹತ್ ಗಾತ್ರದ ಮರ ಬೀಳುವ ಹಂತದಲ್ಲಿದ್ದು, ಮುಂದಾಗುವ ಅನಾಹುತ ತಪ್ಪಿಸುವ ಸಲುವಾಗಿ ಸಾರ್ವಜನಿಕರು ಮರ ಕಡಿದು ಹಾಕುವಂತೆ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು
ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್
ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ