

Team Udayavani, Mar 20, 2023, 5:57 AM IST
ಕೊಪ್ಪಳ: ಕೋಲಾರದಲ್ಲಿ ಮುಸ್ಲಿಂ ಹಾಗೂ ಕುರುಬ ಮತಗಳು ಹೆಚ್ಚಾಗಿದ್ದು ನಾನು ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿದ್ದರು. ಆದರೆ ಈಗ ವರದಿ ಬಂದಿರುವುದನ್ನು ನೋಡಿದರೆ ಅವರ ಲೆಕ್ಕಾಚಾರ ತಲೆ ಕೆಳಗಾಗಿದೆ ಎಂದು ಸಂಗಣ್ಣ ಕರಡಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ವಿಚಾರ ಮಾಡಿ ಸಿದ್ದರಾಮಯ್ಯಗೆ ಸಲಹೆ ನೀಡಿದೆ. ಹಾಗಾಗಿಯೇ ಕೋಲಾರದಿಂದ ಸ್ಪರ್ಧಿಸಲು ಹಿಂದೆ ಸರಿದಿದ್ದಾರೆ. ಕೆ.ಎಚ್. ಮುನಿಯಪ್ಪ ಅವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸೋಲಿಸಿದ್ದರು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಅದರ ಆತಂಕವಿದೆ. ಯಾರನ್ನು ನಾವು ಸೋಲಿಸುತ್ತೇವೆ. ಅವರು ನಮ್ಮನ್ನು ಸೋಲಿಸುವುದು ಸಹಜ ಸ್ವಭಾವವಾಗಿದೆ.
ಇದರಿಂದ ಸಿದ್ದುಗೆ ವರುಣಾ ಕ್ಷೇತ್ರ ಫಿಕ್ಸ್ ಎಂಬಂತೆ ಕಾಣುತ್ತಿದೆ ಎಂದರು.
ಕೊಪ್ಪಳ ಕ್ಷೇತ್ರದ ಟಿಕೆಟ್ ಕುರಿತು ಜನರು ಅಭಿಪ್ರಾಯ ಮಂಡಿಸುತ್ತಾರೆ. ಅದರ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ, ಹಕ್ಕಿದೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ. ಆ ರೀತಿ ನಡೆದುಕೊಳ್ಳಬೇಕು. ಮೋದಿ ನಾಯಕತ್ವದಲ್ಲಿ ಎರಡು ಬಾರಿ ಸಂಸದನಾಗಿರುವೆ. ನನಗೆ ತೃಪ್ತಿ ತಂದಿದೆ. ಅಭಿವೃದ್ಧಿ ಕೆಲಸ ಮಾಡಿರುವೆ ಎಂದರು.
Ad
ಸರಕಾರದ ಉಚಿತ ಬಸ್ ವ್ಯವಸ್ಥೆ ಇಲ್ಲದೆ ಹಣ ಪಾವತಿಸಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿಯರು
Koppala: ಹಿಂದುತ್ವ ಎನ್ನುವವರು ಮುಚ್ಕೊಂಡು ಇರಲಿ..: ಮಧು ಬಂಗಾರಪ್ಪ
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆಗೆ ಬಹುತೇಕರ ಆಕ್ಷೇಪ: ಮುಲಾಲಿ
ಕೊಪ್ಪಳದ ಜನರಿಗೆ ಸಿಗದ ‘ಕನಕನ ದರ್ಶನ’; ವೃತ್ತಕ್ಕಿಲ್ಲ ಉದ್ಘಾಟನೆ ಭಾಗ್ಯ
Hanumasagara: ದೊಡ್ಡ ಗ್ರಾಮ ಪಂಚಾಯತ್ ಹನುಮಸಾಗರ ಇನ್ನು ಪಟ್ಟಣ ಪಂಚಾಯತ್
You seem to have an Ad Blocker on.
To continue reading, please turn it off or whitelist Udayavani.