ಗಂಗಾವತಿ: ದೀಪಾವಳಿ ಪಟಾಕಿ ಮಾರಾಟ; ಕಾಲೇಜು ಮೈದಾನ ಮಲಿನಗೊಳಿಸಿದ ಪಟಾಕಿ ವ್ಯಾಪಾರಸ್ಥರು
Team Udayavani, Oct 28, 2022, 9:55 AM IST
ಗಂಗಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಕರೆಯ ಮೂಲಕ ಮಾಲಿನ್ಯ ತಡೆಯುವ ಕಾರ್ಯ ಮಾಡುತ್ತಿದ್ದರೆ. ಗಂಗಾವತಿಯ ಪಟಾಕಿ ವ್ಯಾಪಾರಸ್ಥರು ದೀಪಾವಳಿಯ ಸಂದರ್ಭದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಿ ವಾರಗಳ ಕಾಲ ಭರ್ಜರಿ ವ್ಯಾಪಾರ ಮಾಡಿ ಲಾಭ ಮಾಡಿಕೊಂಡು ಇದೀಗ ಇಡೀ ಮೈದಾನವನ್ನು ಮಲೀನಗೊಳಿಸಿದ್ದಾರೆ.
ಮೈದಾನದ ಸುತ್ತ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಪಟಾಕಿಯ ಡಬ್ಬಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದ ದೃಶ್ಯ ಕಂಡು ಬಂದಿದೆ. ನಗರ ಸಭೆಯವರು ಪಟಾಕಿ ಮಾರಾಟ ಮಾಡಲು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸ್ವಲ್ಪ ಜಾಗವನ್ನು ಪ್ರತಿ ವರ್ಷ ಪಟಾಕಿ ವ್ಯಾಪರಸ್ಥರಿಗೆ ಕೆಲವು ಷರತ್ತುಗಳೊಂದಿಗೆ ವಹಿಸುತ್ತಾರೆ. ಪ್ರತಿ ವರ್ಷವೂ ಪಟಾಕಿ ವ್ಯಾಪರಸ್ಥರು ದೀಪಾವಳಿ ಭರ್ಜರಿ ವ್ಯಾಪಾರ ಮಾಡಿಕೊಂಡು ನಂತರ ಪ್ರದೇಶವನ್ನು ಮಾಲಿನ್ಯಗೊಳಿಸಿ ಹೋಗುತ್ತಾರೆ. ಪಟಾಕಿ ವ್ಯಾಪಾರಸ್ಥರು ಲಾಭ ಮಾಡಿಕೊಂಡು ಕಾಲೇಜು ಮೈದಾನ ಸ್ವಚ್ಛಗೊಳಿಸುವ ಜವಾಬ್ದಾರಿ ನಗರಸಭೆಯವರಿಗೆ ವಹಿಸಲಾಗುತ್ತಿತ್ತು. ಲಾಭ ವ್ಯಾಪಾರಸ್ಥರಿಗೆ ಆಗುವುದರಿಂದ ಸ್ವಚ್ಛಗೊಳಿಸುವ ಕಾಯಕ ಮಾತ್ರ ನಗರ ಸಭೆಯವರಿಗೆ ನೀಡುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿತ್ತು.
ನಿತ್ಯವೂ ಸಾವಿರಾರು ಜನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡ್ತಾರೆ. ಜೂನಿಯರ್ ಕಾಲೇಜ್ ಮೈದಾನದಲ್ಲಿ ಎಂ.ಎನ್.ಎಂ. ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹೈಸ್ಕೂಲ್, ಮೌಲನಾ ಅಬ್ದುಲ್ ಕಲಾಂ ಆಜಾದ್ ಶಾಲೆ, ಉರ್ದುಶಾಲೆ, ಲಯನ್ಸ್ ಕ್ಲಬ್ ಶಾಲೆ, ಜೂನಿಯರ್ ಕಾಲೇಜು ಮತ್ತು ಹೈಸ್ಕೂಲ್ ವಿಭಾಗ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ನಿತ್ಯವೂ ಇಲ್ಲಿ ಸಂಚಾರ ಮಾಡುತ್ತಾರೆ. ಈ ಮಾಲಿನ್ಯದಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಜೂನಿಯರ್ ಕಾಲೇಜು ಮೈದಾನವನ್ನು ಮಲಿನಗೊಳಿಸಿದ ಪಟಾಕಿ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸುವುದರ ಜೊತೆಗೆ ಇಡೀ ಮೈದಾನವನ್ನು ಸ್ವಚ್ಚಗೊಳಿಸುವ ಜವಾಬ್ದಾರಿಯನ್ನು ಪಟಾಕಿ ವ್ಯಾಪರಸ್ಥರಿಗೆ ವಹಿಸುವಂತೆ ಸಾರ್ವಜನಿಕರು ನಗರಸಭೆ ಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್