ಕುಷ್ಟಗಿ: ಮದ್ದಾನಿ ಮಠದ ಜಮೀನಿನಲ್ಲಿ ಹೊಲ ಉತ್ತು ರೈತರಿಗೆ ಸಾಥ್ ನೀಡಿದ ಶ್ರೀಗಳು
Team Udayavani, Dec 2, 2022, 1:15 PM IST
ಕುಷ್ಟಗಿ: ಕುಷ್ಟಗಿಯ ಮದ್ದಾನಿಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿಗಳು ಮಠದ ಜಮೀನಿನಲ್ಲಿ ಎತ್ತುಗಳ, ಎಡೆ ಕುಂಟಿ (ಪುಳಗುಂಟಿ) ಹೊಡೆದು ರೈತರಿಗೆ ಸಾಥ್ ನೀಡಿದರು.
ಹಿಂಗಾರು ಹಂಗಾಮಿನ ಬಿಳಿ ಜೋಳ, ಗೋಧಿ ಮಿಶ್ರಿತ ಜಮೀನಿನಲ್ಲಿ ಗುಮಗೇರಿಯ ರೈತರಾದ ಮುದಕಪ್ಪ ಗುಮಗೇರಿ, ಹನುಮಂತ ಗುರಿಕಾರ, ಮಂಜಪ್ಪ ಅವರೊಂದಿಗೆ ಮದ್ದಾನಿ ಶ್ರೀಗಳು ಎಡೆ ಕುಂಟಿ ಹೊಡೆದು ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ಶ್ರೀ, ಬಿತ್ತನೆ ಪೂರ್ವದಲ್ಲಿ ಆಗುರುವ ಮಳೆ ಬಿತ್ತನೆ ನಂತರ ಆಗದೇ ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರು, ಮಳೆ ಭರವಸೆ ಮೇರೆಗೆ ಎಡೆಕುಂಟೆ ನಿರತರಾಗಿದ್ದಾರೆ. ರೈತರು ತಾಳ್ಮೆ ಕಳೆದುಕೊಳ್ಳದಂತೆ ಕಾಯಕ ಮುಂದುವರಿಸಲು ಅವರ ಕೆಲಸದಲ್ಲಿ ಸಾಥ್ ನೀಡಿರುವೆ. ಸ್ವಾಮೀಜಿಗಳು ಪೂಜೆ ಪುನಾಸ್ಕಾರ ಅಲ್ಲದೇ ರೈತರ ಕಾಯಕದಲ್ಲೂ ಭಾಗಿಯುತ್ತಿರುವುದು ಪೂಜೆಯಷ್ಟೆ ಸಮಾನಾಗಿದೆ ಎಂದರು.