ಉಡುಪಿಗೆ ಹೋಗಿ ಬಂದಿದ್ದ ಚಹಾದಂಗಡಿಯವ ಸೇರಿ ಗಂಗಾವತಿಯ ಮೂವರಿಗೆ ಸೋಂಕು ದೃಢ
Team Udayavani, Jun 16, 2020, 10:19 AM IST
ಗಂಗಾವತಿ: ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್, ಮುಂಬೈನಿಂದ ಆಗಮಿಸಿದ ಕೋವಿಡ್ ಸೋಂಕಿತ ನಾಲ್ಕು ವರ್ಷದ ಮಗುವಿನ ತಂದೆ ಹಾಗೂ ಶ್ರೀರಾಮನಗರದ ಚಹಾದಂಗಡಿಯವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ವಕೀಲಗೇಟ್ ಪ್ರದೇಶ, ವಡ್ಡರ ಓಣಿ 20ನೇ ವಾರ್ಡ್ ಹಾಗೂ ಶ್ರೀರಾಮನಗರದ ರಸ್ತೆ ಬದಿ ಪ್ರದೇಶವನ್ನು ಸೀಲ್ ಡೌನ್ ಮಾಡಿ ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.
ನಗರದ ವಡ್ಡರ ಓಣಿಯಲ್ಲಿ ವಾಸವಾಗಿರುವ 34 ವರ್ಷದ ಸ್ಟಾಫ್ ನರ್ಸ್, ವಕೀಲ ಗೇಟ್ ಪ್ರದೇಶಕ್ಕೆ ಆಗಮಿಸಿದ ಕೋವಿಡ್-19 ಸೋಂಕಿತ ನಾಲ್ಕು ವರ್ಷದ ಮಗುವಿನ 38 ವರ್ಷದ ತಂದೆ ಹಾಗೂ ಶ್ರೀರಾಮನಗರದಲ್ಲಿ ಚಹಾದಂಗಡಿ ಇಟ್ಟುಕೊಂಡಿರುವ ಉಡುಪಿ ಮೂಲದ 48 ವರ್ಷದ ವ್ಯಕ್ತಿಗೆ ಕೊರೊನಾ ಪಾಜಿಟೀವ್ ಬಂದಿದೆ.
ವಕೀಲ ಗೇಟ್ ಪ್ರದೇಶಕ್ಕೆ ಮುಂಬೈನಿಂದ ಆಗಮಿಸಿದ್ದ 7 ಜನರನ್ನು ಕ್ವಾರಂಟೈನಲ್ಲಿರಿಸಲಾಗಿತ್ತು. ಇವರಲ್ಲಿ ಸೋಮವಾರ ನಾಲ್ಕು ವರ್ಷದ ಮಗುವಿಗೆ ಕೋವಿಡ್ ಸೋಂಕು ಕಂಡುಬಂದಿತ್ತು. ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಕಳೆದ ಹಲವು ದಿನಗಳಿಂದ ನೆಗಡಿ ಜ್ವರದಿಂದ ಬಳಲುತ್ತಿದ್ದು, ಆಕೆಯ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಶ್ರೀರಾಮನಗರದಲ್ಲಿ ಚಹಾದಂಗಡಿ ಇಟ್ಟುಕೊಂಡಿರುವ ವ್ಯಕ್ತಿ ಇತ್ತೀಚೆಗೆ ಉಡುಪಿಗೆ ಹೋಗಿ ಬಂದ ನಂತರ ನೆಗಡಿ ಸೀತ ಕೆಮ್ಮಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಆಗಮಿಸಿದ ವೇಳೆ ಕಫ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು.
ಕಲ್ಮಠ ಏರಿಯಾ, ಭಗೀರಥ ವೃತ್ತದಿಂದ ಬಿಟಿಎಚ್ ಲಾಡ್ಜ್ ಯಜ್ಞ ವಲ್ಕ್ಯ ಆಂಜನೇಯನ ಗುಡಿ ಕಂದಗಲ್ ಮಸೀದಿ ಪ್ರದೇಶ ಸೀಲ್ ಡೌನ್ ಮಾಡಿ ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ