ಗಂಗಾವತಿ: ಗ್ರಾಮ ದೇವತೆ ದುರ್ಗಮ್ಮ ಜಾತ್ರೆ; ಕುಂಭ ಹೋರುವ ಸುಮಂಗಲಿಯರಿಗೆ ಸೀರೆಗಳ ವಿತರಣೆ
Team Udayavani, Dec 13, 2022, 2:44 PM IST
ಗಂಗಾವತಿ: ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿ ಜಾತ್ರಮಹೋತ್ಸವದ ಕಾರ್ಯಕ್ರಮ ಡಿ.20-24 ವರೆಗೆ ಜರುಗಲಿದ್ದು, ಕುಂಭ ಹೋರುವ ಸುಮಂಗಲಿಯರಿಗೆ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಅವರ ಪತ್ನಿ ಎಂ.ಸರೋಜಮ್ಮ 301 ಸೀರೆಗಳನ್ನು ದೇಣಿಗೆ ನೀಡಿದ್ದಾರೆ.
ಮಂಗಳವಾರ ಸೀರೆಗಳನ್ನು ಕುಂಭ ಹೋರುವ ಮಹಿಳೆಯರಿಗೆ ವಿತರಿಸುವ ಕಾರ್ಯಕ್ರಮ ಜರುಗಿತು. ಸರೋಜಮ್ಮ ಹಾಗೂ ಸಂಧ್ಯಾ ಶ್ರೀನಾಥ ಮಾತನಾಡಿ, ಗ್ರಾಮದೇವತೆ ಜಾತ್ರೆ ಭಕ್ತಿ ಶ್ರದ್ಧೆಯಿಂದ ಜರುಗಲಿದ್ದು, ಸರ್ವರೂ ಬಂಧುಗಳ ಜತೆ ಪಾಲ್ಗೊಳ್ಳಬೇಕೆಂದರು.
ಡಿ. 20 ರಿಂದ 24ರ ವರೆಗೆ ಗ್ರಾಮ ದೇವತೆ ದುರ್ಗಮ್ಮ ಜಾತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಆರಂಭವಾಗಿದ್ದು, ಇಡೀ ಗ್ರಾಮವನ್ನು ಅಲಂಕರಿಸಲಾಗಿದೆ. ದೇವಾಲಯಕ್ಕೆ ಸುಣ್ಣಬಣ್ಣದ ಅಲಂಕಾರ ಮಾಡಲಾಗಿದೆ. ಮಹಿಳಾ ಮುಖಂಡರಾದ ಅನ್ನಪೂರ್ಣ ಸಿಂಗ್, ಗೀತಾ, ರಾಧಮ್ಮ, ಪಕೀರಮ್ಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ
Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕುಷ್ಟಗಿ: ಪ್ರಜಾಪ್ರಭುತ್ವ ಉಳಿವಿಗೆ ಮತ, ಪರಿಸರಕ್ಕಾಗಿ ಮರ
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ