42 ಚೆಕ್ಪೋಸ್ಟ್ ದಾಟಿ ಬಂದ ಆ್ಯಂಬುಲೆನ್ಸ್!
ಕೋವಿಡ್ 19 ಹರಡಿದ್ದು ಸತ್ತ ವ್ಯಕ್ತಿಯಿಂದಲೋ, ಆತನ ಪುತ್ರನಿಂದಲೋ?
Team Udayavani, May 2, 2020, 3:11 PM IST
ಮಂಡ್ಯ: ಮೃತ ವ್ಯಕ್ತಿಯ ಶವವನ್ನು ಹೊತ್ತ ಸರ್ಕಾರಿ ಆ್ಯಂಬುಲೆನ್ಸ್ ಮುಂಬೈನಿಂದ 42 ಚೆಕ್ಪೋಸ್ಟ್ಗಳನ್ನು ದಾಟಿ ಪಾಂಡವಪುರ ತಾಲೂಕಿನ ಬಿ.ಕೊಡಗಹಳ್ಳಿಯನ್ನು ತಲುಪಿದೆ. ಸರ್ಕಾರಿ ಆ್ಯಂಬುಲೆನ್ಸ್ ಎಂಬ ಕಾರಣಕ್ಕೆ ಎಲ್ಲಾ ಚೆಕ್ಪೋಸ್ಟ್ಗಳನ್ನು ಸುಲಭವಾಗಿ ದಾಟಿ ಬಂದಿದ್ದು, ಇದರಲ್ಲಿ ಜಿಲ್ಲಾಡಳಿತ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.
ಮೃತ ವ್ಯಕ್ತಿಯ ಶವಪರೀಕ್ಷಾ ವರದಿಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆತನಲ್ಲಿ ಕೊರೊನಾ ವೈರಸ್ ಇತ್ತೇ, ಇಲ್ಲವೇ
ಎನ್ನುವುದು ಖಚಿತಪಟ್ಟಿಲ್ಲ. ಹಾಗಾಗಿ ಮೃತ ವ್ಯಕ್ತಿಯ ಪುತ್ರ ಮುಂಬೈನಲ್ಲಿ ಐಸಿಐಸಿಐ ಬ್ಯಾಂಕ್ ಉದ್ಯೋಗಿ ಯಾಗಿದ್ದು, ಆತನಿಂದ ಸೋಂಕು ಕಾಣಿಸಿಕೊಂಡಿರಬಹುದೆಂದು ಜಿಲ್ಲಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂಬೈನ ದೇಸಾಯಿ ಆಸ್ಪತ್ರೆ ಸಂಪರ್ಕಿಸಿ ಮೃತ ವ್ಯಕ್ತಿಯಲ್ಲಿ ಕೊರೊನಾ ಇತ್ತೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮೃತ ವ್ಯಕ್ತಿಯ ಒಬ್ಬ ಪುತ್ರಿ ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆಯಲ್ಲಿ ವಾಸವಾಗಿದ್ದಾರೆ. ತಂದೆಯ ಅಂತಿಮ ದರ್ಶನ ಪಡೆಯಲು ಆಸೆ ವ್ಯಕ್ತ ಪಡಿಸಿದ್ದರಿಂದ
ಶವವನ್ನು ಮುಂಬೈನಿಂದ ತವರೂರಾದ ಬಿ.ಕೊಡಗಹಳ್ಳಿಗೆ ಕರೆತಂದಿದ್ದಾಗಿ ಹೇಳಲಾಗಿದೆ. ಮುಂಬೈನಿಂದ ಬಂದವರೆಂಬ ಕಾರಣದಿಂದ ಇವರೂ ಸೇರಿದಂತೆ
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 7 ಮಂದಿಯನ್ನು ಏ.24ರಂದೇ ಮೊರಾರ್ಜಿ ದೇಸಾಯಿ ಶಾಲೆಯ ಹಾಸ್ಟೆಲ್ನಲ್ಲಿ ಕ್ವಾರಂ ಟೈನ್ ಮಾಡಲಾಗಿತ್ತು. ಏ.28ರಂದು 7 ಜನರ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ನಾಲ್ವರಲ್ಲಿ ಪಾಸಿಟೀವ್ ಬಂದಿದೆ. ಹೆಂಡತಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸೋಂಕಿತರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಲ್ವರಲ್ಲೂ ರೋಗ ಲಕ್ಷಣಗಳಿಲ್ಲದಿರುವುದು ಕಂಡುಬಂದಿದ್ದು, ಇವರ ಪ್ರಾಥಮಿಕ ಹಾಗೂ ಎರಡನೇ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಆ್ಯಂಬುಲೆನ್ಸ್ ಚಾಲಕನನ್ನು ಕ್ವಾರಂಟೈನ್ ಮಾಡುವಂತೆ ಮುಂಬೈನ ದೇಸಾಯಿ ಆಸ್ಪತ್ರೆಯವರಿಗೆ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್
Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?
IPL ಸನ್ರೈಸರ್ ಹೈದರಾಬಾದ್ ಎದುರಾಳಿ ರಾಜಸ್ಥಾನ್ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು
SIT ವಿಚಾರಣೆಗೆ ರೇವಣ್ಣ,ಪ್ರಜ್ವಲ್ ಗೈರು; ನಾಳೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್ ಸಾಧ್ಯತೆ
Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ