ಕೃಷಿ ಚಟುವಟಿಕೆಗಳಿಗೆ ಕೊರೊನಾ ಕಾರ್ಮೋಡ
Team Udayavani, May 24, 2021, 7:18 PM IST
ಮಂಡ್ಯ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಕೊರೊನಾ ಸೋಂಕುಹರಡಿದ ಪರಿಣಾಮ ಹಾಗೂ ಪೂರ್ವ ಮುಂಗಾರು ವಿಳಂಬವಾದಪರಿಣಾಮಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.ಕಳೆದ ಬಾರಿ ಸಾಕಷ್ಟು ಬೆಳೆಗಳನ್ನು ರೈತರು ಬೆಳೆದಿದ್ದರು. ಆದರೆಕೊರೊನಾ ಲಾಕ್ಡೌನ್ನಿಂದ ರೈತರು ನಷ್ಟ ಅನುಭವಿಸಿದ್ದರು.
ಈ ಬಾರಿ ಅದರ ಪರಿಣಾಮ ಹೆಚ್ಚಾಗಿದೆ. ಜಿಲ್ಲೆಯ ಬಹುತೇಕಗ್ರಾಮಗಳು ಸೀಲ್ಡೌನ್ ಆಗುತ್ತಿರುವುದರಿಂದ ಕೃಷಿಚಟುವಟಿಕೆಗಳಿಗೆ ಹಿನ್ನಡೆಯಾಗಲುಕಾರಣವಾಗಿದೆ.ಗ್ರಾಮಗಳು ಕಂಟೋನ್ಮೆಂಟ್ ಝೊàನ್: ಮೊದಲಅಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಂಡುಬಂದಿರಲಿಲ್ಲ.
ಆದರೆ ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿಹರಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಹೊರಗೆ ಬರದಂತೆಮಾಡಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಕನಿಷ್ಠ 20 ರಿಂದ 30ಗ್ರಾಮಗಳು ಸೀಲ್ಡೌನ್ ಆಗಿದೆ. ಮನೆಯಿಂದ ಯಾರೂಹೊರಬರದಂತೆ ಸೂಚಿಸಲಾಗಿದೆ.
ಪೂರ್ವ ಮುಂಗಾರು ವಿಳಂಬ: ಈ ಬಾರಿಯ ಪೂರ್ವ ಮುಂಗಾರುವಿಳಂಬವಾಗಿದೆ. ಏಪ್ರಿಲ್ನಲ್ಲಿ ಶುರುವಾಗುವ ಪೂರ್ವ ಮುಂಗಾರುಮೇನಲ್ಲೂ ಮುಂದುವರಿಯುತ್ತದೆ.ಈಸಂದರ್ಭ ದಲ್ಲಿ ಹುರುಳಿ, ಎಳ್ಳು,ಉದ್ದು, ಹೆಸರು, ಅಲಸಂದೆ, ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳ ಬಿñನೆ ¤ನಡೆಯುತ್ತಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರುವಿಳಂಬವಾಗಿರುವುದರಿಂದ ಬಿತ್ತನೆ ಪ್ರಮಾಣಕಡಿಮೆಯಾಗಿದೆ.
ಶೇ.4.3ರಷ್ಟು ಬಿತ್ತನೆ: ಪೂರ್ವ ಮುಂಗಾರು ಮಳೆಯಾಗದೆ ಬಿತ್ತನೆಗೆಹಿನ್ನಡೆಯಾಗಿದೆ. ಇದುವರೆಗೂ ಕೇವಲ ಶೇ.4.3ರಷ್ಟು ಮಾತ್ರಬಿತ್ತನೆಯಾಗಿದೆ. ಒಟ್ಟು 8,355 ಹೆಕ್ಟೇರ್ ಪ್ರದೇಶದಲ್ಲಿ ಬಿತನೆ ¤ ಯಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಪೂರ್ವ ಮುಂಗಾರು ಮಳೆಯಾಗುತ್ತಿದು,ªಕೊಂಚ ಬಿತ್ತನೆಕಾರ್ಯ ಚುರುಕುಗೊಳ್ಳುತ್ತಿದೆ.ತಾಲೂಕುವಾರು ಬೆಳೆ ಬಿತ್ತನೆ ವಿವರ: ಜಿಲ್ಲೆಯಲ್ಲಿ ಬಿತ್ತನೆಯಾಗಿರುವಪ್ರದೇಶಗಳ ಪೈಕಿ ತಾಲೂಕುವಾರು ವಿÊರತೆ ಕೆ.ಆರ್.ಪೇಟೆ ಮೊದಲಸ್ಥಾನದಲ್ಲಿದ್ದರೆ, ಮಳೆಯಾಶ್ರಿತ ತಾಲೂಕು ನಾಗಮಂಗಲ 2ನೇ ಸ್ಥಾನದಲ್ಲಿದೆ.ಕೆ.ಆರ್.ಪೇಟೆಯಲ್ಲಿ 6100 ಹೆಕ್ಟೇರ್ ಪ್ರದೇಶ, ನಾಗಮಂಗಲ 1540ಹೆಕ್ಟೇರ್, ಉಳಿದಂತೆ ಮಂಡ್ಯ ತಾಲೂಕಿನಲ್ಲಿ 162 ಹೆಕ್ಟೇರ್, ಮದ್ದೂರು 91ಹೆಕ್ಟೇರ್, ಮಳವಳ್ಳಿ 210 ಹೆಕ್ಟೇರ್, ಶ್ರೀರಂಗಪಟ್ಟಣ 192 ಹೆಕ್ಟೇರ್,ಪಾಂಡವಪುರ60 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆಯಾಗಿದೆ
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ