ರಾಜಕೀಯ ಕುತಂತ್ರಕ್ಕೆ ಬಲಿಯಾಗಿದ್ದೇನೆ: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮಂಜು
Team Udayavani, Dec 10, 2021, 10:15 AM IST
ಮಂಡ್ಯ: ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಬಿ.ಸಿ.ಮಂಜು ಸ್ಪಷ್ಟಪಡಿಸಿದರು.
“ನಿನ್ನೆ ಸಂಜೆಯಿಂದಲೇ ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿಯಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಡಿಸುತ್ತಿದ್ದಾರೆ. ಈ ರಾಜಕೀಯ ಕುತಂತ್ರಕ್ಕೆ ನಾನು ಬಲಿಯಾಗಿದ್ದೇನೆ” ಎಂದು ಕಣ್ಣೀರಿಟ್ಟರು.
“ಎಲ್ಲಿ ಏನಾಗಿದೆ ಎಂಬುದು ದೇವರಿಗೆ ಗೊತ್ತು. ನನಗೆ ಗೊತ್ತಾಗುತ್ತಿಲ್ಲ. ಐದಾರು ಬಾರಿ ಮತದಾರರನ್ನು ಭೇಟಿ ಮಾಡಿ ನಿಮ್ಮ ಜತೆ ಇರುತ್ತೇನೆ ಎಂದು ಹೇಳಿದ್ದೆ. ಆದರೆ ನನಗೆ ಈ ಕ್ಷಣ ಕಷ್ಟವಾಗುತ್ತಿದೆ. ಆದರೂ ನಾನು ನಿಮ್ಮ ಜತೆ ಇರುತ್ತೇನೆ” ಎಂದರು.
“ನಾನು ಕಷ್ಟಪಟ್ಟು ದುಡಿದ ಹಣವಾಗಿದೆ. ಆದರೆ ಬೇರೆ ಪಕ್ಷದವರು ಖರ್ಚು ಮಾಡುವಷ್ಟು ಹಣ ನನಗೆ ಖರ್ಚು ಮಾಡಲು ಸಾಧ್ಯವಾಗಿಲ್ಲ. ಅದು ಒಂದು ಕಾರಣವಾಗಿದೆ. ನನಗೆ ಪಕ್ಷದಿಂದಲೂ ಸ್ವಲ್ಪ ಫಂಡ್ ಬಂದಿದೆ. ಆದರೂ ಸಾಧ್ಯವಾಗಲಿಲ್ಲ” ಎಂದರು.
ಇದನ್ನೂ ಓದಿ:ಪರಿಷತ್ ಫೈಟ್: ಮತದಾನ ಆರಂಭ, ಗೆಲುವಿನ ವಿಶ್ವಾಸದಲ್ಲಿ ಪಕ್ಷಗಳು
“ಮತದಾರರು ಹಣದ ಆಮಿಷಕ್ಕೆ ಬಲಿಯಾಗಬಾರದು. ನೀವು ನನ್ನ ಕೈಬಿಡಲ್ಲ ಎಂಬ ನಂಬಿಕೆ ನನಗಿದೆ. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಈ ರೀತಿಯ ಗಾಸಿಪ್ ನಿಂದ ನನಗೆ ಇಂಥ ಪರಿಸ್ಥಿತಿ ಬಂದಿದೆ” ಎಂದು ಭಾವುಕರಾದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ