ಪ್ರವಾಸಿಗರಿಗೆ ಕೆಆರ್‌ಎಸ್‌ ಬೃಂದಾವನ ಮುಕ್ತ

ಕಾವೇರಿ ನೀರಾವರಿ ನಿಗಮದಿಂದ ಸಕಲ ಸಿದ್ಧತೆ

Team Udayavani, Sep 16, 2020, 4:04 PM IST

ಪ್ರವಾಸಿಗರಿಗೆ ಕೆಆರ್‌ಎಸ್‌ ಬೃಂದಾವನ ಮುಕ್ತ

ಮಂಡ್ಯ: ಕೋವಿಡ್ ದಿಂದ ಕಳೆದ 6 ತಿಂಗಳಿನಿಂದ ಬಂದ್‌ ಆಗಿದ್ದ ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರದ ‘ಬೃಂದಾವನ’ ಉದ್ಯಾನ ಪ್ರವೇಶಕ್ಕೆ ಸೆ.16ರಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಇದರಿಂದ ಬೃಂದಾವನ ತನ್ನ ವೈಭವಕ್ಕೆ ಮರಳಲಿದೆ.

ಕಾವೇರಿ ನೀರಾವರಿ ನಿಗಮ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ  ಸ್ಪಂದಿಸಿದ್ದು, ಬುಧವಾರದಿಂದ  ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿಕಾವೇರಿ ನೀರಾವರಿ ನಿಗಮಸಿದ್ಧತೆ ಮಾಡಿಕೊಂಡಿದೆ.

ಮುಂಜಾಗ್ರತೆ ಕ್ರಮ: ಖಾಸಗಿಗೆ ಏಜೆನ್ಸಿ ನೀಡಲಾಗಿದ್ದು, ಪ್ರವಾಸಿಗರ ಆರೋಗ್ಯ ದೃಷ್ಟಿಯಿಂದ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ  ಕಾಪಾಡಿಕೊಳ್ಳಬೇಕು. ಏಜೆನ್ಸಿಯವರು ಪ್ರವಾಸಿಗರಿಗೆ ಸ್ಯಾನಿಟೈಸರ್‌ ಮಾಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

ಬೋಟಿಂಗ್‌ ಪ್ರಾರಂಭ: ಬೃಂದಾವನ ಉದ್ಯಾನದಲ್ಲಿಜಲಾಶಯ ನೀರಿನಿಂದ ನಡೆಯುವ ಬೋಟಿಂಗ್‌ ವ್ಯವಸ್ಥೆ ಇರಲಿದೆ. ನೀರಿನ ಚಿಲುಮೆ, ಕಾರಂಜಿಗಳು ಚಿಮ್ಮಲಿದ್ದು, ಪ್ರವಾಸಿಗರಿಗೆ ಮೊದಲಿನಂತೆ ಮುದ ನೀಡಲಿವೆ. ವಿವಿಧ ರೀತಿಯ ಬಣ್ಣ ಬಣ್ಣದ ಹೂವುಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿವೆ.

ವ್ಯಾಪಾರ-ವಹಿವಾಟು:  ಕೋವಿಡ್ ದಿಂದ ಬೃಂದಾವನ ಬಂದ್‌ ಮಾಡಿದ್ದರಿಂದ ಇಲ್ಲಿವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ವರ್ತಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ತಮ್ಮಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ ಪರಿಣಾಮ ತೀವ್ರಸಂಕಷ್ಟಅನುಭವಿಸಿದ್ದರು. ಈಗ ಬೃಂದಾವನ ತೆರೆಯುತ್ತಿರು ವುದರಿಂದ ಅಂಗಡಿ-ಮುಂಗಟ್ಟು ಗಳುಮತ್ತೆ ಪ್ರಾರಂಭವಾಗಲಿವೆ.

ಸರ್‌ಎಂವಿ ಮತ್ಸ್ಯಾಲಯ ಕೇಂದ್ರ: ಬೃಂದಾವನದಲ್ಲಿರುವ ಸರ್‌ಎಂ.ವಿ.ವಿಶ್ವೇಶರಯ್ಯಮತ್ಸ್ಯಾಲಯ ಕೂಡ ಬಂದ್‌ ಆಗಿತ್ತು. ಈಗ ಬೃಂದಾವನ ತೆರೆಯುವುದರಿಂದ ಮತ್ಸ್ಯಾಲಯ ಕೇಂದ್ರ ತೆರೆಯಲಿದ್ದು, ಪ್ರವಾಸಿಗರು ಮತ್ಸ್ಯಗಳ ಪ್ರದರ್ಶನಕಣ್ತುಂಬಿಕೊಳ್ಳಬಹುದು.

ಹೆಚ್ಚು ಪ್ರವಾಸಿಗರು : ಪ್ರತಿ ವರ್ಷ ದಸರಾ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ದಿಂದ ಸರಳ ದಸರಾ ಆಚರಣೆಗೆ ಮುಂದಾಗಿ ರುವುದರಿಂದ ಪ್ರವಾಸಿಗರ ಸಂಖ್ಯೆಕಡಿಮೆಯಾಗುವ ಸಾಧ್ಯತೆ ಇದೆ.

ಸರ್ಕಾರಕ್ಕೆ 1.5 ಕೋಟಿರೂ. ನಷ್ಟ “: ಕೋವಿಡ್ ದಿಂದ ಕೃಷ್ಣರಾಜಸಾಗರ ಜಲಾಶಯದ”ಬೃಂದಾವನ’ ಉದ್ಯಾನವನ್ನು ಬಂದ್‌ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 1.5 ಕೋಟಿರೂ. ನಷ್ಟವಾಗಿದೆ. ಕೋವಿಡ್ ಗೂ ಮುಂಚೆ ಪ್ರತಿದಿನ ಸುಮಾರು 7ರಿಂದ 8 ಸಾವಿರ ಪ್ರವಾಸಿಗರು ಭೇಟಿನೀಡುತ್ತಿದ್ದರು. ವಾರದ ರಜಾ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಇದರಿಂದಲಕ್ಷಾಂತರ ರೂ. ಆದಾಯಬರುತ್ತಿತ್ತು. ಆದರೆ, ಕೊರೊನಾದಿಂದ ಆದಾಯ ವಿಲ್ಲದೆ ಕಳೆದ 6 ತಿಂಗಳಿನಿಂದಬೃಂದಾವನ ಬೀಕೋ ಎನ್ನುತ್ತಿತ್ತು.

ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಹೆಚ್ಚಳ :  ಕೋವಿಡ್ ಪರಿಣಾಮ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮಕ್ಕೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.ಈಗ ಬೃಂದಾವನ ಬಂದ್‌ ತೆರವುಗೊಳಿಸು ತ್ತಿರುವುದರಿಂದ ರಂಗನತಿಟ್ಟಿಗೆ ಪ್ರವಾಸಿಗರು ಹೆಚ್ಚಾಗುವ ಸಾಧ್ಯತೆ ಇದೆ. ಸೆ.1ರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶನೀಡಲಾಗಿತ್ತು. ಆದರೆ, ಪ್ರತಿದಿನ100ರಿಂದ150ಮಂದಿ ಮಾತ್ರ ಬರುತ್ತಿದ್ದಾರೆ.ಕೊರೊನಾಗೂ ಮುಂಚೆ ಪ್ರತಿದಿನ2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಈಗ ಬೃಂದಾವನ ತೆರೆದಿರುವುದರಿಂದ ಪಕ್ಷಿಧಾಮಕ್ಕೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪಕ್ಷಿಧಾಮದ ಅಧಿಕಾರಿಗಳು

ಬೋಟಿಂಗ್‌ ಸ್ಥಗಿತ :  ಕೆಆರ್‌ಎಸ್‌ ಜಲಾಶಯದಿಂದ 6 ಸಾವಿರಕ್ಕೂ ಹೆಚ್ಚುಕ್ಯೂಸೆಕ್‌ ನೀರು ಕಾವೇರಿ ನದಿಗೆ ಹರಿಸುತ್ತಿರುವುದ ರಿಂದ ಸೋಮವಾರ ಮಧ್ಯಾಹ್ನ ದಿಂದ ಪಕ್ಷಿಧಾಮದ ಬೋಟಿಂಗ್‌ ಸ್ಥಗಿತಗೊಳಿಸಲಾಗಿದೆ.

ಬೃಂದಾವನ ತೆರೆಯಲಿದ್ದು, ಪ್ರವಾಸಿಗರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರವಾಸಿಗರ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ.ಕಡ್ಡಾಯಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರಕಾಪಾಡಿ ಕೊಳ್ಳಲು ಒತ್ತು ನೀಡಲಾಗಿದೆ. ರಾಜು, ಕಾರ್ಯಪಾಲಕಇಂಜಿನಿಯರ್‌, ಕಾನೀನಿನಿ, ಕೆ.ಆರ್‌.ಸಾಗರ ವಿಭಾಗ

ಕೋವಿಡ್ ದಿಂದ ರಂಗನತಿಟ್ಟು ಪಕ್ಷಿ ಧಾಮವನ್ನು ಬಂದ್‌ ಮಾಡಲಾಗಿತ್ತು.ಇದರಿಂದ ಲಕ್ಷಾಂತರ ರೂ. ಸರ್ಕಾರದಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು. ಸೆ.1ರಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ,ಕೊರೊನಾ ಮುಂಚೆ ಇದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿ ಮುಖವಾಗಿದೆ. ಬೃಂದಾವನ ತೆರೆಯುತ್ತಿರುವು ದರಿಂದ ಪಕ್ಷಿಧಾಮಕ್ಕೂ ಪ್ರವಾಸಿ ಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. –ಅಲೆಗ್ಸ್ಯಾಂಡರ್‌, ಉಪ ಅರಣ್ಯಾಧಿಕಾರಿ, ಮೈಸೂರು ವನ್ಯಜೀವಿ ವಿಭಾಗ

– ಎಚ್‌.ಶಿವರಾಜು

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM ಆಗಲು ನಮ್ಮ ಬಳಿ ಕೈಕಟ್ಟಿ ನಿಂತಿದ್ದ ಎಚ್‌ಡಿಕೆ: ಸಚಿವ ಚಲುವರಾಯಸ್ವಾಮಿ

CM ಆಗಲು ನಮ್ಮ ಬಳಿ ಕೈಕಟ್ಟಿ ನಿಂತಿದ್ದ ಎಚ್‌ಡಿಕೆ: ಸಚಿವ ಚಲುವರಾಯಸ್ವಾಮಿ

March 21: ಚೆನ್ನೈಯಲ್ಲಿ 3ನೇ ಬಾರಿಗೆ ಎಚ್‌ಡಿಕೆಗೆ ಹೃದಯ ಶಸ್ತ್ರ ಚಿಕಿತ್ಸೆ

March 21: ಚೆನ್ನೈಯಲ್ಲಿ 3ನೇ ಬಾರಿಗೆ ಎಚ್‌ಡಿಕೆಗೆ ಹೃದಯ ಶಸ್ತ್ರ ಚಿಕಿತ್ಸೆ

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ: ಗುಟ್ಟು ಬಿಡದ ಎಚ್‌ಡಿಕೆ

Mandya; ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ: ಗುಟ್ಟು ಬಿಡದ ಎಚ್‌ಡಿಕೆ

Sumalatha Ambareesh ನನ್ನ ಸ್ವಂತ ಅಕ್ಕ ಇದ್ದಂತೆ: ಎಚ್‌ಡಿಕೆ

Sumalatha Ambareesh ನನ್ನ ಸ್ವಂತ ಅಕ್ಕ ಇದ್ದಂತೆ: ಎಚ್‌ಡಿಕೆ

Lok Sabha Election; ಸುಮಲತಾ ನಡೆ ಬಗ್ಗೆ ಕುತೂಹಲ

Lok Sabha Election; ಸುಮಲತಾ ನಡೆ ಬಗ್ಗೆ ಕುತೂಹಲ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.