ಶಿವಪುರದಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ಪೊಲೀಸರು ತಡೆ
Team Udayavani, Jan 27, 2021, 4:11 PM IST
ಮದ್ದೂರು: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿಗೆ ಮದ್ದೂರು ಪೊಲೀಸರು ಶಿವಪುರದಲ್ಲಿ ತಡೆಯೊಡ್ಡಿದ್ದರಾದರೂ ಬ್ಯಾರಿಕ್ಯಾಡ್ ಕಿತ್ತೂಗೆದ ರೈತರು, ರಾಜಧಾನಿಯತ್ತ ತೆರಳಿದರು.
ಬೆಂಗಳೂರು ನಗರಕ್ಕೆ ಟ್ರ್ಯಾಕ್ಟರ್ ರ್ಯಾಲಿ ಮೂಲಕ ತೆರಳುವ ಸಲುವಾಗಿ ಮೈಸೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಸೋಮವಾರ ರಾತ್ರಿ ಮದ್ದೂರಿನಲ್ಲಿ ತಂಗಿದ್ದು ಮಂಗಳವಾರ ಬೆಳಗ್ಗೆ ರಾಜಧಾನಿಯತ್ತ ತೆರಳಲು ಅಣಿಯಾದ ವೇಳೆ ಸ್ಥಳೀಯ ಪೊಲೀಸರು ಶಿವಪುರದಲ್ಲಿ ಹೆದ್ದಾರಿಗೆ ಬ್ಯಾರಿಕ್ಯಾಡ್ ಅಳವಡಿಸಿ, ಟ್ರ್ಯಾಕ್ಟರ್ಗಳನ್ನು ತಡೆಯಲು ಯತ್ನಿಸಿದರು.
ಪ್ರತಿಭಟನೆ ಹತ್ತಿಕ್ಕಲು ಯತ್ನ: 500ಕ್ಕೂ ಹೆಚ್ಚು ರೈತರು, ರೈತ ಸಂಘಟನೆಗಳ ಮುಖಂಡರು ಪೊಲೀಸರೊಡನೆ ಮಾತಿನ ಚಕಮಕಿಗಿಳಿದರಲ್ಲದೇ ಶಾಂತಿಯುತ ಪ್ರತಿಭಟನೆಗಾಗಿ ರಾಜಧಾನಿಗೆ ತೆರಳುತ್ತಿದ್ದು, ರೈತರ ಪ್ರತಿಭಟನೆ ಹತ್ತಿಕ್ಕಲು ಮಂಡ್ಯ ಜಿಲ್ಲಾಡಳಿತ ಪೊಲೀಸರನ್ನು ಬಳಸಿಕೊಳ್ಳುತ್ತಿರುವು ದಾಗಿ ಹರಿಹಾಯ್ದರು.
ಮದ್ದೂರು ಸಿಪಿಐ ಕೆ.ಆರ್. ಪ್ರಸಾದ್ ಮತ್ತು ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಭದ್ರತೆಗೆ ನೇಮಿಸಿದ್ದ ಇಬ್ಬರು ಪೊಲೀಸ್ ಪೇದೆಗಳೂ ಸೇರಿದಂತೆ ಇಬ್ಬರು ರೈತರಿಗೆ ಸಣ್ಣಪುಟ್ಟಗಾಯಾಗಳಾದವು.
ಇದನ್ನೂ ಓದಿ:ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಪ್ರತಿಭಟನೆಯಲ್ಲಿ ಸ್ಥಳೀಯ ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ರಾಮಕೃಷ್ಣಯ್ಯ, ಉಮೇಶ್, ವರದಪ್ಪ, ಮೈಸೂರು ಪ್ರಸನ್ನಗೌಡ, ಕೀಲಾರ ಸೋಮಶೇಖರ್, ರವಿಕುಮಾರ್, ಲಿಂಗಪ್ಪಾಜಿ, ಶಂಕರೇಗೌಡ, ಜಿ.ಎ. ಶಂಕರ್, ನಾಗರಾಜು, ಅಶೋಕ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ