ಅಣೆಕಟ್ಟೆಗೆ ಅಪಾಯವಿಲ್ಲ, ದೃಷ್ಟಿ ಪೂಜೆ ಮಾಡಿಸುವೆ
Team Udayavani, Jul 20, 2021, 12:51 PM IST
ಶ್ರೀರಂಗಪಟ್ಟಣ: ಕೆಆರ್ಎಸ್ ಅಣೆಕಟ್ಟೆಯ ಒಳ ಭಾಗದ ಬಳಿ ಇರುವ ಉದ್ಯಾನವನಕ್ಕೆ ಹೋಗುವ ರಸ್ತೆಯ ಪ್ರದೇಶದ ಕಟ್ಟಡದಲ್ಲಿ ಕಲ್ಲುಗಳು ಕುಸಿದಿದೆ ಹೊರೆತು ಅಣೆಕಟ್ಟೆಗೆಯಾವುದೇ ಸಂಬಂಧವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಕುಸಿತ ಹಿನ್ನೆಲೆ ಪರಿಶೀಲನೆ ನಡೆಸಿದಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಈಗಾಗಲೇ ಸ್ಥಳ ಪರಿಶೀಲನೆ, ಅಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಣೆಕಟ್ಟೆಗೂ ಕುಸಿತದ ಪ್ರದೇಶಕೂ ಸುಮಾರು16ಮೀಟರ್ ಅಂತರವಿದೆ. ಆ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಅಧಿಕಾರಿ ಗಳಿಗೆ ತಕ್ಷಣದಲ್ಲಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದೇನೆ. ಕಾಮಗಾರಿ ಕೂಡ ಈಗಾಗಲೇ ನಡೆಯುತ್ತಿರುವುದರಿಂದ ಸರ್ಕಾರಕೂಡಅಣೆಕಟ್ಟೆಪರಿಶೀಲನೆನಡೆಸಿಈ ವಿಚಾರದಲ್ಲಿ ಸುಭದ್ರವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ದೃಷ್ಟಿಹೋಮ ಮಾಡಬೇಕು: ಪದೇ ಪದೆ ಎಷ್ಟೋ ಮಂದಿ ಕೆಆರ್ಎಸ್ ವಿಚಾರದಲ್ಲಿ ಮಾತನಾಡುವ ವೃತ್ತಿ ಮಾಡಿ ಕೊಂಡಿದ್ದಾರೆ. ಆದ್ದರಿಂದ ಅಣೆಕಟ್ಟೆಗೆ ದೃಷ್ಟಿಯಾಗಿದೆ. ದೃಷ್ಟಿಹೋಮ ಮಾಡಿಸಿ ಎಂದು ಸರ್ಕಾರಕ್ಕೂ ಈ ವಿಷಯ ತಿಳಿಸಿದ್ದೇನೆ. ಸರ್ಕಾರ ಮಾಡದಿದ್ದರೆ ನಾನೇ ಒಂದು ದಿನ ಹೋಮಪೂಜೆ ಮಾಡುವ ಯೋಚನೆ ಮಾಡಿದ್ದೇನೆ. ಅಣೆಕಟ್ಟೆ ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಕಟ್ಟಡ ಕುಸಿತದ ಫೋಟೊಗಳು ಬಹು ಬೇಗನೆ ಒಬ್ಬರನ್ನು ನೆಚ್ಚಿಸಿಕೊಳ್ಳಲು ಯಾರೋ ಬಹಿರಂಗವಾಗಿ ಲೀಕ್ ಮಾಡುತ್ತಿದ್ದಾರೆ. ಈ ಬಗ್ಗೆ ಭದ್ರತಾ ವ್ಯವಸ್ಥೆಯ ಲೋಪವೂ ಇದೆ. ಯಾರೊಬ್ಬರೂ ಕಳಂಕ ತರುವ ಕೆಲಸ ಮಾಡಬಾರದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ