ಕಟ್ಟಡ ನಿರ್ಮಾಣಕ್ಕೆ ನೀರು ಸ್ಥಗಿತ

ತುಂಬೆ: ನೀರಿನ ಕೊರತೆ ಹಿನ್ನೆಲೆ

Team Udayavani, Apr 29, 2019, 10:43 AM IST

29-April-4

ಸಾಂದರ್ಭಿಕ

ಮಹಾನಗರ : ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ರಚನೆ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವನ್ನು ಇದೀಗ ಸ್ಥಗಿತಗೊಳಿಸಲಾಗಿದೆ.

ನಿರ್ಮಾಣ ಕಟ್ಟಡಗಳ ಬಳಕೆಗೆಂದು ಮಹಾನಗರ ಪಾಲಿಕೆಯು ಪ್ರತ್ಯೇಕ ಪೈಪ್‌ಲೈನ್‌ ಮುಖೇನ ಪ್ರತೀ ದಿನ 6 ಮಿಲಿ ಯನ್‌ ಲೀಟರ್‌ ನೀರು ಸರಬರಾಜು ಮಾಡುತ್ತಿತ್ತು. ವಾಡಿಕೆಯಂತೆ ಮುಂಗಾರು ಆರಂಭಗೊಳ್ಳಲು ಇನ್ನೂ, ಸುಮಾರು ಒಂದು ತಿಂಗಳು ಬಾಕಿ ಇದೆ. ಮುಂಗಾರು ಪ್ರಾರಂಭವಾಗುವವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.

ತುಂಬೆ ಡ್ಯಾಂ ನೀರನ್ನು ಕುಡಿಯಲು ಮಾತ್ರ ಬಳಸಲು ಪಾಲಿಕೆ ನಿರ್ಧರಿಸಿದೆ. ಇದಕ್ಕಾಗಿ ಕೈಗಾರಿಕೆಗಳಿಗೆ ಹೋಗುವ ನೀರನ್ನು ಕೂಡ ಕೆಲವು ದಿನಗಳ ಹಿಂದೆ ಕಡಿಮೆ ಮಾಡಲಾಗಿತ್ತು. ಎಂಆರ್‌ಪಿಎಲ್ ಮತ್ತು ಎಂಎಸ್‌ಇಝಡ್‌ ಸಂಸ್ಥೆಯು ಎಎಂಆರ್‌ ಕಿಂಡಿ ಅಣೆಕಟ್ಟಿನಿಂದ ನೀರನ್ನು ಬಳಕೆ ಮಾಡುತ್ತಿದ್ದು, ಇದರಲ್ಲಿ ಎಂಎಸ್‌ಇಝಡ್‌ ಸಂಸ್ಥೆಗೆ 27 ಎಂ.ಜಿ.ಡಿ. ಮತ್ತು ಎಂಆರ್‌ಪಿಎಲ್ ಸಂಸ್ಥೆಗೆ 6 ಎಂ.ಜಿ.ಡಿ. ನೀರನ್ನು ಮೇಲೆತ್ತಲು ಅನುಮತಿ ಇತ್ತು. ಈ ಎರಡೂ ಸಂಸ್ಥೆಯು ಬೇಸಗೆ ಪ್ರಾರಂಭವಾದ ಅವಧಿಯಲ್ಲಿ 18 ಎಂ.ಜಿ.ಡಿ. ನೀರನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆಯಷ್ಟೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಸಿ ನೀರು ಬಳಕೆ ಪ್ರಮಾಣವನ್ನು ತೀರ್ಮಾನಿಸಲಾಗಿತ್ತು. ಈಗ ಎಎಂಆರ್‌ ಅಣೆಕಟ್ಟಿನಲ್ಲಿ ಬಹುತೇಕ ನೀರು ಖಾಲಿಯಾಗಿರುವುದರಿಂದ ಈ ಎರಡೂ ಸಂಸ್ಥೆಗಳು ಸೇರಿ ದಿನಕ್ಕೆ 6.50 ಎಂ.ಜಿ.ಡಿ. ಮಾತ್ರ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ತುಂಬೆ ಡ್ಯಾಂನಲ್ಲಿ ಎ. 28ರಂದು ಮಧ್ಯಾಹ್ನ ವೇಳೆ 4.90 ಮೀಟರ್‌ ನೀರಿತ್ತು. ನಿರಂತರ ನೀರು ಪೂರೈಕೆ ಮಾಡಿದರೆ ಮುಂದಿನ 28 ದಿನಗಳಿಗೆ ಸಾಕಾಗುತ್ತದೆ. ನಗರದಲ್ಲಿ ದಿನವೊಂದಕ್ಕೆ 137 ಎಂ.ಎಲ್.ಡಿ. ನೀರಿಗೆ ಬೇಡಿಕೆ ಇದೆ.

ಪ್ರತೀ ದಿನ ತುಂಬೆಯಿಂದ 18 ಎಂಜಿಡಿ ಪೈಪ್‌ಲೈನ್‌ ಮುಖೇನ ನಗರಕ್ಕೆ 160 ಎಂಎಲ್ಡಿ ನೀರು ಸರಬರಾಜು ಆಗುತ್ತಿದೆ.

ನಗರದಲ್ಲಿ ದಿನವೊಂದಕ್ಕೆ ಮನೆ ಬಳಕೆಗೆ 73 ಮಿಲಿಯನ್‌ ಲೀಟರ್‌, ಇತರ ಕಟ್ಟಡಗಳಿಗೆ 15 ಮಿಲಿಯನ್‌ ಲೀಟರ್‌, ನಿರ್ಮಾಣ ಕಟ್ಟಡಗಳಿಗೆ 6 ಮಿಲಿಯನ್‌ ಲೀಟರ್‌, ಬಹುಮಹಡಿ ಕಟ್ಟಡ ಸಂಕೀರ್ಣಗಳಿಗೆ 10 ಮಿಲಿಯನ್‌ ಲೀಟರ್‌, ಕೈಗಾರಿಕೆಗಳಿಗೆ 13 ಮಿಲಿಯನ್‌ ಲೀಟರ್‌ ನೀರು ಪ್ರತೀ ದಿನ ಬಳಕೆಯಾಗುತ್ತಿದೆ.

ಕಟ್ಟಡ ಕೆಲಸಕ್ಕೆ ನೀರು ಬಳಕೆ ಸ್ಥಗಿತ
ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಹರಿವು ಇಲ್ಲದ ಕಾರಣದಿಂದಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ರಚನೆ ಉದ್ದೇಶಕ್ಕೆ ಬಳಸುವ ನೀರಿನ ಜೋಡಣೆಯನ್ನು ಸ್ಥಗಿತಗೊಳಿಸಲಾಗಿದೆ.
ಲಿಂಗೇಗೌಡ,
ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ

ಕುಡಿಯುವ ನೀರಿಗೆ ಪ್ರಾಶಸ್ತ್ಯ
ಪಾಲಿಕೆಯು ಕಟ್ಟಡ ನಿರ್ಮಾಣಕ್ಕೆ ನೀರು ಕಡಿತಗೊಳಿಸಿದ್ದಕ್ಕೆ ನಮ್ಮ ವಿರೋಧವಿಲ್ಲ. ಏಕೆಂದರೆ, ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಸದ್ಯ ಕಟ್ಟಡ ನಿರ್ಮಾಣಕ್ಕೆ ನೀರಿನ ಆವಶ್ಯಕತೆಗೆಂದು ಬಾವಿ, ಕೊಳವಿಬಾವಿಯ ನೀರನ್ನು ಉಪಯೋಗಿಸುತ್ತಿದ್ದೇವೆ.
ಪುಷ್ಪರಾಜ್‌ ಜೈನ್‌,
ಕ್ರೆಡಾಯ್‌ ರಾಜ್ಯ ಉಪಾಧ್ಯಕ್ಷ

ಹೊಟೇಲ್ ಗಳಿಗೂ ನೀರಿನ ಕೊರತೆ
ನಗರದಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ಸಹಿತ ಸುಮಾರು 400ರಿಂದ 500 ಹೊಟೇಲ್ಗಳಿವೆ. ಕೆಲವೊಂದು ಹೊಟೇಲ್ಗಳಲ್ಲಿ ಬಾವಿ ಮತ್ತು ಕೊಳವೆಬಾವಿಯ ವ್ಯವಸ್ಥೆ ಇದೆ. ಇನ್ನುಳಿದ ಹೊಟೇಲ್ಗಳಲ್ಲಿ ಸದ್ಯ ನೀರಿನ ಅಭಾವವಿದೆ. ಕೆಲವೊಂದು ಹೊಟೇಲ್ಗಳಿಗೆ ಟ್ಯಾಂಕರ್‌ ಮುಖೇನ ನೀರು ಸರಬರಾಜು ಮಾಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೊಟೇಲ್ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ಹೊಟೇಲ್ ಮಾಲಕರು.

ವಿಶೇಷ ವರದಿ

 

ಟಾಪ್ ನ್ಯೂಸ್

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.