ಕಲುಷಿತ ನೀರು ತಡೆಗೆ ಮುಂದಾದ ಮೈಸೂರು ವಿವಿ


Team Udayavani, Dec 27, 2019, 2:05 PM IST

mysuru-tdy-1

ಮೈಸೂರು: ಕುಕ್ಕರಹಳ್ಳಿ ಕೆರೆಯ ಉತ್ತರ ಬಂಡ್‌ ಮತ್ತು ಹುಣಸೂರು ರಸ್ತೆಯ ಮಧ್ಯಭಾಗದಲ್ಲಿ ಎರಡು ದ್ವೀಪಗಳನ್ನು ರಚಿಸಿ ಅವುಗಳ ಸುತ್ತ ಪಡುವಾರಹಳ್ಳಿ ಕಡೆಯಿಂದ ಹರಿಯುವ ಹೊರಚರಂಡಿ ನೀರು ಈ ದ್ವೀಪಗಳನ್ನು ಸುತ್ತಿ ಅನಂತರ ದಟ್ಟವಾಗಿ ಬೆಳೆದಿರುವ ಗಿಡಗಳ ಮಧ್ಯದಲ್ಲಿ ಹರಿದು ಕೆರೆ ಸೇರುವಂತೆ ಮಾಡುವ ಸಂಬಂಧ ಮೈಸೂರು ವಿವಿ ಕಾರ್ಯ ಪ್ರವೃತ್ತ ವಾಗಿದೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಇತ್ತೀಚೆಗೆ ಮೈಸೂರು ವಿವಿ ಕುಲಪತಿಗೆ ಪತ್ರ ಬರೆದು ಮಾಡಿದ್ದ ಮನವಿಗೆ ಸ್ಪಂದಿಸಿರುವ ವಿವಿ, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅವಶ್ಯ ಕಾಮಗಾರಿಗಳ ಬಗ್ಗೆ ಕುಲಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವಂತ ವಿವಿ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದೆ.

ಚರಂಡಿ ನೀರು ತಡೆ: ಕುಕ್ಕರಹಳ್ಳಿ ಕೆರೆಗೆ ಪಡುವಾರಹಳ್ಳಿ ಕಡೆಯಿಂದ ಹೊರಚರಂಡಿ ನೀರು ಸೇರುತ್ತಿದೆ. ಈ ಹೊರ ಚರಂಡಿ ನೀರಲ್ಲಿ ದನಗಳ ಗಂಜಲ, ಪಾತ್ರೆ ತೊಳೆದ, ಬಟ್ಟೆ ಒಗೆದ ನೀರು, ವಾಹನಗಳನ್ನು ಸ್ವಚ್ಛ ಮಾಡಲು ಫೋಮ್‌, ಶಾಂಪು ನಂತಹ ನೊರೆ ಬರುವಂತಹವು ಇರುತ್ತವೆ. ಆಗಾಗ ಹೊರಚರಂಡಿ ಪೈಪುಗಳು ಒಡೆದು ಅದರ ನೀರು ಸಹ ಕೆರೆ ಸೇರುತ್ತಿದೆ.

ಕಾಲುವೆಯಲ್ಲಿ ನೀರು ಹರಿಯಬೇಕು: ಹುಣಸೂರು ರಸ್ತೆಯಲ್ಲಿನ ಮೋರಿಯ ಮೂಲಕ ಕುಕ್ಕರಹಳ್ಳಿ ಕೆರೆ ಸೇರುವ ಈ ಹೊರಚರಂಡಿ ನೀರನ್ನು ಎಡಕ್ಕೆ ಮತ್ತು ಬಲಕ್ಕೆ ಉದ್ದವಾದ ಕಾಲುವೆ ತೋಡಿ ಈ ಕಾಲುವೆಯಲ್ಲಿ ಹರಿಯುವಂತೆ ಮಾಡಬೇಕು. ಜೊತೆಗೆ ಎರಡು ದ್ವೀಪಗಳನ್ನು ಕೆರೆಯ ಉತ್ತರ ಬಂಡ್‌ ಮತ್ತು ಹುಣಸೂರು ರಸ್ತೆಯ ಮಧ್ಯದ ಭಾಗದಲ್ಲಿ ರಚಿಸಿ ಈ ಹೊರಚರಂಡಿ ನೀರು ಈ ದ್ವೀಪಗಳನ್ನು ಸುತ್ತಿ ನಂತರ ದಟ್ಟವಾಗಿ ಬೆಳೆದಿರುವ ಗಿಡಗಳ ಮಧ್ಯೆ ಹರಿದು ಕೆರೆ ಸೇರುವಂತಾಗಬೇಕು. ಹೀಗೆ ಮಾಡುವುದರ ಮೂಲಕ ಗಂಜಲ ಮೊದಲಾದವುಗಳ ಘಾಟು ಕಡಿಮೆ ಯಾಗಿ ಕೆರೆಯ ನೀರನ್ನು ಕಲುಷಿತಗೊಳಿಸುವುದು ಕಡಿಮೆಯಾಗುತ್ತದೆ.

ಜೆಟ್ಟಿಂಗ್‌ ಯಂತ್ರದ ಮೂಲಕ ಸ್ವಚ್ಛಗೊಳಿಸಬೇಕು: ಉತ್ತರ ಬಂಡ್‌ನ‌ ಮೋರಿಯ ಆಸುಪಾಸಿನಲ್ಲಿ ಶೇಖರವಾಗಿರುವ ಕೊಳೆತ ನೀರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿರುವ ಜೆಟ್ಟಿಂಗ್‌ ಯಂತ್ರದ ಮೂಲಕ ಸ್ವಚ್ಛ ಗೊಳಿಸಬೇಕು. ಬಹಳ ವರ್ಷಗಳಿಂದ ಕಲುಷಿತ ನೀರು ಹರಿದಿರುವ ಈ ಭಾಗದಲ್ಲಿ ತೇವಾಂಶದಲ್ಲಿ ಬೆಳೆಯುವ ಮರಗಳಾದ ನೀರಂಜಿ, ತಾಳೆಮರ, ನೀರ್‌ಕದಂಬ, ಶ್ರೀತಾಳೆ ಇಂತಹವುಗಳನ್ನು ಬೆಳೆಯಬಹುದು. ಜೊತೆಗೆ ಈ ಭಾಗದ ತೇವವಿಲ್ಲದ ಸ್ಥಳದಲ್ಲಿ ಹಣ್ಣಿನ ಮರಗಳನ್ನು ದಟ್ಟವಾಗಿ ಬೆಳೆಯುವುದರ ಮೂಲಕ ಹುಣಸೂರು ರಸ್ತೆಯಲ್ಲಿನ ವಾಹನಗಳ ಶಬ್ದ ತಡೆಯುವುದರ ಮೂಲಕ ಪಕ್ಷಿಗಳಿಗೆ ಶಬ್ದದಿಂದ ಆಗುವ ತೊಂದರೆ ಕಡಿಮೆಯಾಗಬಹುದು.

ಹೊರಚರಂಡಿ ನೀರನ್ನು ಶುದ್ಧಿಕರಿಸಿ ಕೆರೆಗೆ ಬಿಡಿ: ಈ ಭಾಗದ ಪಕ್ಕದಲ್ಲಿ ಐದಾರು ವರ್ಷಗಳ ಹಿಂದೆ ಬೆಳೆದಿದ್ದ ಸಾವಿರಕ್ಕಿಂತ ಹೆಚ್ಚು ನೀಲಗಿರಿ ಮರಗಳನ್ನು ಬುಡಸಮೇತ ತೆಗೆದು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗ ಮೈಸೂರು ವಿವಿ ಕುಲಪತಿ  ಗಳಾಗಿದ್ದ ಪ್ರೊ.ವಿ.ಜಿ.ತಳವಾರ್‌ ಅವರು ಸಹಕರಿಸಿದ್ದರು. ಕರ್ನಾಟಕ ಸರ್ಕಾರದ ಬಜೆಟ್‌ನ ಅನುದಾನದ 3 ಕೋಟಿ ರೂ. ಉಳಿದಿರುವ ಹಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಪೇಕ್ಷಣೀಯ. ಕಲುಷಿತಗೊಂಡಿ ರುವ ಈ ಭಾಗವು ಬಹಳ ವರ್ಷಗಳಿಂದ ಹಾಗೆಯೇ ಉಳಿದಿದೆ, ಇದನ್ನು ಸ್ವಚ್ಛಗೊಳಿಸುವುದು ಅವಶ್ಯಕ ಮತ್ತು ಹೊರಚರಂಡಿ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಿ ಕೆರೆಗೆ ಹರಿಸುವುದು ಒಳ್ಳೆಯದು ಎಂದು ಡಾ.ಜಯರಾಮಯ್ಯ ತಿಳಿಸಿದ್ದರು.

ಟಾಪ್ ನ್ಯೂಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13-fusion

UV Fusion: ಏರಿಯಾ 51

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.