ಹುಣಸೂರು: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
Team Udayavani, Jan 7, 2021, 9:07 PM IST
ಹುಣಸೂರು: ಹುಣಸೂರು ತಾಲೂಕಿನ ಮುದ್ನಳ್ಳಿ ಮೀಸಲು ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಕಾಳ ಬೂಚನಹಳ್ಳಿಯ ಶಿವಣ್ಣ ನಾಯ್ಕರ ಶವವೆಂದು ಗುರುತಿಸಲಾಗಿದ್ದು. ಇವರು ಡಿ.23 ರಂದು ಕೊಡಗಿನ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದರು. ಹಿಂದುರುಗಿ ಬಂದಿರಲಿಲ್ಲ. ಜ7 ಬೆಳಗ್ಗೆ ದನಗಾಹಿಗಳು ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.