ಶಿಥಿಲಗೊಂಡ ಎಚ್‌.ಡಿ.ಕೋಟೆ ತಾಪಂ ಕಟ್ಟಡ


Team Udayavani, Jan 3, 2023, 3:29 PM IST

tdy-14

ಎಚ್‌.ಡಿ.ಕೋಟೆ: ಛಾವಣಿ ಕುಸಿದು ಬೀಳುತ್ತಿದೆ, ಕಟ್ಟಡದ ಗೋಡೆಗಳು ಶಿಥಿಲಾವಸ್ಥೆ ತಲುಪಿವೆ, ಇಡೀ ಕಟ್ಟಡ ಯಾವಾಗ ಎಲ್ಲಿ ಕುಸಿದು ಬೀಳುವುದೋ ಅನ್ನುವ ಸ್ಥಿತಿ ತಲುಪಿ, ಭಯದ ನಡುವೆಯೂ ಜೀವದ ಹಂಗು ತೊರೆದು ಶಿಥಿಲಾವಸ್ಥೆ ಕಟ್ಟಡದ ಒಳಗೆ ತಲೆಯ ಮೇಲೆ ಅಪಾಯ ಹೊತ್ತು ಕಚೇರಿ ಸಿಬ್ಬಂದಿ ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಲೂಕು ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಪಂ ಕಟ್ಟಡ ಶಿಥಿಲಾವಸ್ಥೆ ತಲುಪಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ತಾಪಂ ಸಿಬ್ಬಂದಿ ತಾಪಂ ಕಟ್ಟಡದಲ್ಲಿ ಯಾವಾಗ ಎಲ್ಲಿ ಏನು ಸಂಭವಿಸುವುದೋ ಅನ್ನುವ ಭೀತಿಯಲ್ಲಿ ಪ್ರತಿಕ್ಷಣ ಕಳೆಯುವಂತಾಗಿದೆ.

ತಾಲೂಕು ಇಡೀ ಗ್ರಾಪಂಗಳ ನಿಯಂತ್ರಣದ ಹೊಣೆ ಹೊತ್ತಿರುವ ತಾಪಂ ಕಟ್ಟಡ ತೀರ ಶಿಥಿಲಗೊಂಡಿದ್ದು, ಶಿಥಿಲಗೊಂಡ ಕಟ್ಟಡದಲ್ಲಿ ಕಚೇರಿ ನೌಕರರು ಜೀವ ಭಯದಲ್ಲಿಯೇ ಕರ್ತವ್ಯ ನಿರ್ವಹಿಸಿ ಎಷ್ಟು ಬೇಗ ಸಂಜೆಯಾಗಿ ನಾವು ಸುರಕ್ಷಿತವಾಗಿ ಮನೆ ಸೇರಿಕೊಳ್ಳುತ್ತೇವೆಯೋ ಅನ್ನುವ ಭಯದಲ್ಲಿದ್ದಾರೆ.

ಶಿಥಿಲಗೊಂಡಿದೆ ಓಬೀರಾಯನ ಕಾಲದ ತಾಪಂ ಕಟ್ಟಡ: ತಾಲೂಕು ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಪಂ ಕಟ್ಟಡ ತೀರ ಹಳೆಯದಾಗಿದ್ದು, ಇಡೀ ಕಟ್ಟಡ ಯೋಗ್ಯವಲ್ಲದ ಸ್ಥಿತಿ ತಲುಪುತ್ತಿದ್ದಂತೆಯೇ ಸುಮಾರು 1.98 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿಗೆ 2018-19ನೇ ಸಾಲಿನಲ್ಲಿ ಅನುಮೋದನೆ ದೊರೆತು 2020ನೇ ಸಾಲಿನಲ್ಲಿ ಕಾಮಗಾರಿ ಆರಂಭಗೊಂಡಿತು. ಇಲ್ಲಿಯ ತನಕ ಜಿಪಂನ 1 ಕೋಟಿ ಅನುದಾನ, ತಾಪಂನ 78 ಲಕ್ಷ ಅನುದಾನ ಸೇರಿ ಒಟ್ಟು 1.78 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಗುತ್ತಿಗೆದಾರರಿಗೆ ಹಣ ಸಂದಾಯವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಆಮೆ ವೇಗದಲ್ಲಿ ಸಾಗಿದ ಕಾಮಗಾರಿ: ಪತ್ರಿಕೆಗಳಲ್ಲಿ ಕಾಮಗಾರಿ ಅಪೂರ್ಣ ಕುರಿತು ಸುದ್ದಿಯಾದಾಗ ಮಾತ್ರ ಕೊಂಚಕೊಂಚ ಚುರುಕಾದ ಕಾಮಗಾರಿ ಬಳಿಕ ವಿಳಂಬ ನೀತಿ ಅನುಸರಿಸಿ ಹೇಗೋ ಈಗ ಅಂತಿಮ ಘಟ್ಟ ತಲುಪಿದೆ. ಆದರೆ ಪರಿಪೂರ್ಣವಾದ ಕಾಮಗಾರಿಯಾಗಿಲ್ಲ, ಕಾಮಗಾರಿ ಕಳಪೆಯಾಗಿದೆ. ಹಾಗಾಗಿ 3ನೇ ಪಾರ್ಟಿಯಿಂದ ತನಿಖೆ ನಡೆಸಬೇಕು ಅನ್ನುವ ಒತ್ತಾಯ ಇಲಾಖೆ ಮತ್ತು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆರಂಭದಿಂದಲೂ ಇಲ್ಲಿಯ ತನಕ ಅಮೆ ವೇಗದಲ್ಲಿ ಕಾಮಗಾರಿ ಸಾಗುತ್ತಿದೆ.

ಹಣ ಸಂದಾಯವಾದರೂ ಕಾಮಗಾರಿ ಪೂರ್ಣ ಗೊಂಡಿಲ್ಲ: 1.98 ಕೋಟಿ ಅನುದಾನದ ಕಾಮಗಾರಿ ಮೊತ್ತದಲ್ಲಿ 1.78 ಕೋಟಿ ಈಗಾಗಲೇ ಗುತ್ತಿಗೆದಾರರಿಗೆ ಸಂದಾಯವಾಗಿದೆ. ಇನ್ನು 20 ಲಕ್ಷ ಮಾತ್ರ ಬಾಕಿ ಪಾವತಿಸಬೇಕಿದೆ, ಆದರೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಿಲ್ಲ. ಶೌಚಾಲಯದ ಸಂಪರ್ಕ ಕಲ್ಪಿಸಿಲ್ಲ, ಇಡೀ ಕಟ್ಟಡಲ್ಲಿ ವಿದ್ಯುತ್‌ ಸಂಪರ್ಕದ ಪಾಯಿಂಟ್‌ ಗಳನ್ನು ನಿರ್ಮಿಸಿಲ್ಲ, ಇವೆಲ್ಲವನ್ನೂ ಮೀರಿ ಕಟ್ಟಡದ ಮೊಲದ ಅಂತಸ್ತಿನಲ್ಲಿ ತಾಪಂ ಅಧ್ಯಕ್ಷರ ಕೊಠಡಿ ನಿರ್ಮಿಸಬೇಕೆಂಬ ಷರತ್ತಿದ್ದರೂ ಅಧ್ಯಕ್ಷರ ಕೊಠಡಿ ಕಾಮಗಾರಿ ಆರಂಭಿಸಿಯೇ ಇಲ್ಲ.

ತಾಪಂ ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ಕಳೆದ 3 ವರ್ಷಗಳ ಹಿಂದೆ ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡದ ಕಾಮಗಾರಿ ವಿಳಂಬಕ್ಕೆ ನಿಖರವಾದ ಕಾಣರವೂ ತಿಳಿದು ಬಂದಿಲ್ಲ. ಹಣ ಪಡೆದುಕೊಂಡು ನೂತನ ಕಟ್ಟಡದ ಕಾಮಗಾರಿ ವಿಳಂಬಗೊಂಡಿದೆ ಆದರೆ ಇತ್ತ ಓಬಿರಾಯನ ಕಾಳದ ಶಿಥಿಲಾವಸ್ಥೆ ತಾಪಂ ಕಟ್ಟಡದಲ್ಲಿ ಸಿಬ್ಬಂದಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಸಬೇಕಾದ ಅನಿವಾರ್ಯತೆ ಇದೆ. ಕೂಡಲೆ ತಾಲೂಕಿನ ಶಾಸಕರೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಇತ್ತ ಗಮನ ಹರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಳೆಯ ಕಟ್ಟಡದ ಆಡಳಿತ ನೂತನ ಕಟ್ಟಡಕ್ಕೆ ಸ್ಥಳಾಂತರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಶಿಥಿಲ ಕಟ್ಟಡದಿಂದ ಅಪಾಯವಾಗುವುದು ಕಟ್ಟಿಟ್ಟ ಬುತ್ತಿ.

ಹಳೆಯ ತಾಪಂ ಕಟ್ಟಡ ತೀರ ಶಿಥಿಲ ಗೊಂಡಿದೆ. ನೂತನ ಕಟ್ಟಡದ ಕಾಮ  ಗಾರಿಗೆ ಇಲ್ಲಿಯ ತನಕ 1.80 ಕೋಟಿ ಹಣ ಗುತ್ತಿಗೆದಾರರಿಗೆ ಸಂದಾಯ ಮಾಡ ಲಾಗಿದೆ. ಇನ್ನು 20 ಲಕ್ಷ ಬಾಕಿ ಇದ್ದು ಕಾಮಗಾರಿ ಪೂರ್ಣ ಗೊಂಡಿಲ್ಲ. ವಿದ್ಯುತ್‌, ಶೌಚಾಲಯ, ಮೊದಲ ಅಂತಸ್ತಿನ ಕಾಮಗಾರಿ ಬಾಕಿ ಇಳಿದುಕೊಂಡಿದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. -ಜೆರಾಲ್ಡ್‌ ರಾಜೇಶ್‌, ತಾಪಂ, ಕಾರ್ಯನಿರ್ವಹಣಾಧಿಕಾರಿ

– ಎಚ್‌.ಬಿ.ಬಸವರಾಜು.

ಟಾಪ್ ನ್ಯೂಸ್

constellations

ಒಂದೇ ಚಿತ್ರದಲ್ಲಿ 45,000 ನಕ್ಷತ್ರಪುಂಜಗಳು

NCB

2 ದಶಕಗಳಲ್ಲೇ NCB ಬೃಹತ್‌ ಕಾರ್ಯಾಚರಣೆ: ಜಾಲತಾಣವೇ ಡ್ರಗ್ಸ್‌ ಜಾಲ!

July-August : ಭಾರತ ಕ್ರಿಕೆಟ್‌ ತಂಡದ ವಿಂಡೀಸ್‌ ಪ್ರವಾಸ

July-August : ಭಾರತ ಕ್ರಿಕೆಟ್‌ ತಂಡದ ವಿಂಡೀಸ್‌ ಪ್ರವಾಸ

RUSSIA DAM

DAM ಮೇಲೆ ರಷ್ಯಾ ದಾಳಿ? ಉಕ್ರೇನ್‌ಗೆ ಪ್ರವಾಹ ಭೀತಿ

Singapore Open Badminton: ಸಿಂಧು, ಸೈನಾಗೆ ಸೋಲು

Singapore Open Badminton: ಸಿಂಧು, ಸೈನಾಗೆ ಸೋಲು

devegouda

BJP ಜತೆ ಸ್ನೇಹ ಮಾಡದವರು ಯಾರು?: ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆ

congress flag

ಮೇಲ್ಮನೆ 3 ಸ್ಥಾನಗಳಿಗೆ Congress ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ; ಗ್ರಾಮಸ್ಥರಲ್ಲಿ ಆತಂಕ

ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ; ಗ್ರಾಮಸ್ಥರಲ್ಲಿ ಆತಂಕ

5-hunsur

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

ವಿದ್ಯುತ್‌ ದರ ಏರಿಕೆ ಖಂಡಿಸಿ ಪ್ರತಿಭಟನೆ

ವಿದ್ಯುತ್‌ ದರ ಏರಿಕೆ ಖಂಡಿಸಿ ಪ್ರತಿಭಟನೆ

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

constellations

ಒಂದೇ ಚಿತ್ರದಲ್ಲಿ 45,000 ನಕ್ಷತ್ರಪುಂಜಗಳು

NCB

2 ದಶಕಗಳಲ್ಲೇ NCB ಬೃಹತ್‌ ಕಾರ್ಯಾಚರಣೆ: ಜಾಲತಾಣವೇ ಡ್ರಗ್ಸ್‌ ಜಾಲ!

July-August : ಭಾರತ ಕ್ರಿಕೆಟ್‌ ತಂಡದ ವಿಂಡೀಸ್‌ ಪ್ರವಾಸ

July-August : ಭಾರತ ಕ್ರಿಕೆಟ್‌ ತಂಡದ ವಿಂಡೀಸ್‌ ಪ್ರವಾಸ

RUSSIA DAM

DAM ಮೇಲೆ ರಷ್ಯಾ ದಾಳಿ? ಉಕ್ರೇನ್‌ಗೆ ಪ್ರವಾಹ ಭೀತಿ

Singapore Open Badminton: ಸಿಂಧು, ಸೈನಾಗೆ ಸೋಲು

Singapore Open Badminton: ಸಿಂಧು, ಸೈನಾಗೆ ಸೋಲು