ರಾಜಕಾರಣಿಗಳ ಉಚಿತ ಆಫರ್ ನಂಬಬೇಡಿ, ಇದು ಬರೀ ಗಿಮಿಕ್: ಪ್ರತಾಪ ಸಿಂಹ
Team Udayavani, Feb 4, 2023, 3:11 PM IST
ಮೈಸೂರು: ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ‘ಉಚಿತ’ ಆಫರ್ ನೀಡುವುದು ಇತ್ತಿಚಿನ ದಿನಗಳಲ್ಲಿ ಮಾಮೂಲಿ ಎಂಬಂತಾಗಿದೆ. ಈ ಪುಕ್ಕಟೆ ಭರವಸೆಗಳಿಗೆ ಜನರು ಮರುಳಾಗಬಾರದು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಇದೊಂತರ ಕೇಜ್ರಿವಾಲ್ ಮಾಡೆಲ್ ಆಗಿದೆ. ಪುಕ್ಕಟೆ ನೀರು, ಕರೆಂಟ್, ಕುಕ್ಕರ್, ಟಿವಿ, ಭೂಮಿ ಕೊಡುತ್ತೇನೆ ಎಂದು ಡಿಎಂಕೆ ಹಾಗೂ ಕೇಜ್ರಿವಾಲ್ ಬೇರೆ ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಪ್ರತಿ ಮಹಿಳೆಗೂ ಒಂದು-ಎರಡು ಸಾವಿರ ಕೊಡುವುದಾಗಿ ಆಮ್ ಆದ್ಮಿ ಹೇಳಿತ್ತು. ಸರ್ಕಾರ ಬಂದು ಒಂದು ವರ್ಷದ ಮೇಲಾದರೂ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಅವರ ಅಪ್ಪನ ಆಸ್ತಿ ಮಾರಿ ತಂದು ಕೊಡುತ್ತಾರಾ? ಜನರು ಕೊಡೊ ಅಧಿಕಾರ ದುರುಪಯೋಗ ಮಾಡಿಕೊಂಡು ಮಕ್ಕಳು, ಮರಿ ಮಕ್ಕಳಿಗೆ ಆಸ್ತಿ ಮಾಡುತ್ತಾರೆ. ಇವರು ಜನರಿಗೆ ಏನೂ ಕೊಡುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಏನಾದರೂ ಉಚಿತವಾಗಿ ಕೊಡುತ್ತೀನೆಂದರೆ ಸಿದ್ದರಾಮನಹುಂಡಿಗೆ ಹೋಗಿ ದುಡಿದು ತಂದು ನಿಮಗೆ ಕೊಡುವುದಿಲ್ಲ. ಹಾಸನ ಮೂಲದವರು ಚಿನ್ನದ ಆಲೂಗಡ್ಡೆ ಬೆಳೆದು, ಜೋಳ ಬೆಳೆದು ತಂದು ನಿಮಗೆ ಕೊಡುವುದಿಲ್ಲ. ಬಿಜೆಪಿಯವರೇ ಆದರೂ ಅವರ ಮನೆಯಿಂದ ತಂದು ಕೊಡುವುದಿಲ್ಲ. ಅದಕ್ಕೆ ಉಚಿತವಾಗಿ ಕೊಡುತ್ತೇವೆ ಎಂದು ಯಾರೇ ಹೇಳಿದರೂ ನಂಬಬೇಡಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.
ಇದನ್ನೂ ಓದಿ:ವೈರಲ್: ಬುಲ್ಡೋಜರ್ ನಲ್ಲಿ ಬಂದ ಮದುವೆ ದಿಬ್ಬಣ; ವರನ ಕನಸು ಕೊನೆಗೂ ನನಸು.!
ನಿಮ್ಮ ತೆರಿಗೆ ಹಣವನ್ನು ನಿಮಗೇ ಹಂಚುತ್ತೇವೆ ಎಂದು ರಾಜ್ಯ ದಿವಾಳಿ ಮಾಡುತ್ತಾರೆ. ದಯವಿಟ್ಟು ಇಂತಹದಕ್ಕೆ ಯಾರೂ ಸೊಪ್ಪು ಹಾಕಬೇಡಿ. ಇದು ನೂರಕ್ಕೆ ನೂರು ಗಿಮಿಕ್ ರಾಜಕಾರಣ. ಜಗತ್ತಿನಲ್ಲಿ ಯಾವ ರಾಜಕಾರಣಿ ತನ್ನ ಮನೆಯಿಂದು ತಂದು ಕೊಟ್ಟು ಉದಾಹರಣೆ ತೋರಿಸಿ. ತನ್ನ ವೈಯಕ್ತಿಕ ಬದುಕು ಹೆಚ್ಚಿಸಿಕೊಂಡಿದ್ದಾನೆಯೇ ಹೊರತು ಸಮಾಜಕ್ಕಾಗಿ ದುಡಿದಿರುವ ಉದಾಹರಣೆಯೇ ಇಲ್ಲ ಎಂದು ಮೈಸೂರು ಸಂಸದರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ
ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್
ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ…
ಕೋವಿಡ್ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ ಪತ್ತೆ
MUST WATCH
ಹೊಸ ಸೇರ್ಪಡೆ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್
ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?