Elephant Census ಬಂಡೀಪುರದಲ್ಲಿ ಆನೆ ಗಣತಿ ಸಂಪನ್ನ
Team Udayavani, May 25, 2024, 11:05 PM IST
ಮೈಸೂರು/ಚಾಮರಾಜನಗರ: ಜಿಲ್ಲೆಯ ಬಿಆರ್ಟಿ, ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ 3 ದಿನಗಳಿಂದ ನಡೆಯುತ್ತಿದ್ದ ಆನೆ ಗಣತಿ ಪ್ರಕ್ರಿಯೆಯು ಶನಿವಾರ ಸಂಪನ್ನಗೊಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೇ 23-25ರ ವರೆಗೆ 3 ದಿನಗಳ ಕಾಲ ಉದ್ಯಾನದ ಎಲ್ಲ 13 ವಲಯಗಳ ಒಟ್ಟು 113 ಬೀಟ್ಗಳಲ್ಲಿ ಸುಮಾರು 350ರಿಂದ 370 ನೌಕರರು ಆನೆಗಳನ್ನು ಲೆಕ್ಕ ಹಾಕಿದ್ದಾರೆ. ನೌಕರರು ಕಾಲ್ನಡಿಗೆ ಮೂಲಕ, 118 ಟ್ರಾನ್ಸೆಕ್ಟ್ ಲೈನ್, ಕೆರೆ-ಕಟ್ಟೆಗಳು, ಅರಣ್ಯ ವ್ಯಾಪ್ತಿಯಲ್ಲಿ ಆನೆ ಇರುವಿಕೆಯನ್ನು ಗುರುತಿಸಿ ದತ್ತಾಂಶ ಸಂಗ್ರಹಿಸಿದರು.
ಇನ್ನು ಇಲ್ಲಿನ ಬಿಳಿರಂಗನ ಬೆಟ್ಟದ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 6 ವಲಯಗಳಲ್ಲಿ 70 ಹೆಚ್ಚು ಅರಣ್ಯ ಇಲಾಖೆಯ ಸಿಬಂದಿ ತಂಡ ಕೆರೆ-ಕಟ್ಟೆ ಪ್ರದೇಶದ ದೂರದಲ್ಲಿ ಕುಳಿತು ಆನೆಗಳನ್ನು ಗುರುತಿಸುವ ಕೆಲಸ ನಡೆಯಿತು.
ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ 843 ಚ.ಕಿ.ಮೀ. ವಿಸ್ತಾರದ ಉದ್ಯಾನದಲ್ಲಿ 300ಕ್ಕೂ ಹೆಚ್ಚು ಸಿಬಂದಿ 91 ಬೀಟ್ಗಳಲ್ಲಿ ಆನೆ ಗಣತಿ ನಡೆಸಿದರು. 15ಕಿ.ಮೀ. ಕಾಲ್ನಡಿಗೆ. ಆನೆಗಳ ಲದ್ದಿ ಹಾಗೂ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಗುಂಪು ಆನೆಗಳು, ಮಕನಾ (ಗಂಡು) ಆನೆ, ಹೆಣ್ಣಾನೆ ಹಾಗೂ ಮರಿ ಆನೆಗಳ ಫೋಟೋ ಮೂಲಕ ದತ್ತಾಂಶ ಸಂಗ್ರಹಿಸಿದರು. ನಾಗರಹೊಳೆ ಉದ್ಯಾನವು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಬ್ಬಿದ್ದು, ಗಣತಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ
Hunsur: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣು
Renukaswamy Case: ದರ್ಶನ್ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!
Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ
Hunasur: ನಾಗರಹೊಳೆ ಉದ್ಯಾನದಲ್ಲಿ ಐದು ವರ್ಷದ ಹುಲಿ ಕಳೆಬರ ಪತ್ತೆ
MUST WATCH
ಹೊಸ ಸೇರ್ಪಡೆ
VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ
Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ
Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ
NEET ಬೃಹತ್ ಹಗರಣ: ವಿಪಕ್ಷ ಆಕ್ರೋಶ ತೀವ್ರ
Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.