Saraguru; ರೈತನನ್ನು ಓಡಿಸಿಕೊಂಡು ಹೋಗಿ ತುಳಿದು ಹಾಕಿದ ಕಾಡಾನೆ
Team Udayavani, Sep 15, 2023, 1:06 PM IST
ಸರಗೂರು: ಕಾಡಾನೆ ದಾಳಿಯಿಂದ ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸರಗೂರು ತಾಲ್ಲೂಕಿನ ಎಂ.ಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಗುಂಡಿ ಗ್ರಾಮದ ಮಹೇಂದ್ರ 35 ವರ್ಷ ಕಾಡಾನೆ ದಾಳಿಗೆ ಬಲಿಯಾದ ರೈತ.
ಮಹೇಂದ್ರ ಎಂದಿನಂತೆ ಬೆಳಿಗ್ಗೆ ಸುಮಾರು 7 ಸಮಯಕ್ಕೆ ಜಮೀನಲ್ಲಿ ಹತ್ತಿ ಬಿಡಿಸಲು ಅಣ್ಣನ ಜೊತೆಯಲ್ಲಿ ಜಮೀನಿಗೆ ಬಂದಿದ್ದಾರೆ. ಅವರು ಕೆಲಸ ಮಾಡುವ ಸಮಯದಲ್ಲಿ ಕಾಡಾನೆ ದಾಳಿ ಮಾಡಿದೆ. ಮಹೇಂದ್ರ ಹಾಗೂ ಅವರ ಸಹೋದರ ಗಾಬರಿಗೊಂಡು ಜಮೀನಿನಿಂದ ಆನೆಯಿಂದ ತಪ್ಪಿಸಿ ಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಅದರೆ ಮಹೇಂದ್ರ ಅವರನ್ನು ಅರ್ಧ ಕಿಲೋ ಮೀಟರ್ ದೂರ ಓಡಿಸಿಕೊಂಡು ಹೋಗಿ ತುಳಿದು ಹಾಕುತ್ತಿದೆ.
ಇದನ್ನೂ ಓದಿ:Madhya Pradesh; ನಾನು ವಿರಾಟ್, ಸೆಹವಾಗ್ ರಂತೆ, ಭವಿಷ್ಯದ ಬಗ್ಗೆ ಯೋಚಿಸುವವನು..: ಸಿಂಧಿಯಾ
ಎಸಿಎಫ್ ಪರಮೇಶ್, ಸರಗೂರು ವೃತ್ತ ನಿರೀಕ್ಷಕ ಎಂ ಲಕ್ಷ್ಮಿಕಾಂತ್, ಸಬ್ ಇನ್ಸ್ಪೆಕ್ಟರ್ ನಂದೀಶ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ