Rain: ಹುಣಸೂರು ತಾಲೂಕಿನಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ
Team Udayavani, Oct 9, 2023, 4:49 PM IST
ಹುಣಸೂರು: ತಾಲೂಕಿನಾದ್ಯಂತ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕಳೆದ ಕೆಲವು ದಿನಗಳಿಂದ ಬೆಳಗ್ಗೆಯಿಂದಲೇ ಬಿರು ಬಿಸಿಲು ಸಂಜೆ ವೇಳೆ ಬಿಟ್ಟು ಬಿಟ್ಟು ಬರುತ್ತಿದ್ದ ಅಲ್ಪ ಮಳೆಯಿಂದಾಗಿ ತಾಪಮಾನ ಏರಿಕೆಯಾಗಿ ಬಾನುವಾರ 32 ಡಿಗ್ರಿಗೆ ತಲುಪಿತ್ತು.
ಸೋಮವಾರ ಬೆಳಗ್ಗೆ ಮೋಡ ಮುಸುಕಿದ ವಾತಾವರಣ ವಿತ್ತಾದರೂ ನಂತರದಲ್ಲಿ ಬಿಸಿಲು ಜೋರಾಗಿತ್ತು. ಮಧ್ಯಾಹ್ನ ಒಮ್ಮೆಲೆ ಮೋಡ ಕವಿದು ಭಾರಿ ಗುಡುಗು- ಮಿಂಚು ಸಿಡಿಲು ಸಹಿತ ಮಳೆ ಆರಂಭಾಯಿತು.
ಒಮ್ಮೆಲೆ ಮಳೆ ಆರಂಭವಾಗಿದ್ದರಿಂದ ಮನೆಗಳಿಂದ ದಿನಸಿ ಖರೀದಿಸಲು ನಗರಕ್ಕೆ ಆಗಮಿಸಿದವರು ಅಂಗಡಿ ಮುಂದೆ ಆಶ್ರಯ ಪಡೆದರು.
ಇನ್ನು ಸರಕಾರಿ ಶಾಲೆಗಳಿಗೆ ರಜೆ ಇದ್ದುದ್ದರಿಂದ ಹೆಚ್ಚಿನ ಮಕ್ಕಳಿಗೆ ಮನೆಗೆ ತೆರಳಲು ಸಮಸ್ಯೆ ಆಗಿಲ್ಲವಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಪರದಾಡುತ್ತಲೇ ಬಸ್ ನಿಲ್ದಾಣಕ್ಕೆ ತೆರಳಿದರು.
ಯಾವುದೇ ಅನಾಹಿತವಾಗಿರುವ ಬಗ್ಗೆ ಸಂಜೆ ವರೆಗೆ ಮಾಹಿತಿ ಬಂದಿಲ್ಲವೆಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Gaza ಮೇಲೆ ಇಸ್ರೇಲ್ ಸಂಪೂರ್ಣ ದಿಗ್ಬಂಧನ: ಆಹಾರ, ಇಂಧನಕ್ಕೂ ತಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ