ಪ್ರತ್ಯೇಕ ಪ್ರಕರಣ : ಹುಣಸೂರು ನಗರಸಭೆಯ ಅಧಿಕಾರಿಗಳಿಗೆ 20 ಸಾವಿರ ದಂಡ
Team Udayavani, Jun 12, 2022, 11:20 PM IST
ಹುಣಸೂರು : ಮಾಹಿತಿ ಹಕ್ಕು ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಕಾಲದಲ್ಲಿ ಮಾಹಿತಿ ನೀಡದೆ, ಆಯೋಗದ ಆದೇಶವನ್ನು ಪಾಲಿಸದ ಹುಣಸೂರು ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಂದಾಯಾಧಿಕಾರಿಗೆ 20 ಸಾವಿರ ರೂ ದಂಡ ವಿಧಿಸಿದೆ.
ಹುಣಸೂರಿನ ಜೆ.ಬಿ.ಒಬೆದುಲ್ಲಾರವರು ಕಳೆದ ವರ್ಷದ ಫೆಬ್ರವರಿ, ಮಾರ್ಚ್ನಲ್ಲಿ ಹತ್ತು ಮಂದಿಯ ಖಾತೆದಾರರಿಗೆ ಸಂಬಂಧಿಸಿದ ನಮೂನೆ- 3ರಡಿ 2014-17 ರವರೆಗೆ ಶುಲ್ಕ ಪಾವತಿಸಿರುವ ಬಗ್ಗೆ ರಸೀದಿಗಳ ನಕಲು ಕೋರಿದ್ದರು. ದಾಖಲೆ ನೀಡಲು ವಿಫಲವಾಗಿದ್ದರ ವಿರುದ್ದ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಹಾಜರಾದ ಕಂದಾಯಾಧಿಕಾರಿ ಸಿದ್ದರಾಜ್ ತಾವು ಹೊಸಬರಾಗಿದ್ದು, ಮಾಹಿತಿ ನೀಡಲು 15 ದಿನಗಳ ಕಾಲ ಕಾಲಾವಕಾಶ ಕೋರಿದ್ದರು, ಆದರೆ ಕಂದಾಯಾಧಿಕಾರಿ ಮಾಹಿತಿಯನ್ನು ನೀಡದೆ, ಆಯೋಗದ ವಿಚಾರಣೆಗೂ ಹಾಜರಾಗದ್ದನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಕ್ಕೆ ತಲಾ 10 ಸಾವಿರದಂತೆ 20 ಸಾವಿರ ರೂ ದಂಡ ವಿಧಿಸಿ, ದಂಡದ ಹಣವನ್ನು ಜೂನ್ ಮತ್ತು ಜುಲೈ ಮಾಹೆಯ ಸಂಬಳದಲ್ಲಿ ರೂ 10 ಸಾವಿರದಂತೆ ಕಡಿತಗೊಳಿಸಿ ಸರಕಾರಕ್ಕೆ ಜಮಾ ಮಾಡುವಂತೆ ರಾಜ್ಯ ಮಾಹಿತಿ ಆಯುಕ್ತ ಡಾ.ಕೆ.ಇ.ಕುಮಾರಸ್ವಾಮಿಯವರು ಆದೇಶಿಸಿದ್ದು, ಜಮಾ ಮಾಡಿದ ರಸೀದಿಯೊಂದಿಗೆ ಅದರ ಅನುಪಾಲನ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪೌರಾಯುಕ್ತರಿಗೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : ಲಾಡ್ಜ್ ಮೇಲೆ ದಾಳಿ : ಮತದಾರರಿಗೆ ಹಂಚಲು ತಂದಿದ್ದ ನಗದು, ಪ್ರಚಾರ ಸಾಮಗ್ರಿ ವಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ