ಕೆ.ಆರ್‌.ನಗರ: ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ


Team Udayavani, Sep 29, 2020, 12:30 PM IST

Mysuru-tdy-1

ಕೆ.ಆರ್‌.ನಗರ: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಸೋಮವಾರ ಕರೆ ನೀಡಿದ್ದಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೆ, ಸಾರಿಗೆ ಸಂಚಾರ ಸರಾಗವಾಗಿತ್ತು. ಅರ್ಧಕ್ಕಿಂತ ಹೆಚ್ಚು ಅಂಗಡಿಗಳು ವ್ಯಾಪಾರ ವಹಿವಾಟು ನಡೆಸಿದವು.

ರಸ್ತೆ ತಡೆ: ರೈತ ಸಂಘದ ತಾಲೂಕು ಘಟಕ, ಅಖೀಲ ಕರ್ನಾಟಕಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರವೇ, ಜಯ ಕರ್ನಾಟಕ ಸಂಘಟನೆ,ಕಾರ್ಮಿಕ ಸಂಘಟನೆ ಮತ್ತು ತಾಲೂಕು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಗರುಡ ಗಂಭದ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟಿಸಿದರು. ಈ ವೇಳೆ ರಾಜ್ಯ ರೈತ ಸಂಘದ ವಿಭಾಗೀಯಕಾರ್ಯದರ್ಶಿ ಸರ ಗೂರುನಟರಾಜು ಮಾತನಾಡಿ, ಈ ಎರಡು ಕಾಯ್ದೆಗಳು ಬಂಡವಾಳಶಾಹಿ ಮತ್ತು ಕಾರ್ಪೊàರೆಟ್‌ ಕಂಪನಿಗಳಿಗೆ ಅನುಕೂಲ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ ಎಂದರು.

ಕಬ್ಬು ಬೆಳೆಗಾರರ ಸಂಘದ ಪ್ರಧಾನಕಾರ್ಯದರ್ಶಿ ಸುನಯ್‌ಗೌಡ, ಈ ಕಾಯ್ದೆಯನ್ನು ರದ್ದುಪಡಿಸದಿದ್ದರೆ ತಕ್ಕ ಪರಿಣಾಮ ಎದುರಿ ಸಬೇಕಾಗುತ್ತದೆಂದರು. ಪ್ರತಿಭಟನೆಯಲ್ಲಿ ಕೃಷ್ಣ ಮತ್ತು ಕಾವೇರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಪ್ರಕಾಶ್‌, ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕ ಅಧ್ಯಕ್ಷ ಅನಿಲ್‌ಗೌಡ, ದಸಂಸ ಮುಖಂಡಚಂದ್ರು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲೇಶ್‌,ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವರಾಜು, ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಕರವೇ ತಾಲೂಕು ಅಧ್ಯಕ್ಷ ರುದ್ರೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಹದೇವ್‌, ಮುಖಂಡರಾದ ಮಲ್ಲೇಶ್‌, ಮೂರ್ತಿ, ರವೀಂದ್ರ ಇತರರಿದ್ದರು.

ಹೊಸೂರು: ತಾಲೂಕಿನ ಹೊಸೂರು ಗ್ರಾಮದಲ್ಲಿ ರೈತ ಮುಖಂಡರು ಭೂ ಸುಧಾರಣೆ, ಎಪಿಎಂಸಿ ಕಾಯಿದೆಯನ್ನು ವಿರೋಧಿಸಿ ರಸ್ತೆ ತಡೆದು ಪ್ರತಿಭಟಿಸಿದರು.

ಈ ವೇಳೆ ರೈತ ಸಂಘದ ಉಪಾಧ್ಯಕ್ಷ ಲೋಕೇಶ್‌, ಕಾರ್ಯದರ್ಶಿಗಳಾದ ಸುರೇಶ್‌, ಕುಮಾರ್‌, ಮುಖಂಡರಾದ ಸದಾಶಿವ, ಸಣ್ಣತಮ್ಮೇಗೌಡ, ಸುಧಾಕರ, ಈಶ್ವರ, ರೇವಣ್ಣ, ಜಯಣ್ಣ ಇತರರು ಹಾಜರಿದ್ದರು.

 

ಕೋಟೆ: ಪ್ರತಿಭಟನೆಗೆ ಕಾಂಗ್ರೆಸ್‌,ಜೆಡಿಎಸ್‌ ಸಾಥ್‌ :

ಎಚ್‌.ಡಿ.ಕೋಟೆ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಬಂದ್‌ಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದವು.

ಪಟ್ಟಣದ ಅಂಬೇಡ್ಕರ ಸಮುದಾಯಭವನದಿಂದ ಎಚ್‌.ಬಿ.ರಸ್ತೆ ಮಾರ್ಗವಾಗಿ ತೆರಳಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಿನಿವಿಧಾನ ಸೌಧದ ಮುಖ್ಯ ದ್ವಾರದಲ್ಲಿ ಸಮಾವೇಶಗೊಂಡರು.ಈ ವೇಳೆನಡೆದಪ್ರತಿಭಟನೆಗೆ ಕಾಂಗ್ರೆಸ್‌, ಜೆಡಿಎಸ್‌ ಸಾಥ್‌ ನೀಡಿದವು. ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಏಜಾಜ್‌ ಪಾಷ, ಜೆಡಿ ಎಸ್‌ ತಾಲೂಕು ಅಧ್ಯಕ್ಷ ರಾಜೇಂದ್ರ, ಪರಿ ಸರವಾದಿ ಕ್ಷೀರಸಾಗರ್‌ ಮತ್ತಿತರರು ಮಾತನಾಡಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ತುಂಡು ಭೂಮಿಹೊಂದಿರುವ ರೈತರು ತಮ್ಮ ಭೂಮಿ ಕಳೆದು ಕೊಂಡು ಉಳ್ಳವರ ಜೀತದಾಳುಗಳಾಗಿ ದುಡಿಯುವ ಬೇಕಾದ ಸ್ಥಿತಿ ನಿರ್ಮಾಣ ಗೊಳ್ಳುತ್ತದೆ. ಉಳ್ಳವರುಮತ್ತಷ್ಟು ಶ್ರೀಮಂತರಾಗಿಸಲು ಹುನ್ನಾರ ನಡೆಸಿ ಶ್ರೀಮಂತರ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ರಾಜ್ಯವ್ಯಾಪಿ ರೈತರು, ಅಸಂಘಟಿತ ಕೂಲಿಕಾರ್ಮಿಕರು ನಿರಂತರ ಉಗ್ರ ಪ್ರತಿಭಟನೆ ನಡೆಸಿ ಕಾಯ್ದೆಯನ್ನು ಕೈಬಿಡುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಹ ದೇವನಾಯ್ಕ, ದಸಂಸ ಸಂಚಾಲಕ ಶಿವ ಕುಮಾರ್‌, ದೇವರಾಜು, ರಾಜಶೇಖರ್‌, ಬಸವರಾಜು, ಸೋಗಳ್ಳಿ ಶಿವಣ್ಣ, ಜೀವಿಕ ಬಸವರಾಜು, ಅಕ್ಬರ್‌ ಪಾಷ, ದೇವಮ್ಮ, ಚೌಡಳ್ಳಿ ಜವರಯ್ಯ, ನಾಗರಾಜು, ಹೂ. ಕೆ.ಮಹೇಂದ್ರ, ಸೀತಾರಾಂ, ಶಿವರಾಜು, ಜವರನಾಯ್ಕ, ಲಿಂಗರಾಜು, ಶಂಕರ, ಕುಮಾರ,ಪ್ರಸಾದಿ, ಶಿವಯ್ಯ,ಹೆಗ್ಗನೂರು ನಿಂಗರಾಜು, ಭೀಮನಹಳ್ಳಿ ಮಹದೇವು, ಚಾ. ನಂಜುಂಡಮೂರ್ತಿ ಇತರರಿದ್ದರು. ಪಟ್ಟಣದ ವರ್ತಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

Ad

ಟಾಪ್ ನ್ಯೂಸ್

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Rahul-CM-DCM

ನಾಳೆ ರಾಹುಲ್‌ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ

Trump-Musk

ಅಧ್ಯಕ್ಷ ಟ್ರಂಪ್‌ vs ಉದ್ಯಮಿ ಎಲಾನ್‌ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್‌!

Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…

Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD-GDH

ಜೆಡಿಎಸ್‌ ಬಗ್ಗೆ ಜಿ.ಟಿ.ದೇವೇಗೌಡರಿಗೆ ಬೇಸರ ಇರೋದು ಸತ್ಯ: ಪುತ್ರ ಹರೀಶ್‌

17

Hunsur: ಚಿರತೆ ದಾಳಿಗೆ ಹಸು ಗಾಯ

16

Hunsur:ಸಾಲ ತೀರಿಸಲಿಲ್ಲವೆಂದು ಖಾಸಗಿ ಫೈನಾನ್ಸ್‌ನವರಿಂದ ಬೆದರಿಕೆ; ರೈತ ಆತ್ಮಹ*ತ್ಯೆಗೆ ಶರಣು

15

Hunsur: ನಕಲಿ ಉಂಗುರ ಅಡವಿಟ್ಟು 5 ಲಕ್ಷ ಪಂಗನಾಮ; ಓರ್ವ ಬಂಧನ; ಇಬ್ಬರು ಪರಾರಿ

Mysore: Congress will take resignation from Siddaramaiah and send it to Delhi: Vijayendra

Mysore: ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದು ದಿಲ್ಲಿಗೆ ಕಳಿಸುತ್ತಾರೆ: ವಿಜಯೇಂದ್ರ ಭವಿಷ್ಯ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Parameshawar

ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಪ್ರಕ್ರಿಯೆ ನಿರಂತರ: ಡಾ.ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.