ಅಳುತಳುತ ಬಂದೇವಾ ನಗುನಗುತ ಬಾಳೋಣು


Team Udayavani, Oct 5, 2019, 3:01 AM IST

alutaluta

ಮೈಸೂರು: ಮನುಷ್ಯ ಬದುಕಿನಲ್ಲಿ ಹಾಸ್ಯವನ್ನು ಎಂದೂ ಕಳೆದುಕೊಳ್ಳದೇ, ತನ್ನ ಸುತ್ತಲಿನ ಜನ ನಲಿದಾಡುವಂತೆ ಬದುಕು ನಡೆಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಅ.ರಾ. ಮಿತ್ರಾ ಹೇಳಿದರು. ದಸರಾ ಕವಿಗೋಷ್ಠಿ ಉಪಸಮಿತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಕಲವಿಗೋಷ್ಠಿಯಲ್ಲಿ ಮೂರನೇ ದಿನಾವದ ಶುಕ್ರವಾರ ವಿನೋದ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಬದುಕಿನಲ್ಲಿ ಜನರಿಗೆ ಒಳ್ಳೆಯದು ಮಾಡಬೇಕೆಂದರೆ, ಎಲ್ಲರನ್ನೂ ಹಾಸ್ಯದಿಂದ ನಗಿಸುವುದು. ಮನುಷ್ಯನನ್ನು ರೂಪಾಂತರಗೊಳಿಸುವ ದೊಡ್ಡಶಕ್ತಿ ಹಾಸ್ಯಕ್ಕೆ ಇದೆ. ಬೇಂದ್ರೆ ಹೇಳಿದಂತೆ ಅಳುತಳುತ ಬಂದೇವಾ ನಗುನಗುತ ಬಾಳ್ಳೋಣು, ಬಡನೂರು ವರುಷ ಹರುಷರುದಿ ಕಳೆಯೋಣ ಎಂದು ತಮ್ಮದೇ ದಾಟಿಯಲ್ಲಿ ಹಾಸ್ಯ ಚುಟುಕುಗಳ ಮೂಲಕ ಹಾಸ್ಯರಸ ಸ್ಪುರಿಸಿ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು.

ನಮ್ಮ ಹಿರಿಯರು ಹಾಸ್ಯದ ಮೂಲಕ ಮಾತನಾಡುವುದನ್ನು ಹೇಳಿಕೊಟ್ಟಿದ್ದಾರೆ. ಈ ಹಾಸ್ಯ ಎಲ್ಲಾ ವ್ಯಕ್ತಿಯ ಜೀವನದಲ್ಲೂ ಇದೆ. ಅದನ್ನು ನಾವು ಕಂಡುಕೊಳ್ಳಬೇಕು. ಜೊತೆಗೆ ಹಾಸ್ಯ ಎನ್ನುವುದು ನಮ್ಮ ಅಂತರಂಗದಲ್ಲಿ ಹುಟ್ಟಬೇಕೆ ಹರತು, ಸಭೆಗಳಲ್ಲಿ ಅಲ್ಲ.

ಕವಿಗಳು ಅಂತರಂಗದಲ್ಲಿ ಜ್ವಾಲೆ ಇರಿಸಿಕೊಂಡಿರುತ್ತಾರೆ. ಹಾಸ್ಯವೂ ಹಾಗೆಯೇ ಸಿಡಿಯುವ ಸಾಮಗ್ರಿ, ಸಿಡಿಯುವಾಗ ಡೈನಾಮಿಕ್‌ ರೀತಿ ಸಿಡಿಯಬೇಕು. ಹಾಸ್ಯ ಜೀವನಕ್ಕೆ ಪ್ರಯೋಜನಕಾರಿಯಾಗಿರಬೇಕು. ಹಾಸ್ಯ ಕೇಳಿ ಸುತ್ತಮುತ್ತಲಿನ ಜನ ನಲಿದಾಗ ಮಾತ್ರ ಬದುಕು ಸಾರ್ಥಕ. ನಾವು ಬದುಕುವ ವಿಚಾರದಲ್ಲಿ ಹಾಸ್ಯವಿರಬೇಕು ಎಂದು ತಿಳಿಸಿದರು.

ಪ್ರತಿಭೆ ಕಣ್ಣಲ್ಲಿ ಮಿಂಚುತಿರಬೇಕು. ಪ್ರತಿಭೆಗೆ ವಯಸ್ಸಿನ ಮಿತಿಯಲ್ಲ ಎಂದ ಅವರು, ಕವಿಗಳು ಗಂಭೀರವಾಗಿ ಯೋಚಿಸಬೇಕು. ಸಮಾಜವನ್ನು ತಿದ್ದುವುದು ಬೇಡ. ನಿಮ್ಮಷ್ಟಕ್ಕೆ ಶುದ್ದವಾಗಿರಿ. ಹಾಸ್ಯದ ಶೀಲ ಕಳೆದುಕೊಳ್ಳಬೇಡಿ ಎಂದು ಹೇಳಿದರು. ವಯಸ್ಸಾದವರನ್ನು ನಾವು ಹೇಗಿದ್ದೀರಿ ಎಂದು ಕೇಳಿದರೆ, ಅವರು ಹೇಗಿದ್ದೀರಿ ಎಂದು ಕೇಳುವ ಬದಲು ಇನ್ನೂ ಯಾಕಿದ್ದೀರಿ ಎಂದು ಏಕೆ ಕೇಳಲ್ಲ ಎಂಬ ಮರು ಪ್ರಶ್ನೆ ಹಾಕುತ್ತಾರೆ.

ಇದೇ ಮನುಷ್ಯನಲ್ಲಿರುವ ಹಾಸ್ಯ ಪ್ರಜ್ಞೆ. ಹಾಸ್ಯಗಾರರು ನಡೆದಾಡುವ ವೈದ್ಯರಿದ್ದಂತೆ. ಪ್ರತಿಭೆಗಳು ಎಷ್ಟಿದ್ದರೇನು, ಅವು ನಮ್ಮ ಕಣ್ಣೆದುರು ಮಿಂಚಬೇಕು. ಪ್ರತಿ ವ್ಯಕ್ತಿಗೂ ತಾಯಿಯ ಗುಣ, ಭೂಮಿಯ ಋಣದ ಜೊತೆಗೆ ಎಲ್ಲವನ್ನೂ ಸಹಿಸಿಕೊಳ್ಳುವ ಸೈರಣೆಯ ಮನೋವ ಇರಬೇಕು. ಬದುಕಿನಲ್ಲಿ ಹಾಸ್ಯಪ್ರಜ್ಞೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಡಾ.ಚಿಂತಾಮಣಿ ಕೊಡ್ಲೆಕೆರೆ, ಆರತಿ ಘಟಿಕರ್‌, ಶಾಂತಾರಾಮ್‌ ಶೆಟ್ಟಿ, ಧರ್ಮಶ್ರೀ ಅಯ್ಯಂಗಾರ್‌ ತಮ್ಮ ಹಾಸ್ಯ ಕವಿತೆಗಳ ಮೂಲಕ ಪ್ರೇಕ್ಷಕರನ್ನು ನಗಡೆಗಡಲಲ್ಲಿ ತೇಲಿಸಿದರು. ಬಿ.ವಿ.ಪ್ರದೀಪ್‌, ಬಿ.ವಿ.ಪ್ರವೀಣ್‌, ಶಶಿಕಲಾ ಸುನೀಲ್‌ ಮತ್ತು ತಂಡ ಹಾಸ್ಯ ಗೀತೆಗಳ ಮೂಲಕ ರಂಜಿಸಿದರು. ಸಾಹಿತಿ ಸುಬ್ರಾಯ ಚೊಕ್ಕಾಡಿ ವಿನೋದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ನಟ ಮಂಡ್ಯ ರಮೇಶ್‌ ಹಾಗೂ ದಸರಾ ಕವಿಗೋಷ್ಠಿ ಉಪಸಮಿತಿ ಪದಾಧಿಕಾರಿಗಳು ಇದ್ದರು.

ಚುಟುಕು ಸಾಹಿತಿ ದುಂಡಿರಾಜು ಪಂಚ್‌: ಚುಟುಕು ಸಾಹಿತಿ ದುಂಡಿರಾಜು ಮಾತನಾಡಿ, ಬೆಂಗಳೂರು ರಾಜ್ಯದ ರಾಜಧಾನಿಯಾದರೆ, ಮೈಸೂರು ನಮ್ಮ ಸಾಂಸ್ಕೃತಿಕ ರಾಜಧಾನಿ. ಮೈಸೂರು ಹೆಸರುವಾಸಿಯಾಗಿರುವುದು ದಸರೆಗೆ, ಜಂಬೂ ಸವಾರಿಗೆ, ಚಿನ್ನದ ಅಂಬಾರಿಗೆ. ಅದೇ ನಮ್ಮ ಬೆಂಗಳೂರು ಪ್ರಸಿದ್ಧವಾಗಿರುವುದು ಪಬ್ಬಿಗೆ, ಬಾರಿಗೆ ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ದಸರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಈ ಪಂಚ ಕವಿಗೋಷ್ಠಿಯಲ್ಲಿ ನಿಜವಾದ ಪಂಚ್‌ ಇರುವುದು ವಿನೋದ ಕವಿಗೋಷ್ಠಿಯಲ್ಲಿ. ಹಾಸ್ಯ ಕವಿಗೋಷ್ಠಿಯಲ್ಲಿ ನಗಿಸಿದ್ದಕ್ಕೆ ಚಪ್ಪಾಳೆ ತಟ್ಟಿದರೆ, ಗಂಭೀರ ಕವಿಗೋಷ್ಠಿಯಲ್ಲಿ ಮುಗಿಸಿದ್ದಕ್ಕೆ ಚಪ್ಪಾಳೆ ತಟ್ಟುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.