ಚಿರತೆ ದಾಳಿ: ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ


Team Udayavani, Jan 23, 2023, 2:23 PM IST

tdy-13

ತಿ.ನರಸೀಪುರ: ಚಿರತೆ ದಾಳಿಗೆ ತುತ್ತಾದ ಬಾಲಕನ ಸಾವಿನಿಂದ ನೊಂದ ಹೊರಳಹಳ್ಳಿ ಗ್ರಾಮಸ್ಥರು, ತಾಲೂಕು ಕುರುಬರ ಸಂಘದ ಮುಖಂಡರು, ರೈತರು, ದಲಿತ ಸಂಘಟನೆಗಳು ಸೇರಿದಂತೆ ಹಲವಾರು ಮಂದಿ ಜಮಾಯಿಸಿ ಪಟ್ಟಣದ ಕಪಿಲಾ ಮೇಲ್ಸೇತುವೆ ಬಳಿ ಪ್ರತಿಭಟನಾ ಧರಣಿ ನಡೆಸಿದರು.

ತಾಲೂಕಿನಲ್ಲಿ ಚಿರತೆ ದಾಳಿ ಯಿಂದಾಗಿ ನಾಲ್ವರು ಪ್ರಾಣ ತೆತ್ತಿದ್ದಾರೆ. ನಿರಂತರವಾಗಿ ಈ ಘಟನೆಗಳು ನಡೆಯುತ್ತಿದ್ದರೂ ಕೂಡ ಅರಣ್ಯ ಇಲಾಖೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿಲ್ಲ. ಇದರಿಂ ದಾಗಿ ಮತ್ತೆ ಮತ್ತೆ ಈ ಘಟನೆಗಳು ಮರುಕಳಿಸುತ್ತಿದ್ದು ಜನರ ಪ್ರಾಣ ರಕ್ಷಣೆ ಇಲ್ಲವಾಗಿದೆ ಜನಸಾಮಾನ್ಯರು, ಬಡವರು ರೈತರು ತಮ್ಮ ಜಮೀನುಗಳಿಗೆ ತರಲು ಬಹಳಷ್ಟು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡ ಯಾವುದೇ ರೀತಿಯ ಸರಿಯಾದ ಕ್ರಮವನ್ನು ವಹಿಸುತ್ತಿಲ್ಲ. ಸರ್ಕಾರ ಧೋರಣೆ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಜಿಲ್ಲಾಧಿಕಾರಿ ರಾಜೇಂದ್ರ ಪ್ರತಿಭಟನಾಕಾರರ ಮನವಿ ಆಲಿಸಿದರು.

ಈ ವೇಳೆ ಕಾಂಗ್ರೆಸ್‌ ಮುಖಂಡ ಸಂತೃಪ್ತಿ ಕುಮಾರ್‌ ಮಾತನಾಡಿ, ತಾಲೂಕಿನಲ್ಲಿ ಕಳೆದ 3 ತಿಂಗಳಿಂದ ಚಿರತೆ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ. ಮೊದಲ ಪ್ರಕರಣ ಆದ ವೇಳೆ ಕ್ರಮವಹಿಸಲು ನಾವು ಒತ್ತಾಯ ಮಾಡಿದ್ದೆವು. ಆದರೆ ಅರಣ್ಯ ಇಲಾಖೆ ಗಮನಹರಿಸಿಲ್ಲ ಈಗ ನಾಲ್ವರು ಮೃತಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಶಾಸಕ ಅಶ್ವಿ‌ನ್‌ಕುಮಾರ್‌ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೂ ಸರ್ಕಾರ ಸೂಕ್ತ ಗಮನಹರಿಸಿಲ್ಲ. ಅಗತ್ಯ ಸಹಕಾರ ನೀಡಿಲ್ಲ ಇದರ ಫ‌ಲ ಪ್ರತಿಭಟನೆ ಹಂತ ತಲುಪಿದೆ ಎಂದರು.

ಸುಮಾರು ಎರಡು ಗಂಟೆ ಗಳಿಗೂ ಹೆಚ್ಚು ಕಾಲ ನಡೆದ ಪ್ರತಿಭಟನಾ ಧರಣಿ ನಡೆಯಿತು. ಇದರಿಂದಾಗಿ ಮೈಸೂರು, ಚಾಮ ರಾಜನಗರ ಕೊಳ್ಳೇಗಾಲ ಮಂಡ್ಯ ಮತ್ತಿತರ ಕಡೆಗಳಿಗೆ ತೆರಳಲು ಹೊರಟ್ಟಿದ್ದ ಜನರು ಪ್ರತಿಭ ಟನೆಯಿಂದಾಗಿ ಪರದಾಡುವಂತಾಯಿತು.

ಟಾಪ್ ನ್ಯೂಸ್

Jackie Shroff’s wife: 58 ಲಕ್ಷ ರೂ.ವಂಚನೆ; ದೂರು ದಾಖಲಿಸಿದ ಜಾಕಿ ಶ್ರಾಫ್‌ ಪತ್ನಿ ಆಯೀಷಾ

Jackie Shroff’s wife: 58 ಲಕ್ಷ ರೂ.ವಂಚನೆ; ದೂರು ದಾಖಲಿಸಿದ ಜಾಕಿ ಶ್ರಾಫ್‌ ಪತ್ನಿ ಆಯೀಷಾ

1–wqewqe

Train ದುರಂತ; ಶವಾಗಾರವಾಗಿ ಬಳಸಿಕೊಂಡಿದ್ದ ಶಾಲೆ ನೆಲಸಮಗೊಳಿಸಿದ ಸರಕಾರ

Many Feared Trapped As Illegal Coal Mine Collapses Near Dhanbad

ಅಕ್ರಮ ಗಣಿ ಕುಸಿದು ಮೂವರು ಸಾವು; ಗಣಿಯೊಳಗೆ ಸಿಕ್ಕಿಹಾಕಿಕೊಂಡ ಹಲವರು

Shindhe

Sharad Pawar ಅವರಿಗೆ ಬೆದರಿಕೆ; ಗಂಭೀರವಾಗಿ ಪರಿಗಣಿಸಿದ್ದೇವೆ: ಸಿಎಂ ಶಿಂಧೆ

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್‌ ಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

Saudi Arabia ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್‌ ಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

1-wqewqewqe

Hanur ಹೆದ್ದಾರಿಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪಾರು

ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸೂಚನೆ ಸಿಕ್ಕಿದೆ!

ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸೂಚನೆ ಸಿಕ್ಕಿದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಕೆ

ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಕೆ

4-hunsur

HUNSUR: ಜಿಂಕೆಯನ್ನು ಬೇಟೆಯಾಡಿ ಮಾಂಸ ತಿನ್ನುತ್ತಿರುವ ಚಿರತೆ; ವಿಡಿಯೋ

3-hunsur

Tiger cubsಗಳೊಂದಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ ತಾಯಿ ಹುಲಿ; ಪ್ರವಾಸಿಗರು ಪುಲ್ ಖುಷ್

1-adasds

Hunsur; ಅಕ್ರಮ ಮರಳು ಸಾಗಾಟ;ಟಿಪ್ಪರ್‌ ಗಳು ವಶ, ಚಾಲಕರು ಪರಾರಿ

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

Jackie Shroff’s wife: 58 ಲಕ್ಷ ರೂ.ವಂಚನೆ; ದೂರು ದಾಖಲಿಸಿದ ಜಾಕಿ ಶ್ರಾಫ್‌ ಪತ್ನಿ ಆಯೀಷಾ

Jackie Shroff’s wife: 58 ಲಕ್ಷ ರೂ.ವಂಚನೆ; ದೂರು ದಾಖಲಿಸಿದ ಜಾಕಿ ಶ್ರಾಫ್‌ ಪತ್ನಿ ಆಯೀಷಾ

ಜೂ.11-12:ಕಾಪು ಮಾರಿಯಮ್ಮ, ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ

ಜೂ.11-12:ಕಾಪು ಮಾರಿಯಮ್ಮ, ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ

1–wqewqe

Train ದುರಂತ; ಶವಾಗಾರವಾಗಿ ಬಳಸಿಕೊಂಡಿದ್ದ ಶಾಲೆ ನೆಲಸಮಗೊಳಿಸಿದ ಸರಕಾರ

Many Feared Trapped As Illegal Coal Mine Collapses Near Dhanbad

ಅಕ್ರಮ ಗಣಿ ಕುಸಿದು ಮೂವರು ಸಾವು; ಗಣಿಯೊಳಗೆ ಸಿಕ್ಕಿಹಾಕಿಕೊಂಡ ಹಲವರು

Shindhe

Sharad Pawar ಅವರಿಗೆ ಬೆದರಿಕೆ; ಗಂಭೀರವಾಗಿ ಪರಿಗಣಿಸಿದ್ದೇವೆ: ಸಿಎಂ ಶಿಂಧೆ