ಬೇಡಿಕೆ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಆಗ್ರಹ
Team Udayavani, Jul 3, 2021, 8:29 PM IST
ನಂಜನಗೂಡು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಅಸಂಘಟಿತವಲಯದ ಕಟ್ಟಡ ಕಾರ್ಮಿಕರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಯುನೈಟೆಡ್ಯೂನಿ ಯನ್ ಸೆಂಟರ್ನ ಹರೀಶ್ನೇತೃತ್ವದಲ್ಲಿ ನಗರದ ತಾಲೂಕು ಸಮುಚ್ಚಯ ಬಳಿ ಪ್ರತಿಭಟನೆ ನಡೆಸಿದ ಕಾರ್ಮಿಕರು, ಕೋವಿಡ್ ಪರಿಹಾರವಾಗಿ ಸರ್ಕಾರ ಘೋಷಿಸಿರುವ 3ಸಾವಿರ ರೂ. ಯಾವು ದಕ್ಕೂ ಸಾಲುವುದಿಲ್ಲ. ಈ ಮೊತ್ತವನ್ನು 10 ಸಾವಿರ ರೂ.ಗೆ ಏರಿಸಬೇಕು.
ಮೂರು ತಿಂಗಳ ಕಾಲ10 ಸಾವಿರ ರೂ.ಗಳನ್ನು ನಮ್ಮ ಖಾತೆಗೆಜಮೆ ಮಾಡಬೇಕು ಎಂದುಆಗ್ರಹಿಸಿದರು.ಇದೇ ವೇಳೆ ವಿವಿಧ ಬೇಡಿಕೆಗಳಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದಗ್ರೇಡ್-2 ತಹಶೀಲ್ದಾರ ಭೈರಯ್ಯಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿಎಐಯುಟಿಯುಸಿ ನಾಯಕ ಹರೀಶ್,ಸಂಘಟನೆಯ ಹುಲ್ಲಹಳ್ಳಿ ಹೋಬಳಿಯ ಅಧ್ಯಕ್ಷ ಸಿದ್ದಯ್ಯ, ಕುಮಾರ್,ಸುರೇಶ್, ಚೆನ್ನಬಸಪ್ಪ ಮತ್ತಿತರರಿದ್ದರು.