ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ
Team Udayavani, Jun 8, 2023, 10:38 PM IST
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರಾಗಿರುವ, ಕಲಾ ನಿಕಾಯದ ಡೀನ್ ಪ್ರೊ. ಮುಜಾಫರ್ ಅಸ್ಸಾದಿ ಅವರು ಗೋವಾ ವಿಶ್ವವಿದ್ಯಾನಿಲಯದ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ 26 ವರ್ಷಗಳ ನಂತರ ಅವರ ರಾಜೀನಾಮೆ ಅಂಗೀಕಾರವಾಗಿರುವ ಪತ್ರ ಇದೀಗ ಅವರಿಗೆ ಬಂದಿದೆ.
ಪ್ರೊ. ಮುಜಾಫರ್ ಅಸ್ಸಾದಿ 1994 ರಲ್ಲಿ ಮೈಸೂರು ವಿವಿ ಸೇರುವ ಮುನ್ನ 3 ವರ್ಷಗಳ ಕಾಲ ಗೋವಾ ವಿವಿಯಲ್ಲಿದ್ದರು. ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿ ಸೇರಿದರು. ವಿಶ್ವವಿದ್ಯಾನಿಲಯದ ನಿಯಮಾವಳಿಗಳಲ್ಲಿರುವ ಅವಕಾಶವನ್ನು ಬಳಸಿಕೊಂಡು 3 ವರ್ಷಗಳ ನಂತರ ಅಂದರೆ 1997ರಲ್ಲಿ ಗೋವಾ ವಿವಿಯ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ನಂತರ ಮೈಸೂರು ವಿವಿಯಲ್ಲಿ ತಮ್ಮ ಸೇವೆ ಮುಂದುವರಿಸಿದರು. ಪ್ರೊ. ಮುಜಾಫರ್ ಅಸ್ಸಾದಿ ಅಂದು ಗೋವಾ ವಿ ವಿ ಗೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿರುವ ಪತ್ರ ಜೂನ್ 5 ರಂದು ಅವರಿಗೆ ಬಂದಿದೆ.
ಪ್ರೊ. ಮುಜಾಫರ್ ಅಸ್ಸಾದಿ ಅವರೇ ಗುರುವಾರ ಉದಯವಾಣಿಗೆ ಈ ವಿಷಯವನ್ನು ಖಚಿತಪಡಿಸಿದರು.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಎಷ್ಟು ಲೋಪವಿದೆ ಎಂಬುದನ್ನು ಇದು ತೋರಿಸುತ್ತದೆ. ಇದು ಆಧುನಿಕ ತಬರನ ಕಥೆ ಎಂದು ಪ್ರೊ ಅಸ್ಸಾದಿ ಪ್ರತಿಕ್ರಿಯಿಸಿದರು.
ಪ್ರೊ. ಅಸ್ಸಾದಿ ಅವರು ಈ ವರ್ಷ ನಿವೃತ್ತರಾಗಲಿದ್ದಾರೆ. ಪಿಂಚಣಿ ಇತ್ಯರ್ಥಕ್ಕಾಗಿ ಈ ಹಿಂದೆ ಅವರು ಕಾರ್ಯನಿರ್ವಹಿಸಿದ ಗೋವಾ ವಿ ವಿ ಗೆ ಮೈಸೂರು ವಿವಿ ಇತ್ತೀಚೆಗೆ ಪತ್ರ ಬರೆದ ನಂತರ ಗೋವಾ ವಿವಿ ತನ್ನ ಲೋಪದಿಂದ ಎಚ್ಚೆತ್ತು ಕೊಂಡಿದೆ. 1997ರಲ್ಲಿಯೇ ರಾಜೀನಾಮೆ ಪತ್ರ ಅಂಗೀಕರಿಸಲಾಗಿದೆ ಎಂದು ಈಗ ಪ್ರೊ. ಅಸ್ಸಾದಿ ಅವರಿಗೆ ತಿಳಿಸಿದೆ. ಗೋವಾ ವಿ ವಿ ಯಲ್ಲಿ ತಾವು ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ಸೇವಾ ರಿಜಿಸ್ಟರ್ ಕೂಡ ಇನ್ನು ಮೈಸೂರು ವಿ ವಿ ಗೆ ಬಂದಿಲ್ಲ ಎಂದು ಪ್ರೊ. ಮುಜಾಫರ್ ಅಸ್ಸಾದಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ