90ಕ್ಕೂ ಅಧಿಕ 11ಬಿ ಅಕ್ರಮ ಖಾತೆ ಮಾಡಿದ ಪಿಡಿಒ: ಆರೋಪ


Team Udayavani, May 11, 2022, 3:26 PM IST

Untitled-1

ಎಚ್‌.ಡಿ.ಕೋಟೆ: ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದ ಪಂಚಾಯಿತಿಯಿಂದ ಕರ್ತವ್ಯ ವಿಮುಕ್ತಗೊಳಿಸಿ ಆದೇಶ ನೀಡಿದ 15 ದಿನಗಳ ಬಳಿಕ ಪಂಚಾಯಿತಿಗೆ ಹೋಗದೆ ಪಿಡಿಒ ಒಬ್ಬರು ಬೇರೆ ಗ್ರಾಪಂಯಲ್ಲೇ ಕುಳಿತು ಸುಮಾರು 90ಕ್ಕೂ ಅಧಿಕ 11ಬಿ ಅಕ್ರಮವಾಗಿ ಖಾತೆ ಮಾಡಿ ಪ್ರಿಂಟ್‌ ತೆಗೆದಿರುವ ಘಟನೆ ತಾಲೂಕಿನ ಪಡುಕೋಟೆ ಕಾವಲ್‌ ಪಂಚಾಯಿತಿಯಲ್ಲಿ ನಡೆದಿರುವ ಆರೋಪ ಸದಸ್ಯರಿಂದ ಕೇಳಿ ಬಂದಿದೆ.

ಆರೋಪಕ್ಕೆ ಪೂರಕವಾಗಿ ಗ್ರಾಪಂ ಸದಸ್ಯರು ಪಂಚಾಯಿತಿ ಪಿಡಿಒ ವಿಷಕಂಠಾಚಾರಿ ಏ.22ರಂದು ಪಡುಕೋಟೆ ಕಾವಲ್‌ ಗ್ರಾಪಂ ಹೆಚ್ಚುವರಿ ಪಿಡಿಒ ಹುದ್ದೆಯಿಂದ ವಿಮುಕ್ತಿ ಗೊಳಿಸಿ, ಸದರಿ ಜಾಗಕ್ಕೆ ಎಸ್‌.ಅಂಕಪ್ಪ ಅವರನ್ನು ನಿಯೋಜನೆಗೊಳಿಸಿ ಏ.22ರಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಿರುವ ನಕಲು ಹಾಜರು ಪಡಿಸಿದ್ದಾರೆ.

ಏನದು ಘಟನೆ: ಪಡುಕೋಟೆ ಕಾವಲ್‌ ಗ್ರಾಪಂ ಪಿಡಿಒ ಭಾಗ್ಯ ವಿರುದ್ಧ ಗ್ರಾಮಸ್ಥರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆ ಜಾಗಕ್ಕೆ ಸವ್ವೆ ಗ್ರಾಪಂ ಪಿಡಿಒ ವಿಷಕಂಠಾಚಾರ ಅವರನ್ನು ಪ್ರಭಾರವಾಗಿ ನಿಯೋಜಿಸಲಾಗಿತ್ತು. ವಿಷಕಂಠಾಚಾರಿ ಅಲ್ಲಿ ಹಲವು ಅಕ್ರಮಗಳನ್ನು ಮಾಡಿರುವ ದೂರುಗಳು, ಅಕ್ರಮವಾಗಿ 11ಬಿ ದಾಖಲಿಸಲು ಗ್ರಾಮಸ್ಥರಿಂದ 25-30 ಸಾವಿರ ಪಡೆದುಕೊಳ್ಳುತ್ತಿದ್ದರು ಅನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಇಒ ವಿಚಾರಣೆ ಕಾಯ್ದಿರಿಸಿದ್ದು, ಕಳೆದ 15 ದಿನಗಳ ಹಿಂದೆ ವಿಷಕಂಠಾಚಾರಿ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆ ಎಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಕ್ಷಣಮಾತ್ರದಲ್ಲಿ ವಿಷಕಂಠಾಚಾರಿ ಬಚಾವಾಗಿದ್ದರು. ಬಳಿಕ ಸರ್ಕಾರದ ಆದೇಶದಂತೆ ಪಡು ಕೋಟೆ ಕಾವಲ್‌ ಪಂಚಾಯಿತಿಗೆ ಪಿಡಿಒ ಆಗಿ ಎಸ್‌.ಅಂಕಪ್ಪ ಅವರನ್ನು ಏ.22ರಂದು ನಿಯೋಜನೆಗೊಳಿಸಿ ಅದೇ ದಿನದಿಂದ ವಿಷಕಂಠಾಚಾರಿ ಅವರನ್ನು ಪಡುಕೋಟೆ ಯಿಂದ ವಿಮುಕ್ತಿಗೊಳಿಸಿ ಆದೇಶ ನೀಡಲಾಗಿತ್ತು. ವಿ

ಮುಕ್ತಿಗೊಳಿಸಿದ 15 ದಿನಗಳ ಬಳಿಕ ಅಂದರೆ ಮೇ 5, 6 ಮತ್ತು 7ರಂದು ಪಿಡಿಒ ವಿಷಕಂಠಾಚಾರಿ ಪಡುಕೋಟೆ ಕಾವಲ್‌ ಗ್ರಾಪಂಗೆ ಬಾರದೇ ಇದ್ದರೂ ಬೇರಾವುದೋ ಪಂಚಾಯಿತಿಯಲ್ಲಿ ಕುಳಿತು ಅಕ್ರಮವಾಗಿ 90ಕ್ಕೂ ಅಧಿಕ ಅಕ್ರಮ 11ಬಿ ಖಾತೆ ಮಾಡಿ ರುವುದಾಗಿ ಗ್ರಾಪಂ ಸದಸ್ಯರು ಮತ್ತು ಗ್ರಾಮ ಸ್ಥರು ಆರೋಪಿಸಿ ತಾಪಂ ಕಾರ್ಯಾಲಯದ ಬಳಿ ಅಕ್ರಮಗಳ ಖಾತೆಗಳ ದಾಖಲಾತಿ, ಮೇ 5, 6 ಮತ್ತು 7ರಂದು ಪಂಚಾಯಿತಿ ದಿನದ ಹಾಜರಾತಿಯಲ್ಲಿ ಸಹಿಹಾಕದೇ ಗೈರಾಗಿರುವುದು ಮತ್ತು ಪಂಚಾಯಿತಿಯಿಂದ 22ರಂದು ವಿಮುಕ್ತಿಗೊಳಿಸಿರುವ ಪತ್ರಗಳನ್ನು ದಾಖಲೆ ಸಮೇತ ಹಾಜರು ಪಡಿಸಿದ್ದಾರೆ.

ಒಂದೊಂದು ಅಕ್ರಮ ಖಾತೆಗಳಿಗೆ ವಿಷಕಂಠಾಚಾರಿ 30-40 ಸಾವಿರ ಹಣ ಪಡೆದು ಕೊಂಡಿರುವುದಾಗಿ ಆರೋಪಿಸಿರುವ ಪಂಚಾಯಿತಿ ಸದಸ್ಯರು ಕೂಡಲೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗ್ರಾಪಂ ಸದಸ್ಯರಾದ ಈಶ್ವರಯ್ಯ, ನವೀನ್‌ ಕುಮಾರ್‌, ಅಶೋಕ, ದಾಸಪ್ಪ, ಮಹದೇವನ್‌, ದಿವಾಕರ, ಪ್ರವೀಣ್‌, ಗ್ರಾಮಸ್ಥರಾದ ಸುರೇಶ್‌, ಪೃಥ್ವಿ, ಅಂಕಪ್ಪ, ರಮೇಶ, ವೆಂಕಟೇಶ್‌, ಸೀನನಾಯ್ಕ ಇತರರು ಇದ್ದರು.

– ಎಚ್‌.ಬಿ. ಬಸವರಾಜು

ಟಾಪ್ ನ್ಯೂಸ್

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.