ಗುಣಮುಖರಾಗಲು ವಿಶೇಷ ಪೂಜೆ
Team Udayavani, Aug 4, 2020, 8:16 AM IST
ಮೈಸೂರು: ಸಿಎಂ ಯಡಿಯೂರಪ್ಪ ಹಾಗೂ ಸಚಿವ ಅಮಿತ್ ಶಾ ಅವರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಸೇರಿದಂತೆ ರಾಜ್ಯದ ಎಲ್ಲಾ ಸೋಂಕಿತರು ಶೀಘ್ರದಲ್ಲೇ ಗುಣಮುಖವಾಗಲೆಂದು ಯಡಿಯೂರಪ್ಪ ಅಭಿಮಾನಿ ಬಳಗದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸೋಂಕಿತರ ಚೇತರಿಕೆಗೆ ಪ್ರಾರ್ಥಿಸಲಾಯಿತು. ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಜಿ ಗಿರಿಧರ್ ಮಾತನಾಡಿ, ಯಡಿಯೂರಪ್ಪನವರು ಜನಸೇವೆಯೇ ಜನಾರ್ಧನ ಸೇವೆ ಎಂಬುದನ್ನು ಮುಖ್ಯಮಂತ್ರಿ ಯಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅಮಿತ್ ಶಾ ಅವರು ರಾಷ್ಟ್ರದ ರಕ್ಷಣೆ ಮತ್ತು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿ ಸುತ್ತಿದ್ದಾರೆ. ಮಾನಸಿಕ ಸ್ಥೈರ್ಯ, ಆರೋಗ್ಯ ಕಾಳಜಿ ನಮ್ಮಲ್ಲಿದ್ದರೆ, ಯಾವ ರೋಗರುಜಿನ ಬಂದರೂ ವಾಸಿಯಾಗುತ್ತದೆ. ಸೋಂಕಿತರು ಶೀಘ್ರದಲ್ಲೇ ಗುಣಮುಖವಾಗಲೆಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಯಡಿಯೂರಪ್ಪ ಅಭಿಮಾನಿ ಬಳಗದ ಸದಸ್ಯರಾದ ಲಕ್ಷ್ಮೀದೇವಿ, ಯುವ ಮುಖಂಡ ಗೋಕುಲ್ ಗೋವರ್ಧನ್, ಕೇಬಲ್ ಮಹೇಶ್, ವಿಕ್ರಮ್ ಅಯ್ಯಂಗಾರ್, ಬಿಜೆಪಿ ನರಸಿಂಹರಾಜ ಯುವಮೋರ್ಚಾ ಅಧ್ಯಕ್ಷ ಲೋಹಿತ್, ಮಧು.ಎನ್ ಪೂಜಾರ್, ಚಕ್ರಪಾಣಿ, ಶಂಭು ಪಟೇಲ್ ಹಾಜರಿದ್ದರು.