ವರುಣಾದಲ್ಲಿ ಮನೆ ಮಾಡಿದ ವಿಜಯೇಂದ್ರ
Team Udayavani, Apr 10, 2018, 7:00 AM IST
ಮೈಸೂರು: ವರುಣಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು, ಕ್ಷೇತ್ರದಲ್ಲೇ ಮನೆ ಮಾಡಿದ್ದಾರೆ.
ವರುಣಾ ಗ್ರಾಮದ ಸುತ್ತೂರಿಗೆ ಹೋಗುವ ದಾರಿಯಲ್ಲಿರುವ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಎಂಬುವರ ಎರಡು ಅಂತಸ್ತಿನ ಮನೆಯನ್ನು ಬಾಡಿಗೆಗೆ ಪಡೆದಿದ್ದು, 2-3 ದಿನ ಬಿಟ್ಟು ವಾಸ್ತವ್ಯ ಹೂಡಲಿದ್ದೇನೆ ಎಂದರು.