ಅಲೆಮಾರಿ ಮಕ್ಕಳಿಗೊಂದು ಟೆಂಟ್ ಶಾಲೆ
Team Udayavani, Nov 8, 2021, 5:52 PM IST
ಸಿಂಧನೂರು: ನಗರದ ಸುಕಾಲಪೇಟೆಯಲ್ಲಿ ಅಲೆಮಾರಿ ಕುಟುಂಬಗಳು ನೆಲೆಸಿರುವ ಜಾಗದಲ್ಲಿ ಕಳೆದ 6 ತಿಂಗಳ ಹಿಂದೆ ಟೆಂಟ್ ಶಾಲೆ ತೆರೆಯಲಾಗಿದೆ.
ಸಮಾಜ ಸೇವಕ ಸುರೇಶ ಹಚ್ಚೊಳ್ಳಿ, ನಾಗರಾಜ ಬಾದರ್ಲಿ, ಶಂಬಣ್ಣ ಸುಕಾಲಪೇಟೆ, ನಾಗರಾಜ್ ಕವಿತಾಳ ಅವರನ್ನೊಳಗೊಂಡ ಸ್ನೇಹಿತರ ಬಳಗ, ಶಿಕ್ಷಕ ಪ್ರಶಾಂತ್ ದಾನಪ್ಪ ಅವರ ನೆರವಿನೊಂದಿಗೆ ಇಲ್ಲೊಂದು ಶಾಲೆ ತೆರೆಯುವಲ್ಲಿ ಯಶಸ್ಸಿಯಾಗಿದೆ. ಪಾಲಕರು ಕೂಡ ಕೈಜೋಡಿಸಿ ಟೆಂಟ್ ಹಾಕಿಕೊಟ್ಟಿದ್ದು, ಅಲ್ಲಿ ನೆಲಹಾಸು (ಬಂಡೆ) ಹಾಕಿಸಿ ಅಲೆಮಾರಿ ಮಕ್ಕಳ ಶಾಲೆ ಎಂಬ ಫಲಕ ಹಾಕಲಾಗಿದೆ. ನಿತ್ಯ ಸಂಜೆ 5 ಗಂಟೆಯಿಂದ 7 ಗಂಟೆ ತನಕ 53 ಮಕ್ಕಳಿಗೆ ಕಲಿಕೆ ನಡೆಯುತ್ತಿದ್ದು, ಸ್ವಯಂ ಸೇವಕರನ್ನು ಪಾಠಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಮುಖ್ಯವಾಹಿನಿಗೆ ತರುವ ಕನಸು
80ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿದ್ದರೂ ಇಲ್ಲಿನ ಒಬ್ಬ ವಿದ್ಯಾರ್ಥಿ ಮಾತ್ರ ಪಿಯುಸಿ ದಾಟಿದ್ದಾನೆ. 4-5ನೇ ತರಗತಿಗೆ ಕಾಲಿಟ್ಟರೂ ಇಲ್ಲಿನ ಮಕ್ಕಳಿಗೆ ಕನ್ನಡ ಓದಲು ಬರುತ್ತಿಲ್ಲ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಈ ಟೆಂಟ್ ಗೆ ಕರೆ ತರಲಾಗುತ್ತಿದೆ. ಪಾಲಕರ ಮನವೊಲಿಸಿದ ಪರಿಣಾಮ ಅವರು ಕೂಡ ಸಾಥ್ ನೀಡುತ್ತಿದ್ದು, ಟೆಂಟ್ನಲ್ಲಿ ಅಕ್ಷರಾಭ್ಯಾಸ ಮುಂದುವರಿದಿದೆ.
ಇದನ್ನೂ ಓದಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅಪರೂಪದ ರಾಜಕಾರಣಿ: ಶ್ರೀಶೈಲ ಭಗವತ್ಪಾದರು
ಬುಡಕಟ್ಟು, ಅಲೆಮಾರಿ ಕುಟುಂಬದ ಮಕ್ಕಳು ಶಿಕ್ಷಣದ ಮೂಲಕವೇ ಮುಂದೆ ಬರಬೇಕು. ಅವರಲ್ಲಿ ಜಾಗೃತಿ ಮೂಡಿಸಿ ಅಕ್ಷರ ಕಲಿಕೆಗೆ ತರುವ ಉದ್ದೇಶದಿಂದ ಟೆಂಟ್ ನಿರ್ಮಿಸಿ, ಶಾಲೆ ತೆರೆಯಲು ಕೈ ಜೋಡಿಸಿದ್ದು, ಹಲವರ ಸಹಕಾರವಿದೆ. -ಸುರೇಶ ಹಚ್ಚೊಳ್ಳಿ, ಸುಕಾಲಪೇಟೆ
ನಾನಾ ಕಡೆಗಳಲ್ಲಿ ಈ ರೀತಿ ಟೆಂಟ್ ಶಾಲೆಗಳನ್ನು ತೆಗೆದು ಅಲೆಮಾರಿ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುತ್ತಿದ್ದು, ಸಿಂಧನೂರಿನಲ್ಲೂ ಯುವ ಪಡೆಯ ನೆರವಿನಿಂದ ಇದು ಸಾಧ್ಯವಾಗಿದೆ. -ಪ್ರಶಾಂತ ದಾನಪ್ಪ, ಅಲೆಮಾರಿ ಸಂಜೆ ಶಾಲೆ ನಿರ್ದೇಶಕರು, ಮಸ್ಕಿ
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!