ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಿ
Team Udayavani, Feb 26, 2022, 3:18 PM IST
ರಾಯಚೂರು: ನಗರದ ಎಲ್ಬಿಎಸ್ ನಗರದಲ್ಲಿರುವ ರುದ್ರಭೂಮಿ ಸ್ಥಳ ಬಹಳ ಚಿಕ್ಕದಾಗಿದ್ದು, ಸಂಸ್ಕಾರ ಮಾಡಲು ಸಮಸ್ಯೆ ಎದುರಾಗಿದೆ. ಕೂಡಲೇ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡುವಂತೆ ಆಗ್ರಹಿಸಿ ಎಲ್ಬಿಎಸ್ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ರುದ್ರಭೂಮಿಗೆ ನಿಗದಿಪಡಿಸಿದ ಸ್ಥಳ ಮಾತ್ರ ಅಷ್ಟೇ ಇದೆ. ಇಲ್ಲಿ ಮೂರು ಎಕರೆ ಪ್ರದೇಶ ಮುನ್ನೂರುಕಾಪು ಸಮಾಜದವರ ಅಧೀನದಲ್ಲಿದೆ. ಉಳಿದ ಸ್ವಲ್ಪ ಸ್ಥಳದಲ್ಲಿ ಎಲ್ಬಿಎಸ್, ಮೈಲಾರ ನಗರ, ಜಲಾಲ್ ನಗರ, ಕಾಳಿದಾಸ ನಗರ, ಮಡ್ಡಿಪೇಟೆ, ಮಕ್ತಲ್ ಪೇಟೆ, ಸಿಯಾತಲಾಬ್ ಪ್ರದೇಶದಲ್ಲಿ ಜನ ಸಂಸ್ಕಾರ ಮಾಡುತ್ತಾರೆ. ಈ ಪ್ರದೇಶದ ಒಂದು ಎಕರೆಯಲ್ಲಿ ಕಸ ಹಾಕಲಾಗುತ್ತದೆ. ಶೌಚಗೃಹಕ್ಕೆ ಇದೇ ಸ್ಥಳವನ್ನು ಜನರು ಅವಲಂಬಿಸಿದ್ದಾರೆ ಎಂದು ವಿವರಿಸಿದರು.
ಇಕ್ಕಟ್ಟಾದ ಸ್ಥಳದಲ್ಲಿ ಹಿಂದೆ ಶವಸಂಸ್ಕಾರ ಮಾಡಿದ ಸ್ಥಳದಲ್ಲೇ ಮತ್ತೆ ಶವ ಹೂಳುವ ಸ್ಥಿತಿ ಇದೆ. ಹೀಗಾಗಿ ನಗರ ಸಮೀಪದಲ್ಲಿ ಸೂಕ್ತ ಸ್ಥಳ ಗುರುತಿಸಿ ಎಲ್ಬಿಎಸ್ ನಗರ ಸೇರಿ ಸುತ್ತಲಿನ ಜನರಿಗೆ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಿವಾಸಿಗಳಾದ ಶೇಖರ ನರಸಪ್ಪ ನೀಲಗಂಟಿ, ನರಸಿಂಹಲು, ತಿಮ್ಮಣ್ಣ ಯಾದವ್, ನಾಗರಾಜ, ನಬಿಸಾಬ್, ಆರ್, ವೀರೇಶ, ಶರಣಪ್ಪ, ರವಿಕುಮಾರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ