ಬೇಡಿಕೆ ಈಡೇರಿಕೆಗೆ ಒತ್ತಾಯ
Team Udayavani, Mar 3, 2022, 3:30 PM IST
ಲಿಂಗಸುಗೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ ಮುಖಂಡರು ಸಿಡಿಪಿಒಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಿಗೆ ನೀಡುವ ಮೊಟ್ಟೆ ಹಣವನ್ನು ಬಾಲ ವಿಕಾಸ ಸಮಿತಿ ಜಮಾ ಮಾಡಬೇಕು. 2010ರಲ್ಲಿ ಸ್ತ್ರೀಶಕ್ತಿ ಭವನ ಹಾಗೂ 2005ರಲ್ಲಿ ಬಾಲ ಭವನ ಮಂಜೂರಾಗಿದ್ದು, ಈವರಿಗೂ ಕಾಮಗಾರಿ ಆರಂಭವಾಗಿಲ್ಲ. ಕೂಡಲೇ ಕಾಮಗಾರಿ ಆರಂಭಗೊಳಿಸಬೇಕು. ಆಟಿಕೆ ಸಾಮಾನು, ಔಷಧ ಕಿಟ್ಗಳನ್ನು ಇಲಾಖೆಯಿಂದಲೇ ಅಂಗನವಾಡಿ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಅಂಗನವಾಡಿ ಕೇಂದ್ರಗಳ ಬೇಡಿಕೆ ಆಧರಿಸಿ ಸರಿಯಾದ ಪ್ರಮಾಣದಲ್ಲಿ ಗುಣಮಟ್ಟದ ಪಡಿತರ ವಿತರಣೆ ಮಾಡಬೇಕು. ಇಲಾಖೆ ನಿಯಮಾನುಸಾರವಾಗಿ ಮೇಲ್ವಿಚಾರಕಿಯರ ವರ್ಗಾವಣೆ ಮಾಡಬೇಕು ಹಾಗೂ ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಶೇಷಾಖಾದ್ರಿ, ಕಾರ್ಯದರ್ಶಿ ಮಹೇಶ್ವರಿ, ಸರಸ್ವತಿ ರಾಠೊಡ್, ರೇಹಾನಾ ಸುಲ್ತಾನ್, ಹೊಳೆಯಮ್ಮ, ಗೋಪಿಬಾಯಿ, ಶಶಿಕಲಾ, ಶಾಂತಮ್ಮ, ಸುಮಂಗಲಾ ಹಾಗೂ ಇನ್ನಿತರಿದ್ದರು.