ಮಸ್ಕಿ : ಜನಜಂಗುಳಿ ಕಂಡು ಡಿಸಿ ಗರಂ
Team Udayavani, Apr 17, 2021, 12:57 PM IST
ಮಸ್ಕಿ (ರಾಯಚೂರು): ಮಸ್ಕಿ ವಿಧಾನ ಸಭ ಕ್ಷೇತ್ರದ ಹಾಲಾಪುರದಲ್ಲಿ 100 ಮೀಟರ್ ಒಳಗೆ ಜನ ಜಂಗುಳಿ ಇರುವ ಕಾರಣ ಡಿಸಿ ಗರಂ ಆದ ಪ್ರಸಂಗ ನಡೆದಿದೆ.
ಜನರನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಭಾವ ಚಿತ್ರ ಇರುವ ಮತದಾರರ ಚೀಟಿ ಹಂಚುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಸಿ ಸೂಚನೆ ನೀಡಿದರು.
ಮತಗಟ್ಟೆಗೆ ಆಮಗಮಿಸುತ್ತಿದ್ದ ಮತದಾರರಿಗೆ ಕಾಂಗ್ರೆಸ್ ಚಿಹ್ನೆ ಇರುವ ಮತದಾರರ ಚೀಟಿ ಪತ್ತೆಯಾಗಿವೆ. ಡಿಸಿ ವೆಂಕಟೇಶ ಕುಮಾರ ಸೂಚನೆ ಮೇರೆಗೆ ಓರ್ವನ ವಶಕ್ಕೆ ಪಡೆಯಲಾಯಿತು. ಏಕ ಕಾಲಕ್ಕೆ ಮತಗಟ್ಟೆಗೆ ರೀತಿಯಲ್ಲಿ ಮತಗಟ್ಟೆಗೆ ಆಗಮಿಸಿದ್ದರಿಂದ ಕೋವಿಡ್ ನಿಯಮಗಳ ಉಲ್ಲಂಘನೆಯಾಯಿತು.
ಇದೇ ವೇಳೆ ಮಾಸ್ಕ್ ಧರಿಸದೆ ಮತಗಟ್ಟೆ ಕೇಂದ್ರಕ್ಕೆ ಬಂದ ಕಾರಣ ಬಿಎಲ್ಓಗಳಿಗೆ ಎಚ್ಚರಿಕೆ ನೀಡಿದರು.