ದಲಿತರ ಮನೆಯಲ್ಲಿ ಸಚಿವ ಉಪಹಾರ ಸೇವಿಸಿದ ಸಚಿವ ಅಶೋಕ್
Team Udayavani, Oct 16, 2022, 10:16 AM IST
ರಾಯಚೂರು: ಅರಕೇರಾ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಇಂದು ಬೆಳಗ್ಗೆ ದಲಿತ ದೇವಪ್ಪ ಅವರ ಮನೆಯಲ್ಲಿ ಉಪಹಾರ ಸೇವಿಸಿದರು.
ಅರಕೇರಾದ ಬಿಸಿಎಂ ವಸತಿ ನಿಲಯದಲ್ಲಿ ತಂಗಿದ್ದ ಸಚಿವರು, ಬೆಳಗ್ಗೆ ಗ್ರಾಮದಲ್ಲಿ ಸಂಚರಿಸಿ ಜನರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ದಲಿತರ ಮನೆಗೆ ಭೇಟಿ ನೀಡಿದರು. ಅವರ ಮನೆಯಲ್ಲಿ ರೊಟ್ಟಿ, ಚವಳೆಕಾಯಿ ಪಲ್ಲೆ, ಸೇಂಗಾಪುಡಿ, ಮೊಸರು ಊಟ ಮಾಡಿದರು. ಜತೆ ಮಂಡಕ್ಕಿ ಒಗ್ಗರಣೆ ರುಚಿ ಸವಿದರು.
ದೇವದುರ್ಗದ ಅರಕೇರಾದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಆರ್.ಅಶೋಕ್ ವಿಶೇಷ ಗ್ರಾಮಸಭೆ ನಡೆಸಿ, ಕುಂದು ಕೊರತೆಗಳ ಕುರಿತು ಚರ್ಚಿಸಿದರು.
ಅರಕೇರಾದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಾಸ್ತವ್ಯದ ನೆನಪಿಗಾಗಿ ಮಕ್ಕಳೊಂದಿಗೆ ಗಿಡ ನೆಡುವ ಕಾರ್ಯಕ್ರಮ.#ಜಿಲ್ಲಾಧಿಕಾರಿಗಳನಡೆಹಳ್ಳಿಯಕಡೆ #ರಾಯಚೂರು #ಜಿಲ್ಲೆ #ಅರಕೇರಾ #ಗ್ರಾಮ pic.twitter.com/3hqiv4MRf3
— R. Ashoka (ಆರ್. ಅಶೋಕ) (@RAshokaBJP) October 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ