5ಎ ಕಾಲುವೆ ಅನುಷ್ಠಾನಕ್ಕೆ ಧರಣಿ: ಬೀದಿಗಿಳಿದ ರೈತರು, ಮಸ್ಕಿ ಹೆದ್ದಾರಿಗಳೆಲ್ಲಾ ಬಂದ್
Team Udayavani, Jan 9, 2021, 1:28 PM IST
ಮಸ್ಕಿ (ರಾಯಚೂರು): 5ಎ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ 50 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಿರುವ ರೈತರು ಶನಿವಾರ ಮಸ್ಕಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪಾಮನಕಲ್ಲೂರು ಹೋಬಳಿಯಲ್ಲಿ ನಡೆಯುತ್ತಿದ್ದ ಹೋರಾಟ ತಾಲೂಕು ಕೇಂದ್ರದಲ್ಲಿ ನಡೆದಿದ್ದು, ಮಸ್ಕಿ ಬಂದ್ ಗೂ ಕರೆ ನೀಡಲಾಗಿತ್ತು. ಹೀಗಾಗಿ ತಾಲೂಕಿನ ಹಲವು ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ:ತಿಮ್ಲಾಪುರ ಕೆರೆಗೆ ವಾರದಲ್ಲಿ ಹೇಮೆ ನೀರು : ದಶಕಗಳ ಹೋರಾಟಕ್ಕೆ ಸಿಕ್ಕ ಫಲ
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ರೈತರ ಬೃಹತ್ ಪ್ರತಿಭಟನೆ ಮಸ್ಕಿ-ಸಿಂಧನೂರು ಹೆದ್ದಾರಿಯಲ್ಲಿ ಸಾಗಿತು. ಪ್ರತಿಭಟನೆ ರ್ಯಾಲಿಯೂ ಪ್ರವಾಸಿ ಮಂದಿರದಿಂದ ಮಸ್ಕಿ ಹಳ್ಳದ ಸೇತುವೆ ದಾಟುವ ವೇಳೆಗೆ ಎರಡು ತಾಸು ಹಿಡಿಯಿತು.
ಈ ವೇಳೆ ಮಸ್ಕಿ-ಸಿಂಧನೂರು, ಮಸ್ಕಿ-ಲಿಂಗಸೂಗುರು ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಯಿತು.