
ರಾಯಚೂರು ಕೃಷಿ ವಿವಿ ಕೃಷಿಮೇಳ ರದ್ದು
Team Udayavani, Dec 13, 2020, 4:11 PM IST

ರಾಯಚೂರು: ಆರು ಜಿಲ್ಲೆಗಳನ್ನೊಳಗೊಂಡು ಕೃಷಿ ವಿಷಯಾಧಾರಿತವಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಕೃಷಿಮೇಳವನ್ನು ಈ ಬಾರಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕೈಬಿಟ್ಟಿದೆ. ಕೋವಿಡ್-19 ಹಾಗೂ ಅತಿವೃಷ್ಟಿಯಿಂದ ರೈತರಿಗಾದ ಸಮಸ್ಯೆಯಿಂದ ವಿವಿ ನಿರ್ಧಾರಕ್ಕೆಮುಂದಾಗಿದೆ.
ಕೋವಿಡ್-19 ಕಾರಣಕ್ಕೆ ಈ ವರ್ಷ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನುಅದ್ಧೂರಿಯಾಗಿ ಆಚರಿಸುತ್ತಿಲ್ಲ. ಹಾಗಂತಸಾಂಪ್ರದಾಯಿಕ ಆಚರಣೆಗಳನ್ನು ಕೈಬಿಡದೆಸಾಂಕೇತಿಕವಾಗಿಯಾದರೂ ಆಚರಿಸಿ ಕೈ ಬಿಡಲಾಗುತ್ತಿದೆ.
ಕೃಷಿ ವಿವಿ ನಡೆಸಿದ ಸಂಶೋಧನೆ, ರೈತರ ಸಾಧನೆ, ಹೊಸ ತಳಿಗಳ ವೃದ್ಧಿ, ಕೃಷಿಯಲ್ಲಿನ ಪ್ರಯೋಗ ಹೀಗೆ ನಾನಾ ವಿಷಯಾಧಾರಿತವಾಗಿ ಕೃಷಿ ಮೇಳನಡೆಯುತ್ತಿತ್ತು. ಮೂರು ದಿನಗಳ ಈ ಕಾರ್ಯಕ್ರಮ ದೊಡ್ಡ ಜಾತ್ರೆಯಂತೆ ಭಾಸ ವಾಗುತ್ತಿತ್ತು.2019ರಲ್ಲಿನಡೆದ ಮೇಳದಲ್ಲಿ ಆರು ಲಕ್ಷ ಜನ ಭೇಟಿ ನೀಡಿದ್ದರು. ಈ ಬಾರಿ ಕೋವಿಡ್-19 ಭೀತಿ ಇನ್ನೂ ಇರುವ ಕಾರಣ ವಿವಿ ಈ ಮೇಳವನ್ನೇ ಕೈ ಬಿಟ್ಟಿದೆ.
ಯಶ ಕಾಣದ ಆನ್ಲೈನ್ ಮೇಳ: ಲಾಕ್ಡೌನ್ ವೇಳೆ ಆನ್ಲೈನ್ ವ್ಯವಹಾರ ಜೋರಾಗಿದೆ. ಅದರ ಭಾಗವಾಗಿಯೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆನ್ಲೈನ್ನಲ್ಲಿ ಕೃಷಿ ಮೇಳ ಮಾಡಿತು. ಆದರೆ ಅದುನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ ಎನ್ನಲಾಗುತ್ತಿದೆ.ಕೃಷಿ ವಿವಿ ರೈತರ ದೃಷ್ಟಿಯನ್ನಿಟ್ಟುಕೊಂಡೇ ನಡೆಯುವಸಂಸ್ಥೆಯಾಗಿದ್ದು, ಆನ್ಲೈನ್ನಲ್ಲಿ ಮೇಳ ನಡೆಸಿದರೆಅನಕ್ಷರಸ್ಥ ರೈತರಿಗೆ ತಲುಪುವುದು ಕಷ್ಟವಾಗಲಿದೆ. ಈಕಾರಣಕ್ಕೆ ರಾಯಚೂರು ಕೃಷಿ ವಿವಿ ಮೇಳ ಆಚರಣೆ ಕೈ ಬಿಟ್ಟಿದೆ. ಇದೇ ಮೊದಲಲ್ಲ, ಎರಡು ವರ್ಷದಹಿಂದೆ ಜಿಲ್ಲೆ ಭೀಕರ ಬರಕ್ಕೆ ತುತ್ತಾದಾಗಲೂ ಮೇಳ ಕೈಬಿಡಲಾಗಿತ್ತು.
40 ಲಕ್ಷಕ್ಕೂ ಅಧಿಕ ವಹಿವಾಟು: ಒಂದು ಕೃಷಿ ಮೇಳಕನಿಷ್ಠ ಏನಿಲ್ಲವೆಂದರೂ 40 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುತ್ತದೆ. ವಾಣಿಜ್ಯ ಉದ್ದೇಶದಿಂದ ಸಾಕಷ್ಟುಕಂಪನಿಗಳು ಮಳಿಗೆ ಬಾಡಿಗೆ ಪಡೆದಿರುತ್ತವೆ. ಅದರಜತೆಗೆ ಮನರಂಜನೆ, ಗೃಹೋಪಯೋಗಿ ವಸ್ತುಗಳಮಾರಾಟ ಸೇರಿದಂತೆ ಮೇಳ ಅಕ್ಷರಶಃ ಜಾತ್ರೆಯಂತೆನಡೆಯುತ್ತದೆ. ಕಳೆದ ಬಾರಿ ನಡೆದ ಮೇಳದಲ್ಲಿ ಬೀದಿಯಲ್ಲಿ ವ್ಯಾಪಾರ ನಡೆಸಿದ ವರ್ತಕರಿಂದ ಶುಲ್ಕ ಪಡೆಯಲಾಗಿತ್ತು. ಅದೇ ಹಣ 4-5 ಲಕ್ಷ ರೂ.ವರೆಗೆ ಸಂಗ್ರಹವಾಗಿತ್ತು ಎನ್ನುತ್ತವೆ ಮೂಲಗಳು.
ಕೋವಿಡ್-19 ಹಾಗೂ ಅತಿವೃಷ್ಟಿ ಕಾರಣಕ್ಕೆ ಈ ಬಾರಿ ಕೃಷಿ ಮೇಳ ಕೈ ಬಿಡಲಾಗಿದೆ. ಅತಿವೃಷ್ಟಿಯಿಂದ ರೈತರು ಸಾಕಷ್ಟು ಪಾಲ್ಗೊಳ್ಳುವುದು ಹೆಚ್ಚು. ಅಲ್ಲದೇ ಕೋವಿಡ್-ವೈರಸ್ ಕಾರಣಕ್ಕೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ಕಷ್ಟ. ಹೀಗಾಗಿ ಆಚರಣೆ ಕೈ ಬಿಡಲಾಗಿದೆ. -ಡಾ| ಕೆ.ಎನ್. ಕಟ್ಟಿಮನಿ, ಕುಲಪತಿ ಕೃಷಿ ವಿವಿ , ರಾಯಚೂರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು

Maski ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ಪ್ರಕರಣ: ಪಿಎಸ್ ಐ ಮಣಿಕಂಠ ಅಮಾನತು

ಮೈತ್ರಿ ವಿಚಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ಬದ್ಧ: ಜೆಡಿಎಸ್ ಶಾಸಕಿ ಜಿ. ಕರೆಮ್ಮ ನಾಯಕ

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

Cauvery ವಿಚಾರದಲ್ಲಿ ಸಿಎಂ ಕಠಿಣ ನಿಲುವಿಗೆ ಬೆಂಬಲ: ಮಧು ಬಂಗಾರಪ್ಪ
MUST WATCH
ಹೊಸ ಸೇರ್ಪಡೆ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು