ರಾಯಚೂರು: ಮಾಜಿ ಸಚಿವ ಸುಧೀಂದ್ರ ರಾವ್ ಕಸಬೆ ನಿಧನ
Team Udayavani, Oct 23, 2022, 10:25 PM IST
ರಾಯಚೂರು: ಕಲ್ಮಲಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸುಧೀಂದ್ರ ರಾವ್ ಕಸಬೆ ಅವರು ಶನಿವಾರ ರಾತ್ರಿ ಗಿಲ್ಲೆಸುಗೂರಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 1978ರಲ್ಲಿ ಜಿಲ್ಲೆಯ ಕಲ್ಮಲಾ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. 1980ರಲ್ಲಿ ಗುಂಡೂರಾವ್ ಸಂಪುಟದಲ್ಲಿ ಮುಜರಾಯಿ ಮತ್ತು ಕೃಷಿ ಮಾರುಕಟ್ಟೆ ಖಾತೆ ಸಚಿವರಾಗಿದ್ದರು. 1983ರಲ್ಲಿ ಕಲ್ಮಲಾ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು.
ನನ್ನ ತಂದೆ ದಿ.R.ಗುಂಡೂರಾವ್ ಒಡನಾಡಿ ಹಾಗೂ ನಮ್ಮ ಕುಟುಂಬದ ಅತ್ಯಾಪ್ತರಲ್ಲಿ ಒಬ್ಬರಾಗಿದ್ದ ಶ್ರೀ ಸುಧೀಂದ್ರ ರಾವ್ ಕಸಬೆ ನಮ್ಮನ್ನು ಅಗಲಿದ್ದಾರೆ.
ನನ್ನ ತಂದೆಯವರ ಸಂಪುಟದಲ್ಲಿ ಮುಜರಾಯಿ ಸಚಿವರಾಗಿದ್ದ ಕಸಬೆಯವರು ದಕ್ಷ ಮಂತ್ರಿಯಾಗಿದ್ದರು.
ಸುಧೀಂದ್ರ ರಾವ್ ಕುಟುಂಬದ ಶೋಕದಲ್ಲಿ ನಾನೂ ಭಾಗಿ.
ಮೃತರ ಆತ್ಮಕ್ಕೆ ಸದ್ಗತಿ ಬೇಡುತ್ತೇನೆ. pic.twitter.com/j370CabGW6— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 23, 2022