ಸೈನಿಕನ ತಾಯಿ ಹತ್ಯೆ: ಕ್ರಮಕ್ಕೆ ಆಗ್ರಹ
Team Udayavani, Feb 24, 2022, 12:57 PM IST
ಲಿಂಗಸುಗೂರು: ತಾಲೂಕಿನ ನಿಲೋಗಲ್ ಗ್ರಾಮದ ಬಿಎಸ್ಎಫ್ ಯೋಧ ಅಮರೇಶ ಮೇಲೆ ಹಲ್ಲೆ ಮಾಡಿ ಮತ್ತು ಅವರ ತಾಯಿಯನ್ನು ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ಮಾಜಿ ಯೋಧರ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ನಿಲೋಗಲ್ ಗ್ರಾಮದಲ್ಲಿ ಭಾರತೀಯ ಅರೆಸೇನಾ ಪಡೆಯ ಸೇವಾ ನಿರತ ಯೋಧ ಅಮರೇಶ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮತ್ತು ಅವರ ತಾಯಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದು ಖಂಡನೀಯ. ದೇಶದ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹತ್ಯೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಯೋಧರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಸುಂದರ್ಸಿಂಗ್, ವೀರನಗೌಡ ಪಾಟೀಲ್ ಬಯ್ನಾಪುರ, ಇಂದ್ರಜೀತ್ ಸಿಂಗ್, ವಿರುಪಾಕ್ಷಯ್ಯ ಹಿರೇಮಠ, ದೊಡ್ಡಪ್ಪ ನಾಯಕ, ಮಲ್ಲಿಕಾರ್ಜುನ, ದೊಡ್ಡಪ್ಪ ವಾಲ್ಮೀಕಿ, ಜಾಫರ್, ವಿರುಪಾಕ್ಷ, ಹುಸೇನಸಾಬ, ಅಮರೇಗೌಡ ಹಾಗೂ ಇನ್ನಿತರಿದ್ದರು.