ರಾತ್ರಿಯಿಡೀ ಹಾರಿದ ರಾಷ್ಟ್ರಧ್ವಜ; ಗ್ರಾಪಂ ಸಿಬ್ಬಂದಿ ಅಮಾನತು
Team Udayavani, Feb 22, 2022, 11:37 AM IST
ಲಿಂಗಸುಗೂರು: ಮಾವಿನಭಾವಿ ಗ್ರಾಪಂ ಕಚೇರಿ ಎದುರು ಬೆಳಗ್ಗೆ ಏರಿಸಿದ್ದ ರಾಷ್ಟ್ರಧ್ವಜ ಸಂಜೆಯೂ ಇಳಿಸದೇ ರಾತ್ರಿಯಿಡೀ ಬಿಟ್ಟಿದ್ದರಿಂದ ಕರ್ತವ್ಯ ಲೋಪದಡಿ ಗ್ರಾಪಂ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಗ್ರಾಪಂ ಕಚೇರಿ ಎದುರು ಪ್ರತಿದಿನ ರಾಷ್ಟ್ರ ಧ್ವಜ ಏರಿಸುವುದು ಹಾಗೂ ಇಳಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ರವಿವಾರ ಧ್ವಜ ಏರಿಸಿದ ನಂತರ ರಾತ್ರಿಯಾದರೂ ಇಳಿಸದೇ ಕರ್ತವ್ಯ ಲೋಪವೆಸಗಿದ ಗ್ರಾಪಂ ಸಿಬ್ಬಂದಿ ಹುಸೇನಪ್ಪ ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ನಿರ್ಧಾರದಿಂದ ಪಿಡಿಒ ಅವರು ಹುಸೇನಪ್ಪ ಅವರನ್ನು ಅಮಾನತು ಮಾಡಿದ್ದಾರೆ.