ಅಕ್ರಮ ಖಾತೆ ಆರೋಪ: ತಹಶೀಲ್ದಾರ್‌ರಿಗೆ ದೂರು


Team Udayavani, Feb 8, 2023, 3:54 PM IST

tdy-17

ಚನ್ನಪಟ್ಟಣ: ತಾಲೂಕಿನ ಮುದಗೆರೆ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್‌ 118-1ರಲ್ಲಿಯ ಎರಡು ಗುಂಟೆ ಹಾಗೂ ಮೂಲ ಖಾತೆದಾರರ ಸುಮಾರು 7ಗುಂಟೆ ಜಮೀನನ್ನು ಅಕ್ರಮವಾಗಿ ವ್ಯಕ್ತಿಯೊಬ್ಬರು ಖಾತೆ ಮಾಡಿಕೊಂಡಿದ್ದು, ಅವರ ಖಾತೆಯನ್ನು ವಜಾ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ರಿಗೆ ತಾಲೂಕು ರೈತ ಸಂಘದ ಮೂಲಕ ನೊಂದವರು ಮನವಿ ಮಾಡಿದ್ದಾರೆ.

ದೂರು: ಗ್ರಾಮದ ಲೇಟ್‌ ಎಂ.ಪುಟ್ಟೇಗೌಡರ ಪುತ್ರ ಎಂ.ಎಸ್‌.ನಡಕೇರಿಗೌಡ, ಎಂ.ಎನ್‌. ಜಗದೀಶ್‌, ರಂಗನಾಥ್‌ ಎಂಬವರಿಗೆ ಸೇರಿದ ಎರಡು ಗುಂಟೆ ಪಿತ್ರಾರ್ಜಿತ ಜಮೀನನ್ನು ಇದೇ ಗ್ರಾಮದ ಲೇಟ್‌ ಚಿಕೈದೇಗೌಡ ಎಂಬವರ ಪುತ್ರ ನಡಕೇರಿಗೌಡ ಎಂಬವರು ತಮಗೆ ಸೇರಿದ ಜಮೀನಿನ ಜತೆಯಲ್ಲಿಯೇ ಅನುಭವದಲ್ಲಿರುವ 2ಗುಂಟೆ ಜಮೀನನ್ನು ಸೇರಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆಂದು ಗಂಭೀರವಾಗಿ ಆರೋಪಿಸಿದರು. ಕಳೆದ 2016-17ರಲ್ಲಿಯೇ ನಕಲಿ ದಾಖಲೆ ಸೃಷ್ಟಿಸಿಕೊಂಡು ಹಾಗೂ ಅಂದಿನ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗರನ್ನು ಬಳಸಿ ಅಕ್ರಮವೆಸಗಿದ್ದಾರೆಂದು ದೂರಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎರಡುಗುಂಟೆ ಜಮೀನಿನ ವಾರಸುದಾರ ಎಂ.ಎನ್‌. ಜಗದೀಶ್‌ ಸಂಬಂಧಿಸಿದ ಜಮೀನಿನ ಸರ್ವೆ ಮಾಡುವಾಗ ಅಜುಬಾಜಿನವರಿಗೆ ಯಾವುದೇ ಮಾಹಿತಿ ನೀಡದ ಅಧಿಕಾರಿಗಳು, ಸರ್ವೆ ಮಾಡಿದ್ದಾರೆ. ಅಲ್ಲದೆ ಅಜುಬಾಜಿನವರು ಎಂದು ಬೇರೆ ಗ್ರಾಮದ ಜನರಿಂದ ಸಹಿ ಪಡೆದಿದ್ದು ಅಕ್ರಮಖಾತೆ ಆಗಿದೆ ಎಂದರು.

ಮೇಲ್ಮೋಟಕ್ಕೆ ಕಂಡು ಬಂದಿದೆ: ತಹಶೀಲ್ದಾರ್‌ ಮಹೇಂದ್ರ ಮಾತನಾಡಿ, ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಸಮರ್ಪಕವಾಗಿಯೇ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಸಂಬಂಧಿಸಿದ ಖಾತೆ ಮಾಡುವಾಗ ಮೂಲ ದಾಖಲೆ ಪರಿಶೀಲನೆ ಮಾಡಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಎಸಿ ಅವರು ಆದೇಶಕ್ಕೆ ಅನುಗುಣವಾಗಿ ಖಾತೆಯಾಗಿದೆ. ನಾವು ಖಾತೆಯನ್ನು ವಜಾ ಮಾಡಲು ಬರುವುದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಸಂಬಂಧಿಸಿದ ಮೂಲ ದಾಖಲೆ ಪರಿಶೀಲನೆ ನಡೆಸಿ ಹಾಗೂ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತ ಮುಖಂಡರಾದ ಅಣ್ಣಿಗೆರೆ ಮಲವೇಗೌಡ, ರಾಜು, ಕನ್ನಸಂದ್ರ, ಸಂತೋಷ್‌, ಜಯಕುಮಾರ್‌, ಎಂ.ಎನ್‌. ಸುರೇಶ್‌, ಕನ್ನಸಂದ್ರ ಅರ್ಕೇಶ್‌, ಹೋಟೆಲ್‌ ದೇವರಾಜು, ಶಿಕ್ಷಕ ರಂಗನಾಥ್‌, ದೀಪಕ್‌, ಸತೀಶ್‌, ಕೆಂಪೇಗೌಡ, ಹನಿ ಹಾಗೂ ಹಲವಾರು ಮುಖಂಡರು ಇದ್ದರು.

ಟಾಪ್ ನ್ಯೂಸ್

accuident

ರಿವರ್ಸ್‌ ತೆಗೆಯುವಾಗ ಕಾರು ಪಲ್ಟಿ

police siren

ಅಬಕಾರಿ ಇಲಾಖೆಯಿಂದ ದಾಳಿ – ಜಪ್ತಿ

fire

ರಬ್ಬರ್‌ ತೋಟದಲ್ಲಿ ಬೆಂಕಿ ಆಕಸ್ಮಿಕ

accident 2

ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಪಲ್ಟಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-9

ತಾಲೂಕು ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆ

tdy-15

ರೈತರಿಗೆ ಬೆಳಗ್ಗೆ ನಾಯಿ, ರಾತ್ರಿ ಚಿರತೆ ಕಾಟ

TDY-13

ದೇವರ ಮೊರೆ ಹೋದ ದಳಪತಿ-ಸೈನಿಕ

tdy-12

ಇತಿಹಾಸ ಅವಿತಿಟ್ಟು ಕೊಂಡಿರುವ ಹ್ಯಾಡಾಳ

TDY-12

ಡಬಲ್‌ ಎಂಜಿನ್‌ ಸರ್ಕಾರದಿಂದ ದೇಶ ಅಭಿವೃದ್ಧಿ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

accuident

ರಿವರ್ಸ್‌ ತೆಗೆಯುವಾಗ ಕಾರು ಪಲ್ಟಿ

police siren

ಅಬಕಾರಿ ಇಲಾಖೆಯಿಂದ ದಾಳಿ – ಜಪ್ತಿ

fire

ರಬ್ಬರ್‌ ತೋಟದಲ್ಲಿ ಬೆಂಕಿ ಆಕಸ್ಮಿಕ

accident 2

ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಪಲ್ಟಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.