ತುರ್ತು ಪರಿಸ್ಥಿತಿ ವಿರುದ್ದದ ಹೋರಾಟಗಾರರಿಗೆ ಸನ್ಮಾನ
Team Udayavani, Jun 27, 2021, 10:21 PM IST
ರಾಮನಗರ: 1975ರಲ್ಲಿ ಜಾರಿಯಲ್ಲಿದ್ದ ತುರ್ತುಪರಿಸ್ಥಿತಿಯನ್ನುವಿರೋಧಿಸಿ ಜೈಲು ಸೇರಿದ್ದ ಜಿಲ್ಲೆಯ ಮೂವರು ನಾಗರಿಕರನ್ನುಜಿಲ್ಲಾ ಬಿಜೆಪಿಯಿಂದ ಸನ್ಮಾನಿಸಲಾಯಿತು.
ಅಂದಿನ ಪ್ರಧಾನಿಇಂದಿರಾಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ನಾಗರೀಕರ ಹಕ್ಕುಗಳನ್ನು ಮೊಟಕುಗೊಳಿಸಿದ್ದರು.
ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರು ತಂದ ಕಳಂಕಎಂದು ಆರೊಪಿಸಿರುವ ಬಿಜೆಪಿ, ಅಂದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸಲು ಮುಂದಾದವರನ್ನು ಇಂದಿರಾ ಗಾಂಧಿಯವರು ಜೈಲಿಗೆ ತಳ್ಳಿದ್ದರು ಎಂದು ಆರೋಪಿಸಿದೆ.ಚನ್ನಪಟ್ಟಣದ ಅ.ರಾಮಚಂದ್ರ, ಬಸವರಾಜಯ್ಯ, ಮಾಗಡಿಯಆಂಜನೇಯ ಗುಪ್ತ ಅವರನ್ನು ಅವರ ಮನೆಗಳಿಗೆ ತೆರಳಿ ಬಿಜೆಪಿಪದಾಧಿಕಾರಿಗಳು ಸನ್ಮಾನಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಬಿಜೆಪಿಮತ್ತು ಆಯಾ ತಾಲೂಕು ಬಿಜೆಪಿ ಪದಾಧಿಕಾರಿಗಳಾದರುದ್ರದೇವರು, ಕೆ.ಟಿ.ಜಯರಾಮ್, ಸಂತೋಷ್, ಸಿದ್ದರಾಮು,ಚಂದ್ರಶೇಖರ್ ರೆಡ್ಡಿ,ಕೃಷ್ಣಪ್ಪ, ರಾಜೇಶ್ ಹಾಜರಿದ್ದರು.